• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tragedy: ರಿಸಲ್ಟ್​ ಬಂದ 3ನೇ ದಿನವೇ 10ನೇ ಕ್ಲಾಸ್ ಟಾಪರ್ ದುರಂತ ಅಂತ್ಯ! 6 ಜನರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ

Tragedy: ರಿಸಲ್ಟ್​ ಬಂದ 3ನೇ ದಿನವೇ 10ನೇ ಕ್ಲಾಸ್ ಟಾಪರ್ ದುರಂತ ಅಂತ್ಯ! 6 ಜನರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ

ಸಾವನ್ನಪ್ಪಿದ ಎಸ್​ಎಸ್​ಎಲ್​ಸಿ ಟಾಪರ್​ ಸಾರಂಗ್

ಸಾವನ್ನಪ್ಪಿದ ಎಸ್​ಎಸ್​ಎಲ್​ಸಿ ಟಾಪರ್​ ಸಾರಂಗ್

10ನೇ ತರಗತಿ ಪರೀಕ್ಷೆಯಲ್ಲಿ ಯಾವುದೇ ಗ್ರೇಸ್​ ಮಾರ್ಕ್ಸ್​ಗಳನ್ನು (Grace Marks) ಪಡೆಯದೇ ಎಲ್ಲಾ ವಿಷಯದಲ್ಲೂ A+ ಗ್ರೇಡ್​ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದ. ಆದರೆ ಅಪಘಾತದಲ್ಲಿ ಬಾಲಕ ಬಲಿಯಾಗಿದ್ದಾನೆ.

  • Share this:

ಕೇರಳ: ವರ್ಷ ಪೂರ್ತಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು (Students) ಫಲಿತಾಂಶಕ್ಕಾಗಿ (Result) ಕಾಯುತ್ತಿರುತ್ತಾರೆ. ಆದರೆ ಫಲಿತಾಂಶ ಪ್ರಕಟಗೊಂಡು ರಾಜ್ಯಕ್ಕೆ ಟಾಪರ್ (State Topper) ಎನಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಆ ಕ್ಷಣವನ್ನು ಸಂಭ್ರಮಿಸುವ ಮೊದಲೇ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದಲ್ಲಿ (Kerala) ಈ ಘಟನೆ ನಡೆದಿದ್ದು, ಈತ 10ನೇ ತರಗತಿ ಪರೀಕ್ಷೆಯಲ್ಲಿ ಯಾವುದೇ ಗ್ರೇಸ್​ ಮಾರ್ಕ್ಸ್​ಗಳನ್ನು( ಪಡೆಯದೇ ಎಲ್ಲಾ ವಿಷಯದಲ್ಲೂ A+ ಗ್ರೇಡ್​ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದ. ಆದರೆ ಅಪಘಾತದಲ್ಲಿ ಬಾಲಕ ಬಲಿಯಾಗಿದ್ದಾನೆ.


16 ವರ್ಷದ ಬಾಲಕ ಸಾರಂಗ್ ಮೃತ ದುರ್ದೈವಿ. ಈತ ಆಲಂಕೋಡ್ ವಂಚಿಯೂರು ಮೂಲದ ಪಿ ಬಿನೇಶ್ ಕುಮಾರ್ ಮತ್ತು ಜಿಟಿ ರಂಜಿನಿ ದಂಪತಿಯ ಪುತ್ರ ಎಂದು ತಿಳಿದುಬಂದಿದೆ. ಅಟ್ಟಿಂಗಲ್‌ನ ಸರ್ಕಾರಿ ಬಾಲಕರ ಶಾಕೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಾರಂಗ್ ಮೇ 13 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಕಲ್ಲಂಬಲಂ-ನಾಗರೂರು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಈತ ಕುಳಿತಿದ್ದ ಆಟೋ ರಿಕ್ಷಾ ಮತ್ತೊಂದು ವಾಹನಕ್ಕೆ ಜಾಗ ಬಿಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಪಲ್ಟಿಯಾಗಿದೆ.


ಇದನ್ನೂ ಓದಿ: Cabinet Framing: ಸಿದ್ದರಾಮಯ್ಯ ಬಳಿ ಸುಳಿಯದ ಆಪ್ತ ಶಾಸಕರು; ಯಾಕೆ ಈ ಮುನಿಸು?


ಸಾರಂಗ್​ಗೆ ಗಂಬೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಾರಂಗ್​ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಖಚಿತಪಿಡಿಸಿದ್ದರು. ಆತ ಮೇ 17 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.




ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ


ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾರಂಗ್ ಮೃತಪಟ್ಟರು ಕುಟುಂಸ್ಥರು ಆತನ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಸಾರಂಗ್​ನ ದೇಹದ ಅಂಗಾಂಗಗಳು 6 ಜನರಿಗೆ ಜೀವನ ಕಲ್ಪಿಸಿಕೊಟ್ಟಿದೆ. ಈ ಮೂಲಕ ಕುಟುಂಬಸ್ಥರು ಚಿಕ್ಕ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡರೂ, ಅತನ ಅಂಗಾಂಗಗಳನ್ನು ದಾನ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ.

top videos


    ಇದನ್ನೂ ಓದಿ: Karnataka: ರಾಜ್ಯದ ಪಾಲಿಗೆ ಇಂದು ಸಾವಿನ ಅಮಾವಾಸ್ಯೆ; ಪ್ರತ್ಯೇಕ ಪ್ರಕರಣದಲ್ಲಿ ಎಂಟಕ್ಕಿಂತ ಹೆಚ್ಚು ಮಂದಿ ಸಾವು!

     ಶಿಕ್ಷಣ ಸಚಿವರಿಂದ ಭಾವುಕ ಪೋಸ್ಟ್​


    ಸಾರಂಗ್​ ಸಾವಿನ ಬಗ್ಗೆ ಶಿಕ್ಷಣ ಸಚಿವ ವಿ ಶಿವನ್​ಕುಟ್ಟಿ ಸಂತಾಪ ಸೂಚಿಸಿದ್ದು, ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಸಾರಂಗ್​ ಯಾವುದೇ ಗ್ರೇಸ್​ ಅಂಕ ಪಡೆಯದೇ ಸಂಪೂರ್ಣ ಎ ಪ್ಲಸ್​ ಅಂಕ ಪಡೆದುಕೊಂಡಿದ್ದ. ಆತ ಫುಟ್ಬಾಲ್ ಆಟಗಾರನಾಗಿದ್ದ, ಆತ ಕೇರಳ ಬ್ಲಾಸ್ಟರ್​ ತಂಡದ ಅಭಿಮಾನಿಯಾಗಿದ್ದ ಎಂದು ಶಿವನ್​ ತಿಳಿಸಿದ್ದಾರೆ. ಅಲ್ಲದೆ ದುಃಖದ ಸಂದರ್ಭದಲ್ಲೂ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    First published: