ತಿರುವನಂತಪುರಂ(ಅ.05): ಕೇರಳದ ಐಎಎಸ್ ಅಧಿಕಾರಿಯೊಬ್ಬರನ್ನು ಕೇವಲ 6 ದಿನಗಳಲ್ಲಿ ಡಿಎಂ ಹುದ್ದೆಯಿಂದ ತೆಗೆದು ಹಾಕಲಾಗಿದೆ. 3 ವರ್ಷಗಳ ಹಿಂದೆ ಪತ್ರಕರ್ತರೊಬ್ಬರ ಸಾವಿನ ಪ್ರಕರಣದಲ್ಲಿ ಐಎಎಸ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಈ ಕಾರಣಕ್ಕೆ ಡಿಎಂ ಹುದ್ದೆ ಅಲಂಕರಿಸಿದ ಬೆನ್ನಲ್ಲೇ ಜನ ಪ್ರತಿಭಟನೆ ಆರಂಭಿಸಿದ್ದಾರೆ. ಕೊನೆಗೆ ಕೇರಳ ಸರ್ಕಾರ ಅವರನ್ನು ಡಿಎಂ ಹುದ್ದೆಯಿಂದ ಕೆಳಗಿಳಿಸಿದೆ.
ಐಎಎಸ್ ಶ್ರೀರಾಮ್ ವೆಂಕಟರಾಮನ್ (IAS Officer Sriram Venkitaraman) ಅವರನ್ನು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಕ ಮಾಡುವ ಕುರಿತು ತೀವ್ರ ಪ್ರತಿಭಟನೆ ನಡೆಯಿತು. ಇದಾದ ನಂತರ ಕೇರಳ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಯಿತು. ಐಎಎಸ್ ಶ್ರೀರಾಮ್ ವೆಂಕಟರಾಮನ್ ಕುಡಿದ ಮತ್ತಿನಲ್ಲಿ ಪತ್ರಕರ್ತರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮಲಯಾಳಂ ಪತ್ರಿಕೆ ಸಿರಾಜ್ನ ಬ್ಯೂರೋ ಚೀಫ್ ಕೆಎಂ ಬಶೀರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: Tea Seller IAS Officer- ಚಹಾ ಮಾರುತ್ತಿದ್ದವ ಐಎಎಸ್ ಪರೀಕ್ಷೆ ಪಾಸ್ ಆದ ಪ್ರೇರಕ ಕಥೆ
3 ಆಗಸ್ಟ್ 2019 ರಂದು ನಡೆದ ಈ ಘಟನೆಯಲ್ಲಿ ಐಎಎಸ್ ಶ್ರೀರಾಮ್ ವೆಂಕಟರಾಮನ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಅವರನ್ನು ಆಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಆದರೆ ಒಂದು ವಾರದಲ್ಲಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಯಿತು.
ಐಎಎಸ್ ಶ್ರೀರಾಮ್ ವೆಂಕಟರಾಮನ್ ವಿರುದ್ಧ ಪತ್ರಕರ್ತರ ಸಂಘಟನೆ, ಹಲವು ಮುಸ್ಲಿಂ ಸಂಘಟನೆಗಳು, ಯುವ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. IAS ಅವರನ್ನು ಈಗ ಕೇರಳ ರಾಜ್ಯ ನಾಗರಿಕ ಸರಬರಾಜು ನಿಗಮ ನಿಯಮಿತದ ಜನರಲ್ ಮ್ಯಾನೇಜರ್ ಮಾಡಲಾಗಿದೆ.
ಈ ಹಿಂದೆ ಜುಲೈ 24ರಂದು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ಅವರು ಜುಲೈ 26ರಂದು ಸೇರ್ಪಡೆಗೊಂಡಿದ್ದರು. ಅವರನ್ನು ಆಗಸ್ಟ್ 1 ರಂದು ಈ ಹುದ್ದೆಯಿಂದ ತೆಗೆದುಹಾಕಲಾಯಿತು.
ಇದನ್ನೂ ಓದಿ: Viral Photo: ವೃದ್ಧನ ಜೊತೆ ರಸ್ತೆ ಬದಿಯಲ್ಲಿಯೇ ಕುಳಿತ IAS ಅಧಿಕಾರಿ
ಕೇರಳ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, 2015 ರ ಬ್ಯಾಚ್ ಐಎಎಸ್ ಅಧಿಕಾರಿ ವಿ ಆರ್ ಕೆ ತೇಜ ಮೈಲವರಪು ಅವರು ಈಗ ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಮೊದಲು ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶಕರಾಗಿದ್ದರು.
ಪತ್ರಕರ್ತ ಸತ್ತಿದ್ದು ಹೇಗೆ?
ಐಎಎಸ್ ಶ್ರೀರಾಮ್ ವೆಂಕಟರಾಮನ್ ಅವರು 3 ಆಗಸ್ಟ್ 2019 ರಂದು ತಡರಾತ್ರಿ ಪಾರ್ಟಿ ಮುಗಿಸಿ ತಮ್ಮ ಸ್ನೇಹಿತ ವಹಾ ಫಿರೋಜ್ ಅವರೊಂದಿಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ಕಾರು ಅಲ್ಲಿನ ಫಿರೋಜ್ ಎಂಬುವವರಿಗೆ ಸೇರಿತ್ತು. ಐಎಎಸ್ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಘಟನೆಯ ನಂತರ ಆರೋಪಿ ಐಎಎಸ್ ಅಧಿಕಾರಿ ಎಂದು ತಿಳಿದ ಪೊಲೀಸರು ರಸ್ತೆ ಅಪಘಾತದ ನಂತರ ಅಗತ್ಯ ವೈದ್ಯಕೀಯ ಪರೀಕ್ಷೆಗೆ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. IAS ಶ್ರೀರಾಮ್ ವೆಂಕಟರಾಮನ್ 2012 ರ UPSC ಪರೀಕ್ಷೆಯಲ್ಲಿ ಎರಡನೇ ಟಾಪರ್ ಆಗಿದ್ದರು ಎಂಬುವುದು ಉಲ್ಲೇಖನೀಯ. ಅಲ್ಲದೇ ಅವರು ವೈದ್ಯಕೀಯ ಶಿಕ್ಷಣವನ್ನೂ ಪಡೆದಿದ್ದಾರೆ.
ಐಎಎಸ್ ಶ್ರೀರಾಮನಿಗೂ ವಿವಾದಗಳಿಗೂ ಹಳೆಯ ಸಂಬಂಧ
ಇದಕ್ಕೂ ಮುನ್ನ ಐಎಎಸ್ ಶ್ರೀರಾಮ್ ವೆಂಕಟರಾಮನ್ ಅವರು ಇಡುಕ್ಕಿ ಜಿಲ್ಲೆಯ ದೇವಿಕುಲಂನಲ್ಲಿ ಸಬ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಭೂ ಮಾಫಿಯಾ ಕೃತ್ಯ ಎಸಗಿದ್ದರು. ಈ ವೇಳೆ ಸಿಪಿಐ(ಎಂ) ಶಾಸಕರ ವಿರುದ್ಧ ಕ್ರಮಕೈಗೊಂಡಿದ್ದರು. ಈ ಬಗ್ಗೆ ಸಾಕಷ್ಟು ವಿವಾದಗಳು ನಡೆದಿದ್ದವು. ಇದಾದ ಬಳಿಕ ದೇವಿಕುಲಂನಲ್ಲಿ ಅವಧಿ ಮುಗಿಯುವ ಮುನ್ನವೇ ಅವರನ್ನು ವರ್ಗಾವಣೆ ಮಾಡಲಾಗಿತ್ತು.
2020 ರಲ್ಲಿ, ಕೇರಳ ಸರ್ಕಾರವು ಐಎಎಸ್ ಶ್ರೀರಾಮ್ ವೆಂಕಟರಾಮನ್ ಅವರ ಅಮಾನತು ರದ್ದುಗೊಳಿಸಿತು.
ಇದಾದ ಬಳಿಕ ಐಎಎಸ್ ಶ್ರೀರಾಮ್ ಅವರನ್ನು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಈ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆಯೂ ವ್ಯಕ್ತವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ