• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ವಲಸಿಗರನ್ನು ಶವಗಳ ಜೊತೆ ಟ್ರಕ್​ನಲ್ಲಿ ಕಳುಹಿಸಿದ ಉತ್ತರ ಪ್ರದೇಶ; ಜಾರ್ಖಂಡ್ ಸಿಎಂ ಆಕ್ರೋಶ

ವಲಸಿಗರನ್ನು ಶವಗಳ ಜೊತೆ ಟ್ರಕ್​ನಲ್ಲಿ ಕಳುಹಿಸಿದ ಉತ್ತರ ಪ್ರದೇಶ; ಜಾರ್ಖಂಡ್ ಸಿಎಂ ಆಕ್ರೋಶ

ಟ್ರಕ್​ನಲ್ಲಿ ಶವಗಳೊಂದಿಗೆ ಕಾರ್ಮಿಕರು

ಟ್ರಕ್​ನಲ್ಲಿ ಶವಗಳೊಂದಿಗೆ ಕಾರ್ಮಿಕರು

Auraiya Accident: ಉತ್ತರ ಪ್ರದೇಶದ ಔರಯ್ಯ ಎಂಬ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ 26 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. 30ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದರು.

  • Share this:

ನವದೆಹಲಿ (ಮೇ 19): ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಜಾರ್ಖಂಡ್​ನ 26 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. ಆ ಕಾರ್ಮಿಕರ ಶವಗಳನ್ನು ಟಾರ್ಪಲ್​ನಲ್ಲಿ ಸುತ್ತಿ, ಅದೇ ಟ್ರಕ್​ನಲ್ಲಿ ವಲಸೆ ಕಾರ್ಮಿಕರನ್ನುಕೂರಿಸಿ ಕಳುಹಿಸಲಾಗಿತ್ತು. ಈ ನಡವಳಿಕೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬೇಸರ ವ್ಯಕ್ತಪಡಿಸಿದ್ದಾರೆ.


ಉತ್ತರ ಪ್ರದೇಶದಿಂದ ನಮ್ಮ ರಾಜ್ಯದ ವಲಸೆ ಕಾರ್ಮಿಕರ ಮೃತದೇಹಗಳನ್ನು ತೆರೆದ ಟ್ರಕ್​ನಲ್ಲಿ ಪ್ಲಾಸ್ಟಿಕ್ ಮತ್ತು ಟಾರ್ಪಲ್​ಗಳಲ್ಲಿ ಸುತ್ತಿ ಕಳುಹಿಸಿದ ದೃಶ್ಯ ಕಂಡು ನನಗೆ ಆಘಾತವಾಯಿತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಕೂಡ ಅದೇ ಟ್ರಕ್​ನಲ್ಲಿ ಹಾಕಿ ಕಳುಹಿಸಲಾಗಿದೆ. ಈ ರೀತಿ ಅಮಾನವೀಯ ವರ್ತನೆಯನ್ನು ಕಂಡು ಬೇಸರವಾಗಿದೆ. ಉತ್ತರ ಪ್ರದೇಶದ ಸರ್ಕಾರ ಇಂತಹ ಘಟನೆ ಪುನರಾವರ್ತಿತವಾಗದಂತೆ ಎಚ್ಚರ ವಹಿಸಬೇಕು ಎಂದು ಸಿಎಂ ಹೇಮಂತ್ ಸೊರೇನ್ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಕೊರೋನಾ ಎಫೆಕ್ಟ್​; ಕೇಂದ್ರ ಸರ್ಕಾರಿ ನೌಕರರಿಗೂ ಇನ್ನುಮುಂದೆ 3 ಶಿಫ್ಟ್​ನಲ್ಲಿ ಕೆಲಸ


ಉತ್ತರ ಪ್ರದೇಶದ ಔರಯ್ಯ ಎಂಬ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ 26 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. 30ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದರು. ಪಂಜಾಬ್​ ಮತ್ತು ರಾಜಸ್ಥಾನದ ಕಡೆಯಿಂದ ಬರುತ್ತಿದ್ದ ಟ್ರಕ್​ಗಳ ನಡುವೆ ಡಿಕ್ಕಿ ಉಂಟಾಗಿ ಈ ಅಪಘಾತ ಸಂಭವಿಸಿತ್ತು. ಮೃತಪಟ್ಟವರಲ್ಲಿ 11 ಜನರು ಜಾರ್ಖಂಡ್​ನವರು ಮತ್ತು 15 ಜನರು ಪಶ್ಚಿಮ ಬಂಗಾಳದವರಾಗಿದ್ದಾರೆ.

top videos
    First published: