M. Karunanidhi Birthday: ಅಳಿಸಲಾಗದ ಛಾಪು ಒತ್ತಿರುವ ಕಲಾವಿದನ ಜನ್ಮದಿನ; ಎಂ.ಕೆ. ಸ್ಟಾಲಿನ್

ತಮ್ಮ ತಂದೆ ಕರುಣಾನಿಧಿಗೆ ನಮನ ಸಲ್ಲಿಸುತ್ತಿರುವ ಮಗ ಸ್ಟಾಲಿನ್

ತಮ್ಮ ತಂದೆ ಕರುಣಾನಿಧಿಗೆ ನಮನ ಸಲ್ಲಿಸುತ್ತಿರುವ ಮಗ ಸ್ಟಾಲಿನ್

1977-89ರ ನಡುವೆ ಒಂದು ದಶಕಗಳ ಕಾಲ ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದಾಗ, ಕರುಣಾನಿಧಿಯವರು ತಮ್ಮ ದೃಢ ನಿರ್ಧಾರವನ್ನು ಪ್ರದರ್ಶಿಸಿದ್ದರು.

  • Share this:

    ತಮಿಳುನಾಡು(ಜೂ.03): ಇಂದು ದ್ರಾವಿಡ ಮುನ್ನೇತ್ರ ಕಳಗಮ್(ಡಿಎಂಕೆ) ಪಕ್ಷದ ಸಂಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ 98ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕರುಣಾನಿಧಿ ಅವರು 2018ರ ಆಗಸ್ಟ್ 7ರಲ್ಲಿ ನಿಧನರಾದರು. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್, ಚೆನ್ನೈನಲ್ಲಿರುವ ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ಅರ್ಪಿಸಿದರು.


    ದ್ರಾವಿಡ ಮುನ್ನೇತ್ರ ಕಳಗಮ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, “ನಮ್ಮ ಹೃದಯದಲ್ಲಿ ಎಂದೆಂದೂ ಅಳಿಸಲಾಗದ ಛಾಪು ಒತ್ತಿರುವ ಕಲಾವಿದನ ಜನ್ಮದಿನವನ್ನು ಆಚರಿಸುತ್ತಿದ್ದೇವೆ” ಎಂದು ಸ್ಟಾಲಿನ್ ಬರೆದುಕೊಂಡಿದ್ದಾರೆ.


    ಕರುಣಾನಿಧಿ ಅವರು ಒಟ್ಟು 12 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಮತ್ತು ವೈಯಕ್ತಿಕವಾಗಿ ಯಾವತ್ತೂ ಚುನಾವಣೆಯಲ್ಲಿ ಸೋತಿಲ್ಲ. ಅವರು ಕುಲಿತಲೈ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ, ತಮ್ಮ 33ನೇ ವಯಸ್ಸಿನಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದರು. ಅವರು 1969-71, 71-76, 89-91, 96-01 ಮತ್ತು 2006-11 ರ ನಡುವೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು.


    ಇದನ್ನೂ ಓದಿ:Virat Kohli-Anushka Sharma: ಅನುಷ್ಕಾ-ವಿರಾಟ್ ಮಗಳ ಮೊದಲ ಫೋಟೋ; ಟೀಂ ಇಂಡಿಯಾ ಜೊತೆ ಹೋಗುವಾಗ ಏರ್​ಪೋರ್ಟ್​​ನಲ್ಲಿ ಕ್ಲಿಕ್

    1977-89ರ ನಡುವೆ ಒಂದು ದಶಕಗಳ ಕಾಲ ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದಾಗ, ಕರುಣಾನಿಧಿಯವರು ತಮ್ಮ ದೃಢ ನಿರ್ಧಾರವನ್ನು ಪ್ರದರ್ಶಿಸಿದ್ದರು. ಆ ಅವಧಿಯಲ್ಲಿ, ಎಐಎಡಿಎಂಕೆಯ ಸಂಸ್ಥಾಪಕ ಮತ್ತು ಅವರ ಪ್ರತಿಸ್ಪರ್ಧಿ ಎಂ.ಜಿ.ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದರು.


    ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಅಂತಹ ಪ್ರಯತ್ನದ ದಿನಗಳಲ್ಲಿ, ತಮ್ಮ ಪಕ್ಷದ ಧ್ವಜವನ್ನು ಎತ್ತಿಹಿಡಿದರು ಮತ್ತು ಆಡಳಿತರೂಢ ಎಐಎಡಿಎಂಕೆಯನ್ನು ಗುರಿಯಾಗಿಸಿಕೊಂಡು, ಅನೇಕ ಆಂದೋಲನಗಳನ್ನು ಮಾಡಿದ್ದರು. ನಿರಂತರವಾಗಿ ಎಲ್ಲಾ ಆಗು-ಹೋಗುಗಳ ಮೇಲೆ ಗಮನ ಇಟ್ಟಿದ್ದ ಅವರು, ಪಕ್ಷದ ಮುಖವಾಣಿ ಮುರಸೋಲಿಯಲ್ಲಿ ಕಲೈಂಗಾರ್ ಕಡಿತಮ್ (ಕಾರ್ಯಕರ್ತರಿಗೆ ಕಲೈಂಗಾರ್ ಪತ್ರ) ಮೂಲಕ, ತನ್ನ ಪಕ್ಷದ ಕಾರ್ಯಕರ್ತರ ಜೊತೆ ತೊಡಗಿಕೊಂಡರು. ಅವರು ತಮ್ಮ ನೆಂಜುಕ್ಕು ನೀತಿ ಎಂಬ ಆತ್ಮಚರಿತ್ರೆಯ ಮೂಲಕ , ತಮ್ಮ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿದರು.


    ಇದನ್ನೂ ಓದಿ:CP Yogeshwar: ಸಚಿವ ಸಿ.ಪಿ‌.ಯೋಗೇಶ್ವರ್​​ರಿಂದ ಮೂಲ ಬಿಜೆಪಿಗರು ದೂರಾದೂರ; ಬೆಂಬಲ ನೀಡದ ಶಾಸಕರು, ಸಚಿವರು

    1989ರಲ್ಲಿ ಮತ್ತೆ ಅಧಿಕಾರಕ್ಕೆ ಬಂದು, 1991ರ ಜನವರಿಯಲ್ಲಿ ಪಕ್ಷವನ್ನು ವಜಾಗೊಳಿಸಿದಾಗ ಹಿನ್ನಡೆ ಅನುಭವಿಸಿದರು. 1972ರಲ್ಲಿ ಎಂಜಿಆರ್ ಅವರು ನಿರ್ಗಮಿಸಿದರೂ ಕೂಡ, 1993ರಲ್ಲಿ ವೈಕೋ ಅವರನ್ನು ಉಚ್ಚಾಟನೆಗೊಳಿಸಿದಾಗ ಅವರು ಜಿಲ್ಲಾ ಕಾರ್ಯದರ್ಶಿಗಳು ಸೇರಿದಂತೆ ಪಕ್ಷದ ಸದಸ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಾಗ, ಕರುಣಾನಿಧಿ ಕಷ್ಟಕರ ಸಮಯವನ್ನು ಎದುರಿಸಬೇಕಾಯಿತು.


    1950 ದಶಕದಲ್ಲಿ ಅವರು ಪರಾಶಕ್ತಿ ಮತ್ತು ಮನೋಹರ ಎಂಬ ಜನಪ್ರಿಯ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದರು, ಅವರ ಕೊನೆಯ ಚಿತ್ರ 2011ರ ಪೊನ್ನಾರ್ ಶಂಕರ್.


    ತಮಿಳುನಾಡು ರಾಜಕೀಯದಲ್ಲಿ ಮಾಜಿ ಸಿಎಂಗಳಾದ ಜೆ. ಜಯಲಲಿತಾ ಹಾಗೂ ಕರುಣಾನಿಧಿ ಇಬ್ಬರೂ ರಾಜಕೀಯ ವಿರೋಧಿಗಳಾಗಿದ್ದರು. ಜಯಲಲಿತಾ ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿದ್ದರೆ, ಕರುಣಾನಿಧಿ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದರು. ಒಮ್ಮೆ ಜಯಲಲಿತಾ ಸಿಎಂ ಆದರೆ, ಮತ್ತೊಮ್ಮೆ ಕರುಣಾನಿಧಿ ಸಿಎಂ ಆಗುತ್ತಿದ್ದರು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ. ಆದರೂ, ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಸಹ ಕೈ ಜೋಡಿಸಬೇಕು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು