ಶ್ರೀನಗರ (ಸೆ. 25): ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಹವಾಲ್ ಪ್ರದೇಶದಲ್ಲಿ ಅಪರಿಚಿತ ಉಗ್ರರು ಖ್ಯಾತ ವಕೀಲರೊಬ್ಬರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ 6.25ರ ವೇಳೆಗೆ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ವಕೀಲ ಬಾಬರ್ ಖಾದ್ರಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಹೋಗಿತ್ತು. ಎಸ್ಕೆಐಎಂಎಸ್ ಆಸ್ಪತ್ರೆಗೆ ಅವರನ್ನು ಕರೆದೊಯ್ದಾಗ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಬಾಬರ್ ಖಾದ್ರಿ ಹತ್ಯೆಗೆ ಓಮರ್ ಅಬ್ದುಲ್ಲ ಸೇರಿದಂತೆ ಹಲವರು ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
40 ವರ್ಷದ ವಕೀಲ ಬಾಬರ್ ಖಾದ್ರಿ ಅವರ ಮೇಲೆ ಉಗ್ರರ ಗುಂಪು ಗುಂಡು ಹಾರಿಸಿದೆ. ಬಾಬರ್ ಖಾದ್ರಿ ಹಲವು ಪತ್ರಿಕೆಗಳಲ್ಲಿ ಬರೆಯುತ್ತಿದ್ದರು ಮತ್ತು ಟಿವಿಗಳ ಚರ್ಚೆಯಲ್ಲಿ ಕೂಡ ಭಾಗಿಯಾಗುತ್ತಿದ್ದರು. ಇತ್ತೀಚೆಗೆ ಅವರು 'ನನ್ನ ಜೀವಕ್ಕೆ ಅಪಾಯವಾಗಬಹುದು' ಎಂದು ಟ್ವೀಟ್ ಮಾಡಿದ್ದರು. ಅದಾದ ಮೂರೇ ದಿನಕ್ಕೆ ಅವರನ್ನು ಕೊಲೆ ಮಾಡಲಾಗಿದೆ.
I urge the state Police administration to register FIR against this Shah Nazir who has spread wrong campaign that I work for agencies. This un true statement can lead to threat to my life.@ZPHQJammu pic.twitter.com/utkurYpRzk
— Babar Qadri Truth (@BabarTruth) September 21, 2020
The assassination of Babar Qadri this evening is tragic & I unequivocally condemn it. The sense of tragedy is all the more because he warned of the threat. Sadly his warning was his last tweet. @BabarTruth
— Omar Abdullah (@OmarAbdullah) September 24, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ