• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕೇರಳದ ಚಿನ್ನದ ಸ್ಮಗ್ಲಿಂಗ್​ಗೂ ದಾವೂದ್​ ಇಬ್ರಾಹಿಂಗೂ ನಂಟು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಎನ್​ಐಎ

ಕೇರಳದ ಚಿನ್ನದ ಸ್ಮಗ್ಲಿಂಗ್​ಗೂ ದಾವೂದ್​ ಇಬ್ರಾಹಿಂಗೂ ನಂಟು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಎನ್​ಐಎ

ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

Kerala Gold Smuggling Case: ಭಾರತದ ಮೋಸ್ಟ್​ ವಾಂಟೆಡ್ ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೂ ಕೇರಳದ ಚಿನ್ನದ ಸ್ಮಗ್ಲಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್​ಐಎ ಕೊಚ್ಚಿ ವಿಶೇಷ ಕೋರ್ಟ್​ಗೆ ಮಾಹಿತಿ ನೀಡಿದೆ.

  • Share this:

    ತಿರುವನಂತಪುರಂ (ಅ. 15): ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದ 15 ಕೋಟಿ ರೂ. ಮೌಲ್ಯದ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ತನಿಖೆಗೆ ಸಾಕಷ್ಟು ತಿರುವುಗಳು ಸಿಕ್ಕಿವೆ. ಭಾರತದ ಮೋಸ್ಟ್​ ವಾಂಟೆಡ್ ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೂ ಕೇರಳದ ಚಿನ್ನದ ಸ್ಮಗ್ಲಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಈ ಕುರಿತು ಕೊಚ್ಚಿ ವಿಶೇಷ ಕೋರ್ಟ್​ಗೆ ಮಾಹಿತಿ ನೀಡಿದೆ. ಕೇರಳ ಗೋಲ್ಡ್​ ಸ್ಮಗ್ಲಿಂಗ್​ನ ಆರೋಪಿಗಳು ಅಂಡರ್​ವರ್ಲ್ಡ್​ ಡಾನ್ ದಾವೂದ್ ಇಬ್ರಾಹಿಂ ನೆಟ್​ವರ್ಕ್​ ಹೊಂದಿರುವ ತಾಂಜೇನಿಯಾಗೆ ಸಾಕಷ್ಟು ಬಾರಿ ತೆರಳಿದ್ದರು ಎಂಬುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಎನ್​ಐಎ ತಿಳಿಸಿದೆ.


    ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದ 15 ಕೋಟಿ ರೂ. ಮೌಲ್ಯದ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಗೆ ವಹಿಸಿತ್ತು. ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಗೃಹೋಪಯೋಗಿ ವಸ್ತುಗಳ ಜೊತೆಗೆ ಡಿಪ್ಲೋಮೆಟಿಕ್ ಬ್ಯಾಗ್​ನಲ್ಲಿ ಇರಿಸಿಕೊಂಡು ಬಂದಿದ್ದ, ಯುಎಇಯ ಧೂತವಾಸ  ಕಚೇರಿಯ ವಿಳಾಸವಿದ್ದ ಸೀಲ್ ಆಗಿದ್ದ ಬ್ಯಾಗ್​ನಲ್ಲಿ 30 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. 15 ಕೋಟಿ ರೂ. ಮೌಲ್ಯದ ಈ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ, ಕೇರಳದಲ್ಲಿರುವ ಯುಎಇಯ ಧೂತವಾಸ ಹಾಗೂ ಭಾರತದಲ್ಲಿರುವ ಯುಎಇ ರಾಯಭಾರಿ ಕಚೇರಿ ಆ ಚಿನ್ನಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.


    ಇದನ್ನೂ ಓದಿ: Telangana Rains: ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮಹಾ ಪ್ರವಾಹ; ಮಳೆಯ ಆರ್ಭಟಕ್ಕೆ ನಲುಗಿದ ಹೈದರಾಬಾದ್


    ಕೇರಳದ ಚಿನ್ನದ ಸ್ಮಗ್ಲಿಂಗ್ ದಂಧೆಯಲ್ಲಿ ಫೈಸಲ್ ಫರೀದ್, ಸ್ವಪ್ನ ಸುರೇಶ್, ಸಂದೀಪ್ ನಾಯರ್ ಮತ್ತು ಸರಿತ್ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿದೆ. ಸ್ವಪ್ನ ಸುರೇಶ್ ಮತ್ತು ಸರಿತ್ ಅವರಿಬ್ಬರೂ ಕೂಡ ಯುಎಇ ರಾಜತಾಂತ್ರಿಕ ಕಚೇರಿ ಜೊತೆ ಈ ಹಿಂದೆ ಕೆಲಸ ಮಾಡಿದವರು. ಅದೇ ಪ್ರಭಾವ ಇಟ್ಟುಕೊಂಡು ಅಧಿಕೃತ ಪಾರ್ಸಲ್​ಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರೆನ್ನಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿ ವಿಶೇಷ ಕೋರ್ಟ್​ಗೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು.


    ಆ ಜಾಮೀನು ಅರ್ಜಿ ವಿಚಾರಣೆ ವೇಳೆ ಕೇರಳದ ಗೋಲ್ಡ್​ ಸ್ಮಗ್ಲಿಂಗ್​ ದಂಧೆಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಡಿ-ಕಂಪನಿಗೂ ಸಂಬಂಧ ಇರಬಹುದು ಎಂದು ಎನ್​ಐಎ ಹೇಳಿದೆ. ಚಿನ್ನದ ಸ್ಮಗ್ಲಿಂಗ್ ದಂಧೆಯ ಆರೋಪಿಗಳಾದ ಶರಾಫುದ್ದೀನ್ ಮತ್ತು ರಮೀಜ್ ಹಲವು ಬಾರಿ ತಾಂಜೇನಿಯಾಗೆ ಭೇಟಿ ನೀಡಿದ್ದರು. ರಮೀಜ್ ತಾಂಜೇನಿಯಾದಲ್ಲಿ ವಜ್ರದ ವ್ಯಾಪಾರ ನಡೆಸಲು ಲೈಸೆನ್ಸ್​ ಪಡೆಯಲು ಪ್ರಯತ್ನಿಸಿದ್ದ. ಹಾಗೇ, ತಾಂಜೇನಿಯಾದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಲೈಸೆನ್ಸ್​ ಪಡೆಯಲು ಕೂಡ ಪ್ರಯತ್ನಿಸಿದ್ದ. ಹಾಗೇ, ವಿಚಾರಣೆ ವೇಳೆ ತಾವು ತಾಂಜೇನಿಯಾದಿಂದ ಚಿನ್ನವನ್ನು ತಂದು ಯುಎಇಯಲ್ಲಿ ಮಾರಾಟ ಮಾಡಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ ಎಂದು ಎನ್​ಐಎ ತಿಳಿಸಿದೆ.

    Published by:Sushma Chakre
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು