ಬೆಂಗಳೂರು(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹಲವು ಗಂಟೆಗಳ ಸುಧೀರ್ಘ ಭಾಷಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿದ ಸೀತಾರಾಮನ್, ಮಧ್ಯಾಹ್ನ 1:40ಕ್ಕೆ ಮುಗಿಸಿದರು. ಸುಮಾರು 2 ಗಂಟೆ 40 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿದರು. ಒಟ್ಟು 160 ನಿಮಿಷಗಳ ಬಜೆಟ್ ಭಾಷಣ ಮಾಡಿದ ಸೀತಾರಾಮನ್ ದಾಖಲೆ ನಿರ್ಮಿಸಿದರು. ಆದರೀಗ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಇತಿಹಾಸದಲ್ಲೇ ಸುದೀರ್ಘವಾಗಿತ್ತು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಹೀಗೆ ಹೊಗಳುವ ರೀತಿಯಲ್ಲೇ ಕೇಂದ್ರ ಸರ್ಕಾರದ ಬಜೆಟ್ ಅನ್ನು ವಿಭಿನ್ನವಾಗಿ ಟೀಕಿಸಿದ್ದಾರೆ.
ದೇಶದಲ್ಲಿ ಉದ್ಯೋಗ ಸಮಸ್ಯೆ ವ್ಯಾಪಕವಾಗಿದೆ. ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ನಿರುದ್ಯೋಗ ನಿವಾರಣೆಗೆ ಯಾವುದೇ ಕಾರ್ಯತಂತ್ರ ಕೈಗೊಂಡಿಲ್ಲ. ಯುವಕರಿಗೆ ಉದ್ಯೋಗ ನೀಡುವ ನಿಟ್ಟಿಯಲ್ಲಿಯೂ ಯೋಜನೆಗಳು ಘೋಷಣೆ ಮಾಡಿಲ್ಲ. ಇದೊಂದು ದೂರದೃಷ್ಟಿಯಿಲ್ಲದ ಬಜೆಟ್ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕುಟುಕಿದ್ದಾರೆ.
Our youth want jobs. Instead they got the longest budget speech in parliamentary history that said absolutely nothing of consequence.
PM & FM both looked like they have absolutely no clue what to do next.
#Budget2020 pic.twitter.com/5oUCs8rp32
— Rahul Gandhi (@RahulGandhi) February 1, 2020
ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ತಯಾರಿಸುವಲ್ಲಿ ವಿಫರಾಗಿದ್ದಾರೆ. ದೇಶದ ಜಿಡಿಪಿ ಮತ್ತು ವಿತ್ತೀಯ ಕೊರತೆ ಸೇರಿದಂತೆ ಹಣ ಹೂಡಿಕೆ ಬಗ್ಗೆಯೂ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಇದೊಂದು ಭರವಸೆ ಇಲ್ಲದ ಬಜೆಟ್ ಎನ್ನುವ ಮೂಲಕ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಕಿಡಿಕಾರಿದ್ದಾರೆ.
P Chidambaram,Congress: In 2019-20, Finance Minister failed to meet any of the key Budget Estimate targets — nominal GDP growth,fiscal deficit,net tax revenue collection, disinvestment revenue or total expenditure. There is no assurance that she will meet targets set for 2020-21. pic.twitter.com/4Cg2zFsRaH
— ANI (@ANI) February 1, 2020
ಕೇಂದ್ರದ ಬಜೆಟ್ಗೆ ಪ್ರಶಂಸೆ
ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ರೈತ ಮತ್ತು ಅಭಿವೃದ್ದಿಪರವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Chief Minister Yogi Adityanath: I congratulate Prime Minister Modi and Finance Minister Nirmala Sitharaman for this development oriented and pro-farmer budget. This Budget will further strengthen the economy. pic.twitter.com/DX5V2U9BzJ
— ANI UP (@ANINewsUP) February 1, 2020
I congratulate Hon'ble FM @nsitharaman ji for presenting people centric, pro farmer and business friendly budget. I am very optimistic that this all round balanced budget will be helpful in stimulating growth and creating jobs.
— Sadananda Gowda (@DVSadanandGowda) February 1, 2020
ಇದನ್ನೂ ಓದಿ: Budget 2020: ‘ಜನಸ್ನೇಹಿ ಮತ್ತು ದೂರದೃಷ್ಟಿ ಬಜೆಟ್ ಇದಾಗಿದೆ‘; ಸಿಎಂ ಯಡಿಯೂರಪ್ಪ
ಕೃಷಿಕರು, ಮಧ್ಯಮರ್ಗದವರು, ಉದ್ಯಮಿಗಳು, ನವೋದ್ಯಮಿಗಳು ಎಲ್ಲರ ಅಗತ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ. ಇದು ರೈತರಿಗೆ ಬಹುವಾಗಿ ಸಹಾಯಕವಾಗಲಿದೆ ಎಂದರು ಅಮಿತ್ ಶಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ