ನವ ದೆಹಲಿ (ಜುಲೈ 08); ಭಾರತ-ಚೀನಾ ಗಡಿಯಿಂದ ಡ್ಯ್ರಾಗನ್ ಸೇನೆ ಹಿಂದೆ ಸರಿದಿರುವುದು ಸ್ವಾಗತಾರ್ಹ. ಆದರೆ, ಚೀನಾ ಸೇನೆ ಯಾವ ಪ್ರದೇಶದಿಂದ ಹಿಂದೆ ಸರಿದಿದೆ? ಈಗ ಸ್ಥಳ ಯಾವುದು? ಎಂದು ಕೇಂದ್ರ ಸರ್ಕಾರ ದಯವಿಟ್ಟು ಸ್ಪಷ್ಟಪಡಿಸಲಿ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಭಾರತ-ಚೀನಾ ಗಡಿ ಪ್ರದೇಶವಾದ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶದ ಸೈನಿಕರ ನಡುವೆ ಸಂಘರ್ಷ ಉಂಟಾಗಿತ್ತು. ಈ ಸಂಘರ್ಷದಲ್ಲಿ ಭಾರತದ 20 ಜನ ಸೈನಿಕರನ್ನು ಚೀನಾದ ಸೇನೆ ಹತ್ಯೆ ಮಾಡಿತ್ತು. ಆದರೆ, ಈ ಸಂಘರ್ಷದ ನಂತರ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಭಾರತದ ಭೂಪ್ರದೇಶವನ್ನು ಚೀನಾ ಸೇನೆ ಕಬಳಿಸಿಲ್ಲ. ನಮ್ಮ ನೆಲದಲ್ಲಿ ಡ್ಯ್ರಾಗನ್ ಸೇನೆ ಇಲ್ಲ" ಎಂದಿದ್ದರು.
ಮೋದಿ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಈಡಾಗಿತ್ತು. ಆದರೆ, ಇದೀಗ ಮತ್ತೊಂದು ಮಾಹಿತಿಯನ್ನು ಹೊರ ಹಾಕುತ್ತಿರುವ ಕೇಂದ್ರ ಸರ್ಕಾರ, "ಚೀನಾ ಸೇನೆ ಭಾರತದ ಭೂ ಭಾಗದಿಂದ ಹಿಂದಕ್ಕೆ ಸರಿದಿದೆ" ಎಂದು ಹೇಳುತ್ತಿದೆ.
I welcome the disengagement and pull back by Chinese troops. Will some one tell us the place from which the Chinese troops disengaged and the place in which they are now.
— P. Chidambaram (@PChidambaram_IN) July 8, 2020
Similarly which is the place from which Indian troops disengaged?
Did any troops — Chinese or Indian — move from one side of the LAC to the other?
— P. Chidambaram (@PChidambaram_IN) July 8, 2020
Answers to these questions are necessary because the Indian people are on a Treasure Hunt to find out what happened on June 15 and where.
— P. Chidambaram (@PChidambaram_IN) July 8, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ