• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sad News: ಕರೆಂಟ್​ ಶಾಕ್ ಹೊಡೆದು ಪ್ರಜ್ಞೆ ತಪ್ಪಿ ಬಿದ್ದ ಪತ್ನಿ, ಕಾಪಾಡಲು ಬಂದ ಪತಿಯೂ ಸಾವು! ಅನಾಥರಾದ ಇಬ್ಬರು ಮಕ್ಕಳು

Sad News: ಕರೆಂಟ್​ ಶಾಕ್ ಹೊಡೆದು ಪ್ರಜ್ಞೆ ತಪ್ಪಿ ಬಿದ್ದ ಪತ್ನಿ, ಕಾಪಾಡಲು ಬಂದ ಪತಿಯೂ ಸಾವು! ಅನಾಥರಾದ ಇಬ್ಬರು ಮಕ್ಕಳು

ಕರೆಂಟ್ ಶಾಕ್​ಗೆ ದಂಪತಿ ಸಾವು

ಕರೆಂಟ್ ಶಾಕ್​ಗೆ ದಂಪತಿ ಸಾವು

ಮನೆಯ ಆವರಣದಲ್ಲಿ ಶೇಖರಣೆಯಾಗಿರುವ ಧೂಳನ್ನು ಸ್ವಚ್ಛಗೊಳಿಸುವ ಸಲುವಾಗಿ ಲತಾ ಶುಕ್ರವಾರ ಬೆಳಗ್ಗೆ ವಿದ್ಯುತ್ ಮೋಟಾರು ಆನ್ ಮಾಡಿ ನೀರಿನಿಂದ ಧೂಳು ಹಿಡಿದ ವಸ್ತುಗಳನ್ನು ತೊಳೆಯುತ್ತಿದ್ದರು. ಈ ವೇಳೆ ಶಾಟ್ ಸರ್ಕ್ಯೂಟ್​ನಿಂದ ವಿದ್ಯುತ್ ಶಾಕ್​ ಹೊಡೆದಿದೆ.

  • Share this:

ಹೈದರಾಬಾದ್​: ಸ್ವಚ್ಛಮಾಡುವ ವಿದ್ಯುತ್ ಸ್ಪರ್ಶವಾಗಿ (Electrocuted ) ಮಹಿಳೆಯೊಬ್ಬರು (Woman) ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿ ಆಕೆಯ ಪತಿ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಆ ಪ್ರಯತ್ನದಲ್ಲಿ ಪತ್ನಿಯ ಜೊತೆ ಪತಿಯೂ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯಿಂದ ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆ ತೆಲಂಗಾಣದ (Telangan) ಮಂಚಿರ್ಯಾಲ ಜಿಲ್ಲೆಯ ಚೆನ್ನೂರು (Chennur) ಪಟ್ಟಣದಲ್ಲಿದೆ. ವಿದ್ಯುತ್ ಸ್ಪರ್ಶದಿಂದ ದಂಪತಿಗಳಿಬ್ಬರು (Couple) ಸಾವನ್ನಪ್ಪಿರುವ ಘಟನೆಯಿಂದ ಸಂಬಂಧಿಕರು, ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಅಕ್ಕಸಾಲಿಗ (Goldsmith) ಕೆಲಸ ಮಾಡುತ್ತಿರುವ ಬೊಳ್ಳಂಪಲ್ಲಿ ಶ್ರೀನಿವಾಸ್ ಅವರ ಪತ್ನಿ ಲತಾ ಸಾವನ್ನಪ್ಪಿದ್ದಾರೆ.


ಹೆಂಡತಿ ಪ್ರಾಣ ಉಳಿಸಲು ಹೋಗಿ ಪ್ರಾಣ ತ್ಯಾಗ ಮಾಡಿದ ಪತಿ


ಮಂಚಿರ್ಯಾಲ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿ ಕುಟುಂಬ ಸಮೇತ ವಾಸವಿದ್ದ ಬೊಳ್ಳಂಪಲ್ಲಿ ಶ್ರೀನಿವಾಸ್ ಅಕ್ಕಸಾಲಿಗ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ನಗರ ಅಕ್ಕಸಾಲಿಗರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ವಿದ್ಯುತ್ ಸ್ಪರ್ಶದಿಂದ ಶ್ರೀನಿವಾಸ್ ಮತ್ತು ಅವರ ಪತ್ನಿ ಲತಾ ಸಾವನ್ನಪ್ಪಿದ್ದಾರೆ. ತಡರಾತ್ರಿ ಬಿರುಗಾಳಿ ಸಹಿತ ಮಳೆ ಅನಾಹುತ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Dog Attack: ಬೀದಿ ನಾಯಿಗಳ ದಾಳಿಗೆ 18 ತಿಂಗಳ ಮಗು ಬಲಿ! ಮನೆ ಮುಂದೆ ಆಟ ಆಡುತ್ತಿದ್ದ ಕಂದಮ್ಮ ದಾರುಣ ಸಾವು

 ಆವರಣ ಸ್ವಚ್ಛಗೊಳಿಸುವ ವೇಳೆ ಕರೆಂಟ್ ಶಾಕ್


ಮನೆಯ ಆವರಣದಲ್ಲಿ ಶೇಖರಣೆಯಾಗಿರುವ ಧೂಳನ್ನು ಸ್ವಚ್ಛಗೊಳಿಸುವ ಸಲುವಾಗಿ ಲತಾ ಶುಕ್ರವಾರ ಬೆಳಗ್ಗೆ ವಿದ್ಯುತ್ ಮೋಟಾರು ಆನ್ ಮಾಡಿ ನೀರಿನಿಂದ ಧೂಳು ಹಿಡಿದ ವಸ್ತುಗಳನ್ನು ತೊಳೆಯುತ್ತಿದ್ದರು. ಈ ವೇಳೆ ಶಾಟ್ ಸರ್ಕ್ಯೂಟ್ ನಿಂದ ವಿದ್ಯುತ್ ಸ್ಪರ್ಶಗೊಂಡು ಕಿರುಚಾಡಿದ್ದಾರೆ. ಕಿರುಚಾಟದ ಶಬ್ಧ ಕೇಳಿ ಲತಾಳನ್ನು ರಕ್ಷಿಸುವ ಯತ್ನದಲ್ಲಿ ಮನೆಯಲ್ಲಿದ್ದ ಶ್ರೀನಿವಾಸ್ ಪತ್ನಿಯನ್ನು ಹಿಡಿದುಕೊಂಡಿದ್ದಾರೆ. ಪರಿಣಾಮ ದಂಪತಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ.




ಮಗ ಸೊಸೆ ಕಳೆದುಕೊಂಡು ವೃದ್ಧ ತಂದೆ ರೋಧನೆ


ಮೃತ ಶ್ರೀನಿವಾಸ್ ಅವರ ತಂದೆ ಲಕ್ಷ್ಮೀನಾರಾಯಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಐದು ವರ್ಷಗಳ ಹಿಂದೆ ಹಿರಿಯ ಮಗ ಕೂಡ ಸಾವನ್ನಪ್ಪಿದ್ದರು. 70ರ ವಯಸ್ಸಿನ ವೃದ್ಧ ತನ್ನ ಕಿರಿಯ ಮಗ ಶ್ರೀನಿವಾಸ್​ ಮತ್ತು ಕುಟುಂಬದ ಜೊತೆಗಿದ್ದುಕಾಲ ಕಳೆಯುತ್ತಿದ್ದರು. ಒಂದೆಡೆ ಹೆಂಡತಿಯನ್ನು ಕಳೆದುಕೊಂಡು, ಮತ್ತೊಂದೆಡೆ ಹಿರಿಯ ಮಗನ ಸಾವಿನ ದುಃಖದಲ್ಲಿದ್ದ ವೃದ್ಧನಿಗೆ ಮಗ-ಸೊಸೆ ಸಾವು ಮತ್ತೊಂದು ಆಘಾತ ಎದುರಾಗಿದೆ.


ಅನಾಥವಾದ ಮಕ್ಕಳು


ಮೃತ ಶ್ರೀನಿವಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ವಿಧಿ ಇಬ್ಬರು ಮಕ್ಕಳ ಪಾಲಕರನ್ನು ಕಿತ್ತುಕೊಳ್ಳುವ ಮೂಲಕ ಅನಾಥರನ್ನಾಗಿ ಮಾಡಿದೆ. ಶ್ರೀನಿವಾಸ್ ಅವರ ಹಿರಿಯ ಮಗ ಡಿಗ್ರಿ ಓದುತ್ತಿದ್ದರೆ, ಕಿರಿಯ ಮಗ 10ನೇ ತರಗತಿ ಓದುತ್ತಿದ್ದರು. ವಿದ್ಯುತ್ ಸ್ಪರ್ಶದಿಂದ ತಂದೆ-ತಾಯಿ ಸಾವನ್ನಪ್ಪಿದ್ದರಿಂದ ಇಬ್ಬರು ಮಕ್ಕಳನ್ನು ಅನಾಥರಾಗಿದ್ದರು.


ಇದನ್ನೂ ಓದಿ: Acid Attack: ಮದುವೆ ಮನೆಗೆ ಒಳಗೇ ನಡೆಯಿತು ಆ್ಯಸಿಡ್ ದಾಳಿ! ವಧು-ವರ ಸೇರಿ 12 ಮಂದಿಗೆ ಗಂಭೀರ ಗಾಯ


ದೇವರ ಕೃಪೆಗಾಗಿ ತಲೆ ಕತ್ತರಿಸಿಕೊಂಡು ಸಾವನ್ನಪ್ಪದಿ ದಂಪತಿ


ದಂಪತಿ ತಮ್ಮ ತಲೆಯನ್ನು ತಾವೇ ಕಡಿದುಕೊಂಡ ಸಾವನ್ನಪ್ಪಿರುವ ಭಯಾನಕ ಘಟನೆ ಗುಜರಾತ್​ನ ರಾಜ್​ಕೋಟ್​ ಜಿಲ್ಲೆಯ ವಿಂಚಿಯಾ ಎಂಬ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 38 ವರ್ಷ ವಯಸ್ಸಿನ ರೈತ ಹಾಗೂ ಆತನ ಪತ್ನಿ ತಾವೇ ತಯಾರಿಸಿಕೊಂಡಿದ್ದ ಗಿಲೋಟಿನ್ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ಸಾವಿಗೆ ಶರಣಾಗಿದ್ದಾರೆ.

top videos
    First published: