PC Chacko: ಕೇರಳದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಆಘಾತ; ಪಕ್ಷ ತೊರೆದ ಹಿರಿಯ ನಾಯಕ ಚಾಕೊ

ಪಿಸಿ ಚಾಕೊ

ಪಿಸಿ ಚಾಕೊ

ಏಪ್ರಿಲ್​ 6ರಿಂದ ಕೇರಳದಲ್ಲಿ ವಿಧಾನಸಭಾ ಮತದಾನ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆದಿರುವ ಈ ಬೆಳವಣಿಗೆ ಪಕ್ಷಕ್ಕೆ ಹೊಡೆತ ನೀಡಿದೆ

  • Share this:

    ಕೇರಳ (ಮಾ. 10) ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್​ಗೆ ತಮ್ಮ ಪಕ್ಷದ ಹಿರಿಯನಾಯಕರು ರಾಜೀನಾಮೆ ನೀಡುವ ಮೂಲಕ ಶಾಕ್​ ನೀಡಿದ್ದಾರೆ. ಕೇರಳದ ಹಿರಿಯ ಕಾಂಗ್ರೆಸ್​ ನಾಯಕ ಪಿಸಿ ಚಾಕೊ ಇಂದು ಕೈ ನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದು, ಇದೇ ವೇಳೆ ಪಕ್ಷದ ವಿರುದ್ಧ ಹಾಗೂ ಹೈ ಕಮಾಂಡ್​ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್​ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ. ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ರಾಜ್ಯ ಕಾಂಗ್ರೆಸ್​ ಸಮಿತಿಯೊಂದಿಗೆ ಚರ್ಚಿಸಲಾಗಿಲ್ಲ ಎಂದು ಅವರು ದೂರಿದ್ದಾರೆ. ಕಳೆದೊಂದು ವರ್ಷದಿಂದ ಪಕ್ಷದಲ್ಲಿ ಅಧ್ಯಕ್ಷರನ್ನು ಹೊಂದಿಲ್ಲ ಎಂಬುದನ್ನು ಕೂಡ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ಸಿಗರಾಗಿರುವುದು ಕಷ್ಟವಾಗಿದೆ. ಕೇರಳ ಕಾಂಗ್ರೆಸ್​ನಲ್ಲಿ ಎರಡು ಗುಂಪಿದ್ದು, ಅದರಲ್ಲಿ ನೀವು ಗುರುತಿಸಿಕೊಂಡಿದ್ದರೆ ಮಾತ್ರ ಬದುಕುಳಿಯಬಹುದು ಎಂದಿದ್ದಾರೆ.


    ಮಾಜಿ ಲೋಕಸಭಾ ಸದಸ್ಯರಾಗಿರುವ ಚಾಕೊ, ತಮ್ಮ ರಾಜೀನಾಮೆಯಿಂದಲಾದರೂ ಪಕ್ಷ ಕಣ್ತೆರದು ಕಾರ್ಯನಿರ್ವಹಿಸಲಿ ಎಂದು ಆಶಿಸಿದ್ದಾರೆ. ಕೇರಳ ಕಾಂಗ್ರೆಸ್​ ಕಾರ್ಯವೈಖರಿ ಬಗ್ಗೆ ನಗೆ ಅಸಮಾಧಾನ ಇದೆ, ಕಾಂಗ್ರೆಸ್​ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ನನ್ನ ರಾಜೀನಾಮೆಯಿಂದ ಆದರೂ ಪಕ್ಷ ಈ ಬಗ್ಗೆ ಗಮನಹರಿಸಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.


    ಏಪ್ರಿಲ್​ 6ರಿಂದ ಕೇರಳದಲ್ಲಿ ವಿಧಾನಸಭಾ ಮತದಾನ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆದಿರುವ ಈ ಬೆಳವಣಿಗೆ ಪಕ್ಷಕ್ಕೆ ಹೊಡೆತ ನೀಡಿದೆ.


    ಕೇರಳ ಕಾಂಗ್ರೆಸ್​ನಲ್ಲಿ ಉಮ್ಮನ್​ಚಾಂಡಿ ನೇತೃತ್ವದ ಎ ಗುಂಪು ಮತ್ತು ರಮೇಶ್​ ಚೆನ್ನಿಥಾಲಾ ನೇತೃತ್ವದ ಐ ಗುಂಪು ಕಾರ್ಯನಿರ್ವಹಿಸುತ್ತಿದೆ. ಈ ಗುಂಪುಗಳು ಹಿರಿಯ ನಾಯಕ ದಿ. ಕೆ ಕರುಣ್​ಕರನ್​ ಮತ್ತು ಹಿರಿಯ ನಾಯಕರ ಎಕೆ ಆಂಟನಿ ಕಾಲದಿಂದಲೂ ರಾಜ್ಯದ ಘಟಕದಲ್ಲಿ ಸಕ್ರಿಯವಾಗಿದೆ. 'ಎ' ಗುಂಪನ್ನು ಆಂಟನಿ ನಿರ್ವಹಿಸಿದರೆ, 'ಐ' ಗುಂಪಿನ ಸಾರಥಿ ಕರುನಾಕರನ್​ ಆಗಿದ್ದರು.


    ಇದನ್ನು ಓದಿ: ಮಗಳ ಮೇಲಿನ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ ತಂದೆ ಅಪಘಾತದಲ್ಲಿ ಸಾವು


    ಕಳೆದ ಕೆಲವು ದಿನಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ನಾನು ಚಿಂತಿಸುತ್ತಿದೆ. ನಾನು ಕೇರಳದಿಂದ ಬಂದಿದ್ದೇವೆ. ಅಲ್ಲಿ ಕಾಂಗ್ರೆಸ್​ ಪಕ್ಷವಿಲ್ಲ ಅಲ್ಲಿರುವುದು ಕಾಂಗ್ರೆಸ್​ (ಐ) ಮತ್ತು ಕಾಂಗ್ರೆಸ್​ (ಎ) ಪಕ್ಷ. ಈ ಎರಡು ಪಕ್ಷಗಳು ಕೆಪಿಸಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮನ್ವಯ ಸಮಿತಿಯಾಗಿದೆ ಎಂದಿದ್ದಾರೆ.


    ಪಕ್ಷದಲ್ಲಿನ ಈ ಗುಂಪುಗಾರಿಕೆ ವಿರುದ್ಧ ಹೈಕಮಾಂಡ್​ನೊಂದಿಗಿನ ಹೋರಾಟ ಕೂಡ ಅಂತಿಮವಾಗಿದೆ. ಕೇರಳದಲ್ಲಿ ನಿರ್ಣಾಯಕ ಚುನಾವಣೆಯನ್ನು ಪಕ್ಷ ಎದುರಿಸುತ್ತಿದ್ದು, ಕಾಂಗ್ರೆಸ್​ ಮರಳಿ ಬರಬೇಕೆಂದು ಜನರು ಬಯಸುತ್ತಿದ್ದಾರೆ. ಆದರೆ, ಕಾಂಗ್ರೆನ್​ ಪ್ರಮುಖ ನಾಯಕರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ನಾನು ಹೈ ಕಮಾಂಡ್​ಗೆ ತಿಳಿಸುತ್ತೇನೆ. ಆದರೆ, ಹೈ ಕಮಾಂಡ್​ ಈ ಎರಡೂ ಗುಂಪುಗಳ ಪ್ರಸ್ತಾಪಗಳನ್ನು ಸಹ ಸಮ್ಮತಿಸುತ್ತದೆ ಎಂದು ಬೇಸರ ಹೊರಹಾಕಿದರು.

    Published by:Seema R
    First published: