• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್

ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್

ವಕೀಲ ಪ್ರಶಾಂತ್ ಭೂಷಣ್

ವಕೀಲ ಪ್ರಶಾಂತ್ ಭೂಷಣ್

ಯುಪಿಎ ಸರ್ಕಾರ ಅವಧಿಯಲ್ಲಿ ಭ್ರಷ್ಟಾಚಾರ ಆಂದೋಲನ ರೂಪಿಸಿದ್ದ ಐಎಸಿಯನ್ನು ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದು ಪ್ರಶಾಂತ್ ಭೂಷಣ್ ಬಾಂಬ್ ಸಿಡಿಸಿದ್ದಾರೆ; ಇದು ನಮಗೆ ಮೊದಲೇ ಗೊತ್ತಿದ್ದ ಸತ್ಯ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

  • News18
  • 5-MIN READ
  • Last Updated :
  • Share this:

ನವದೆಹಲಿ(ಸೆ. 15): ನ್ಯಾಯಾಂಗ ನಿಂದನೆ ಪ್ರಕರಣದ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಪ್ರಶಾಂತ್ ಭೂಷಣ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. 2014ಕ್ಕೆ ಮುಂಚೆ ಅಣ್ಣಾ ಹಜಾರೆ ನೇತೃತ್ವದಲ್ಲಿ ದೇಶವ್ಯಾಪಿ ನಡೆದಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿಂದಿನ ಶಕ್ತಿ ಆರೆಸ್ಸೆಸ್ ಎಂದು ಅವರು ಹೇಳಿದ್ದಾರೆ. ಯುಪಿಎ ಸರ್ಕಾರವನ್ನು ಬೀಳಿಸಲು ಭ್ರಷ್ಟಾಚಾರ ವಿರೋಧಿ ಆಂದೋಲನ ರೂಪಿಸಿದ್ದ ಇಂಡಿಯಾ ಎಗೇಂಸ್ಟ್ ಕರಪ್ಷನ್ (ಐಎಸಿ) ಅನ್ನು ಹುಟ್ಟು ಹಾಕಿದ್ದೇ ಬಿಜೆಪಿ ಮತ್ತು ಆರೆಸ್ಸೆಸ್ ಎಂದು ಭೂಷಣ್ ಹೇಳಿದ್ಧಾರೆ. ಅಚ್ಚರಿ ಎಂದರೆ ಪ್ರಶಾಂತ್ ಭೂಷಣ್ ಅವರು ಇದೇ ಐಎಸಿಯ ಒಬ್ಬ ಕೋರ್ ಮೆಂಬರ್ ಆಗಿದ್ದವರು. ಮುಂದೆ ಇದೇ ಐಎಸಿಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವಾಗಿ ಪರಿವರ್ತನೆ ಮಾಡಲಾಯಿತು. 2015ರಲ್ಲಿ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಅಣ್ಣಾ ಹಜಾರೆ ಆಂದೋಲನ ಬಿಜೆಪಿಯ ಪಿತೂರಿ ಎಂದು ಈ ಹಿಂದೆ ಹಲವರು ಆರೋಪ ಮಾಡಿದ್ದರು. ಇದೀಗ ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಅವರು ಆ ಆರೋಪವನ್ನು ದೃಢಪಡಿಸಿದ್ದಾರೆ. ಆದರೆ, ಪ್ರಶಾಂತ್ ಭೂಷಣ್ ಮಾತುಗಳನ್ನ ನಂಬುವುದಾದರೆ ಐಎಸಿಯಲ್ಲಿ ಬಿಜೆಪಿ ನೇರವಾಗಿ ಪಾಲ್ಗೊಳ್ಳದೆ ಕಣ್ಣಿಗೆ ಕಾಣದ ಶಕ್ತಿಯಾಗಿ ಬಲ ನೀಡಿದಂತಿದೆ.


“ಆ ಆಂದೋಲನದಲ್ಲಿ ಬಿಜೆಪಿ-ಆರೆಸ್ಸೆಸ್ ಪಾತ್ರದ ಬಗ್ಗೆ ಯಾವುದೇ ಸಂಶಯ ಉಳಿದಿಲ್ಲ. ಅಣ್ಣಾ ಹಜಾರೆಗೆ ಅರಿವಿರಲಿಲ್ಲ ಅನಿಸುತ್ತದೆ. ಆದರೆ, ಕೇಜ್ರಿವಾಲ್ ಅವರಿಗೆ ಇದು ಗೊತ್ತಿತ್ತು. ನಾನು ಅರವಿಂದ್ ಅವರ ಗುಣವನ್ನು ಬೇಗ ಅರ್ಥ ಮಾಡಿಕೊಳ್ಳಲು ವಿಫಲನಾಗಿದ್ದಕ್ಕೆ ವಿಷಾದವಾಗುತ್ತಿದೆ. ನನಗೆ ಅರಿವಿಗೆ ಬರುವ ಮುನ್ನ ನಾನು ಅದಾಗಲೇ ಮತ್ತೊಬ್ಬ ಬ್ರಹ್ಮರಾಕ್ಷಸನನ್ನು ಸೃಷ್ಟಿಮಾಡಿಬಿಟ್ಟಿದ್ದೆವು” ಎಂದು ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಸ್ಫೋಟಕ ಮಾಹಿತಿ ನೀಡಿದ್ಧಾರೆ.


ಇದನ್ನೂ ಓದಿ: Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ



ಪ್ರಶಾಂತ್ ಭೂಷಣ್ ಅವರ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಐಎಸಿ ಆಂದೋಲನ ಮತ್ತು ಆಮ್ ಆದ್ಮಿ ಪಕ್ಷ ಎರಡೂ ಕೂಡ ದೇಶದಲ್ಲಿ ಪ್ರಜಾತಂತ್ರವನ್ನು ದಮನ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ಹುಟ್ಟು ಹಾಕಲಾಗಿದ್ದ ಸಂಗತಿ ನಮಗೆ ಗೊತ್ತಿತ್ತು. ಆಮ್ ಆದ್ಮಿಯ ಸಂಸ್ಥಾಪಕರೊಬ್ಬರೇ ಈಗ ಇದನ್ನು ಖಚಿತಪಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

First published: