ಸಿಎಂ ಜಗನ್ ಮೋಹನ್ ರೆಡ್ಡಿ ಆಗಮನಕ್ಕೂ ಮುನ್ನ ವಿಜಯವಾಡದ ಕನಕದುರ್ಗಾ ದೇವಾಲಯದಲ್ಲಿ ಭೂ ಕುಸಿತ
ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ದೇವಸ್ಥಾನಕ್ಕೆ ಆಗಮಿಸುವ ಕೆಲ ಹೊತ್ತಿಗೆ ಮುಂಚೆ ಈ ಘಟನೆ ಸಂಭವಿಸಿದೆ.
news18-kannada Updated:October 21, 2020, 6:34 PM IST

ಭೂಕುಸಿತದಿಂದ ಆದ ಅನಾಹುತ
- News18 Kannada
- Last Updated: October 21, 2020, 6:34 PM IST
ವಿಜಯವಾಡ(ಅ.21): ಇಲ್ಲಿನ ಪ್ರಖ್ಯಾತ ಕನಕದುರ್ಗಾ ದೇವಾಲಯದಲ್ಲಿ ಭೂ ಕುಸಿತ ಸಂಭವಿಸಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಕೆಲ ಭಕ್ತರು ಅವಶೇಷಗಳ ಅಡಿ ಸಿಲುಕಿದ್ದಾರೆ. ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ದೇವಸ್ಥಾನಕ್ಕೆ ಆಗಮಿಸುವ ಕೆಲ ಹೊತ್ತಿಗೆ ಮುಂಚೆ ಈ ಘಟನೆ ಸಂಭವಿಸಿದೆ. ಬೆಟ್ಟದ ಮೇಲಿರುವ ಈ ದೇವಾಲಯ ಹೆಚ್ಚು ಜನಜನಿತವಾಗಿದೆ. ದಸರಾ ಸಂದರ್ಭದಲ್ಲಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆ ಪುನಸ್ಕಾರಕ್ಕಾಗಿ ದೇಶದಾದ್ಯಂತ ಭಕ್ತರು ಆಗಮಿಸುತ್ತಾರೆ. ನಿರಂತರ ಮಳೆಯ ಪರಿಣಾಮದಿಂದ ಬೆಟ್ಟದಿಂದ ದೊಡ್ಡ ಬಂಡೆ ಉರುಳಿದ ಪರಿಣಾಮ ಈ ಭೂ ಕುಸಿತ ಸಂಭವಿಸಿದೆ. ಇದರಿಂದ ದೇವಾಲಯದ ಆವರಣದಲ್ಲಿದ್ದ ಕಬ್ಬಿಣದ ಶೆಡ್ ನೆಲಸಮವಾಗಿದೆ. ಈ ಶೆಡ್ ಅಡಿ ಭಕ್ತಾದಿಗಳು ಸಿಲುಕಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ 19 ಸುರಕ್ಷಾ ನಿಯಮದೊಂದಿಗೆ ನವರಾತ್ರಿ ಹಿನ್ನಲೆ ದೇಗುಲವನ್ನು ತೆರೆಯಲಾಗಿದ್ದು, ಭಕ್ತಾದಿಗಳು ವಿಶೇಷ ಪೂಜೆಗೆ ಆಗಮಿಸಿದ್ದರು.
ನವರಾತ್ರಿ ಹಿನ್ನಲೆ ದೇವರಿಗೆ ಪಟ್ಟು ವಸ್ತ್ರ (ರೇಷ್ಮೆ ಬಟ್ಟ) ನೀಡಲು ಮುಖ್ಯಮಂತ್ರಿ ಜಗನ್ ಇಂದು ಸಂಜೆ 4.45ಕ್ಕೆ ದೇವಸ್ಥಾನಕ್ಕೆ ಆಗಮಿಸಲಿದ್ದರು. ಈ ಹಿನ್ನಲೆ ದೇವಸ್ಥಾನದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು.ಇದನ್ನು ಓದಿ: ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡಿದ ಟಾಲಿವುಡ್ ನಟರು..!
ದೇವಸ್ಥಾನದ ಸಂಪ್ರದಾಯದ ಪ್ರಕಾರ ನವರಾತ್ರಿ ಸಮಯದಲ್ಲಿ ಮೂಲ ನಕ್ಷತ್ರದ ದಿನದಿಂದು ರಾಜ್ಯದ ಮುಖ್ಯಮಂತ್ರಿಗಳು ದೇವರಿಗೆ ಪಟ್ಟು ವಸ್ತ್ರ ದಾನ ಮಾಡುವ ಪ್ರತೀತಿ ಇದೆ. ಇದು ಎರಡನೇ ಬಾರಿ ಜಗನ್ ಮೋಹನ್ ರೆಡ್ಡಿ ದೇವರಿಗೆ ಈ ಸೇವೆ ನೀಡಲು ಮುಂದಾಗಿದ್ದರು.
ಸ್ಥಳಕ್ಕೆ ಡಿಸಿ ಎಎಂಡಿ ಇಮ್ತಿಯಾಜ್ ಮತ್ತು ವಿಜಯವಾಡ ಕಮಿಷನರ್ ಬಿ ಶ್ರೀನಿವಾಸಲು ಆಗಮಿಸಿ ಪರಿಶೀಲನೆ ನಡೆಸಿದರು. ನಾಗರೀಕ ಪೂರೈಕೆ ಸಚಿವ ಕೆ ಶ್ರೀವೆಂಕಟೇಶ್ವರ ರಾವ್ ಮತ್ತು ಗನ್ನವರಂ ಶಾಸಕ ವಿ ವಂಶಿ ರಕ್ಷಣಾ ಕಾರ್ಯ ಕುರಿತು ಪರಿಶೀಲಿಸಿದರು.
ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ 19 ಸುರಕ್ಷಾ ನಿಯಮದೊಂದಿಗೆ ನವರಾತ್ರಿ ಹಿನ್ನಲೆ ದೇಗುಲವನ್ನು ತೆರೆಯಲಾಗಿದ್ದು, ಭಕ್ತಾದಿಗಳು ವಿಶೇಷ ಪೂಜೆಗೆ ಆಗಮಿಸಿದ್ದರು.
Vijayawada: Boulders fell off the Indrakeeladri hillock, ahead of Chief Minister Jagan Mohan Reddy's visit to Durga Temple on the hillock. Two injured.#AndhraPradesh pic.twitter.com/uzKlynTAZM
— ANI (@ANI) October 21, 2020
ನವರಾತ್ರಿ ಹಿನ್ನಲೆ ದೇವರಿಗೆ ಪಟ್ಟು ವಸ್ತ್ರ (ರೇಷ್ಮೆ ಬಟ್ಟ) ನೀಡಲು ಮುಖ್ಯಮಂತ್ರಿ ಜಗನ್ ಇಂದು ಸಂಜೆ 4.45ಕ್ಕೆ ದೇವಸ್ಥಾನಕ್ಕೆ ಆಗಮಿಸಲಿದ್ದರು. ಈ ಹಿನ್ನಲೆ ದೇವಸ್ಥಾನದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು.ಇದನ್ನು ಓದಿ: ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡಿದ ಟಾಲಿವುಡ್ ನಟರು..!
ದೇವಸ್ಥಾನದ ಸಂಪ್ರದಾಯದ ಪ್ರಕಾರ ನವರಾತ್ರಿ ಸಮಯದಲ್ಲಿ ಮೂಲ ನಕ್ಷತ್ರದ ದಿನದಿಂದು ರಾಜ್ಯದ ಮುಖ್ಯಮಂತ್ರಿಗಳು ದೇವರಿಗೆ ಪಟ್ಟು ವಸ್ತ್ರ ದಾನ ಮಾಡುವ ಪ್ರತೀತಿ ಇದೆ. ಇದು ಎರಡನೇ ಬಾರಿ ಜಗನ್ ಮೋಹನ್ ರೆಡ್ಡಿ ದೇವರಿಗೆ ಈ ಸೇವೆ ನೀಡಲು ಮುಂದಾಗಿದ್ದರು.
ಸ್ಥಳಕ್ಕೆ ಡಿಸಿ ಎಎಂಡಿ ಇಮ್ತಿಯಾಜ್ ಮತ್ತು ವಿಜಯವಾಡ ಕಮಿಷನರ್ ಬಿ ಶ್ರೀನಿವಾಸಲು ಆಗಮಿಸಿ ಪರಿಶೀಲನೆ ನಡೆಸಿದರು. ನಾಗರೀಕ ಪೂರೈಕೆ ಸಚಿವ ಕೆ ಶ್ರೀವೆಂಕಟೇಶ್ವರ ರಾವ್ ಮತ್ತು ಗನ್ನವರಂ ಶಾಸಕ ವಿ ವಂಶಿ ರಕ್ಷಣಾ ಕಾರ್ಯ ಕುರಿತು ಪರಿಶೀಲಿಸಿದರು.