ವಿರೋಧ ಪಕ್ಷದ ಕಾಂಗ್ರೆಸ್ ಒತ್ತಡದ ನಡುವೆ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ನೇತೃತ್ವದ ಸರ್ಕಾರವು ಸರ್ಕಾರಿ ನೇಮಕಾತಿ ಮತ್ತು ಪರೀಕ್ಷೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (OBC) ಶೇಕಡಾ 27 ರಷ್ಟು ಮೀಸಲಾತಿಯನ್ನು ನೀಡಿದೆ.
ಈ ನಿರ್ಧಾರವು ಕಳೆದ ಗುರುವಾರ ಬಂದಿತು, ಇದರ ನಂತರ ಈ ಕುರಿತಾಗಿ ಸಾಮಾನ್ಯ ಆಡಳಿತ ವಿಭಾಗವು (GAD) ಈ ಆದೇಶವನ್ನು ಹೊರಡಿಸಿತು, ನಿಷೇಧಗೊಂಡಿರುವ ಪರೀಕ್ಷೆಗಳು ಮತ್ತು ನೇಮಕಾತಿಗಳನ್ನು ಈ ಆದೇಶದಲ್ಲಿ ಸೇರಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಹೈಕೋರ್ಟ್ನಲ್ಲಿ ಬಾಕಿ ಇರುವ ಮೀಸಲಾತಿ ಸಮಸ್ಯೆಗಳ ಪ್ರಕರಣಗಳಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಸ್ನಾತಕೋತ್ತರ), ವೈದ್ಯಕೀಯ ಅಧಿಕಾರಿಗಳ ನೇಮಕಾತಿ, ಸಾರ್ವಜನಿಕ ಸೇವಾ ಆಯೋಗ ಮತ್ತು ಶಿಕ್ಷಕರ ನೇಮಕಾತಿ ಸೇರಿವೆ. ಸೆಪ್ಟೆಂಬರ್ 20 ರಂದು ಅಂತಿಮ ವಿಚಾರಣೆಗೆ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿದೆ.
ಜಿಎಡಿ ಆದೇಶ ಜಾರಿಯಾಗುವುದರೊಂದಿಗೆ, 64 ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷ ನೇಮಕಾತಿ ಸಾಧ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಆಗಸ್ಟ್ 25 ರಂದು, ಅಡ್ವೋಕೇಟ್ ಜನರಲ್ ಪುರುಷೇಂದ್ರ ಕೌರವ್ ಜಿಎಡಿಗೆ ಕಾನೂನು ಅಭಿಪ್ರಾಯವನ್ನು ರವಾನಿಸಿದರು, ಹೈಕೋರ್ಟ್ ನಿಷೇಧದ ಅಡಿಯಲ್ಲಿ ಇರಿಸಲಾಗಿರುವ ಪರೀಕ್ಷೆಗಳನ್ನು ಹೊರತುಪಡಿಸಿ, ನೇಮಕಾತಿಗಳನ್ನು ಶೇಕಡಾ 27 ರಷ್ಟು ಒಬಿಸಿ ಕೋಟಾ ವ್ಯಾಪ್ತಿಗೆ ಒಳಪಡಿಸಬಹುದು ಎಂದು ಹೇಳಲಾಗಿದೆ. ಕುತುಹಲದ ಅಂಶವೇನೆಂದರೆ ನ್ಯಾಯಾಲಯವು ಈ ಆದೇಶವನ್ನು ರದ್ದುಗೊಳಿಸಿಲ್ಲ.
2019 ರಲ್ಲಿ, ಅಂದಿನ ಕಮಲ್ ನಾಥ್ ಸರ್ಕಾರ, ಸುಗ್ರೀವಾಜ್ಞೆಯ ಮೂಲಕ, 27 ಶೇಕಡಾ ಒಬಿಸಿ ಮೀಸಲಾತಿಯನ್ನು ಪರಿಚಯಿಸಿತು, ಆದರೆ ಆದೇಶದ ವಿರುದ್ಧ ಸರಣಿ ಅರ್ಜಿಗಳು ಸಲ್ಲಿಕೆಯಾಗಿದ್ದರಿಂದ ಮೀಸಲಾತಿ ವಿಚಾರವನ್ನು ತಡೆಹಿಡಿಯಲಾಗಿತ್ತು.
ಗುರುವಾರ ನೀಡಿದ ಮತ್ತೊಂದು ಆದೇಶದಲ್ಲಿ, ಮಾಜಿ ಸಚಿವ ಗೌರಿಶಂಕರ್ ಬಿಸೆನ್ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು, ಇದನ್ನು ಆಗಸ್ಟ್ 15 ರಂದು ಮುಖ್ಯಮಂತ್ರಿಯವರು ಘೋಷಿಸಿದ ನಂತರ ರಚಿಸಲಾಯಿತು. ಈ ವಿಚಾರವಾಗಿ ಕಾಂಗ್ರೆಸ್ ಆಕ್ಷೇಪಗಳನ್ನು ಎತ್ತಿದೆ.
ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯ ವಕ್ತಾರ ಕೆಕೆ ಮಿಶ್ರಾ ಅವರು ಶುಕ್ರವಾರ ಕಮಲ್ ನಾಥ್ ನೇತೃತ್ವದ ಸರ್ಕಾರದಿಂದ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಗಿದೆ ಮತ್ತು ನ್ಯಾಯಾಲಯದ ತಡೆಯಾಜ್ಞೆಯನ್ನು ಹೊಂದಿರುವ ಜೆಪಿ ಧನೋಪಿಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಪಕ್ಷವು ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಈ ಕುರಿತಾಗಿ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು. ಅವರನ್ನು ಹುದ್ದೆಯಿಂದ ಕೆಳಗೆ ಇಳಿಸಬೇಕು ಎಂಬುದು ಕಾಂಗ್ರೆಸ್ ಆಗ್ರಹವಾಗಿದೆ.
ಆಯೋಗಕ್ಕೆ ಅಧ್ಯಕ್ಷರನ್ನು ಈಗಾಗಲೇ ನೇಮಿಸಲಾಗಿದ್ದು ಹೊಸ ನೇಮಕಾತಿಯನ್ನು ಮಾಡಲು ಸಾಧ್ಯವಿಲ್ಲ ಎಂದು ಮಿಶ್ರಾ ಹೇಳಿದ್ದರು. ಆಯೋಗವನ್ನು ಹೊಸದಾಗಿ ರಚಿಸುವುದು ಅಸಂವಿಧಾನಿಕ ಎಂದು ಅವರು ತೀರ್ಪು ನೀಡುವ ವೇಳೆ ತಮ್ಮ ಅಭಿಪ್ರಾಯ ತಿಳಿಸಿದ್ದರು.
2011 ರ ಜನಗಣತಿಯ ಪ್ರಕಾರ, ಪರಿಶಿಷ್ಟ ಪಂಗಡಗಳ ಶೇಕಡಾ 21 , 17 ಪ್ರತಿಶತ ಜನಸಂಖ್ಯೆಯು ಪರಿಶಿಷ್ಟ ಜಾತಿಗಳಿಂದ ಮತ್ತು 51 ಪ್ರತಿಶತ ಒಬಿಸಿಗಳು ಇದ್ದಾರೆ ಎಂದು ತನ್ನ ವರದಿಯಲ್ಲಿ ಹೇಳಲಾಗಿದೆ.
ಚೌಹಾಣ್ ನೇತೃತ್ವದ ಸರ್ಕಾರವು ಒಬಿಸಿ ಕೋಟಾವನ್ನು ಹೈಕೋರ್ಟ್ ಮುಂದೆ ಪ್ರತಿಪಾದಿಸಿಲ್ಲ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಿಸುತ್ತಿತ್ತು. ಪ್ರಕರಣವನ್ನು ಮಂಡಿಸಲು ಇಂದಿರಾ ಜೈಸಿಂಗ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರಂತಹ ಹಿರಿಯ ವಕೀಲರನ್ನು ನೇಮಿಸುವುದಾಗಿ ಪಕ್ಷವು ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ