• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕಂಗನಾ VS ಶಿವಸೇನೆ ಜಟಾಪಟಿ; ನಟಿಯ ಧೈರ್ಯವನ್ನು ಭಗತ್ ಸಿಂಗ್‌ಗೆ ಹೋಲಿಸಿದ ಖ್ಯಾತ ಟಾಲಿವುಡ್‌ ನಟ ವಿಶಾಲ್

ಕಂಗನಾ VS ಶಿವಸೇನೆ ಜಟಾಪಟಿ; ನಟಿಯ ಧೈರ್ಯವನ್ನು ಭಗತ್ ಸಿಂಗ್‌ಗೆ ಹೋಲಿಸಿದ ಖ್ಯಾತ ಟಾಲಿವುಡ್‌ ನಟ ವಿಶಾಲ್

ನಟಿ ಕಂಗನಾ ರನೌತ್‌.

ನಟಿ ಕಂಗನಾ ರನೌತ್‌.

ಸಮಾಜದಲ್ಲಿ ಏನಾದರೂ ಸರಿಯಾಗಿಲ್ಲದಿದ್ದಾಗ ಸೆಲೆಬ್ರಿಟಿಗಳೂ ಸಹ ಸಾಮಾನ್ಯ ವ್ಯಕ್ತಿಯಾಗಿ ಸರ್ಕಾರದ ವಿರುದ್ಧ ಮಾತನಾಡಲು ಇದು ಒಂದು ಉತ್ತಮ ಉದಾಹರಣೆಯಾಗಲಿದೆ. ನಿಮಗೆ ನಾನು ನಮಸ್ಕರಿಸುತ್ತೇನೆ" ಎಂದು ವಿಶಾಲ್ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

  • Share this:

    ಚೆನ್ನೈ (ಸೆಪ್ಟೆಂಬರ್‌ 10); ದಿವಂಗತ ಬಾಲಿವುಡ್‌ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಆಢಳಿತರೂಢ ಪಕ್ಷ ಶಿವಸೇನೆ ಮತ್ತು ಬಾಲಿವುಡ್‌ ನಟಿ ಕಂಗನಾ ರನೌತ್‌ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಈ ನಡುವೆ ಮುಂಬೈ ನಗರದ ಬಾಂದ್ರಾದಲ್ಲಿರುವ ಕಂಗನಾ ಕಚೇರಿ ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ ನಗರ ಪಾಲಿಕೆ ನಿನ್ನೆ ಕಟ್ಟಡವನ್ನು ನೆಲಸಮ ಮಾಡಿತ್ತು. ಇದರ ಬೆನ್ನಿಗೆ ನಟಿ ಕಂಗನಾಗೆ ರಾಷ್ಟ್ರಾದ್ಯಂತ ಹಲವರು ಬೆಂಬಲ ಸೂಚಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ತಮಿಳುನಾಡಿನ ಖ್ಯಾತ ನಟ ವಿಶಾಲ್ ಸಹ ಸೇರ್ಪಡೆಯಾಗಿದ್ದಾರೆ, ಈ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ವಿಶಾಲ್,  ಕಂಗನಾ ಅವರ ಧೈರ್ಯವನ್ನು ಸ್ವಾತಂತ್ಯ್ರ ಹೋರಾಟಗಾರ ಭಗತ್‌ ಸಿಂಗ್‌ಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ, ಸರ್ಕಾರದ ವಿರುದ್ಧವೇ ಧ್ವನಿ ಎತ್ತಿರುವ ಅವರ ಧೈರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.


    ನಟ ವಿಶಾಲ್ ಮಾಡಿರುವ ಟ್ವೀಟ್‌ನಲ್ಲಿ, "ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ನೀಡಲು ನೀವು ಎಂದಿಗೂ ಎರಡು ಬಾರಿ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ. ಆದರೆ ಆಗಲೂ ಸರ್ಕಾರದ ಕೋಪವನ್ನು ನೀವು ಎದುರಿಸುತ್ತಿದ್ದೀರ. ಆದರೂ ಎದೆಗುಂಡದ ನಿಮ್ಮ ದೃಢತೆ ಭವಿಷ್ಯದಲ್ಲಿ ದೊಡ್ಡ ಉದಾಹರಣೆಯಾಗಿ ಬಳಕೆಯಾಗಲಿದೆ. ಇದು 1920 ರ ದಶಕದಲ್ಲಿ ಭಗತ್ ಸಿಂಗ್ ತೋರಿದ ಧೈರ್ಯಕ್ಕೆ ಸಮನಾಗಿದೆ.



    "ಸಮಾಜದಲ್ಲಿ ಏನಾದರೂ ಸರಿಯಾಗಿಲ್ಲದಿದ್ದಾಗ ಸೆಲೆಬ್ರಿಟಿಗಳೂ ಸಹ ಸಾಮಾನ್ಯ ವ್ಯಕ್ತಿಯಾಗಿ ಸರ್ಕಾರದ ವಿರುದ್ಧ ಮಾತನಾಡಲು ಇದು ಒಂದು ಉತ್ತಮ ಉದಾಹರಣೆಯಾಗಲಿದೆ. ನಿಮಗೆ ನಾನು ನಮಸ್ಕರಿಸುತ್ತೇನೆ" ಎಂದು ವಿಶಾಲ್ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.


    ಇದನ್ನೂ ಓದಿ : ಆತ್ಮಹತ್ಯೆ ತಡೆ ದಿನ; ದೇಶದಲ್ಲಿ ಏರುತ್ತಿರುವ ಆತ್ಮಹತ್ಯೆಗಳ ಸಂಖ್ಯೆ, ಇದಕ್ಕೆ ಕಾರಣವೇನು? ತಡೆಯುವುದು ಹೇಗೆ?


    ನಟ ವಿಶಾಲ್‌ ಸಹ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟುವಿಗೆ ಕೇಂದ್ರ ಸರ್ಕಾರ ತಡೆ ನೀಡಿದ್ದಾಗ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಿದ್ದರು. ಅಲ್ಲದೆ ಇವರು ನಟ ರಾಜಕಾರಣಿ ಕಮಲಹಾಸನ್ ಅವರ ಆಪ್ತ ಎಂದೂ ಹೇಳಲಾಗುತ್ತಿದೆ.


    ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರನೌತ್ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಬಯೋಪಿಕ್‌ನಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಇನ್ನೂ ತೆರೆಗೆ ಬಂದಿಲ್ಲ. ಆದರೂ, ತಮಿಳುನಾಡಿನಲ್ಲಿ ಕಂಗನಾ ರನೌತ್‌ ಜನಪ್ರಿಯತೆಗೆ ಕಡಿಮೆ ಇಲ್ಲ ಎನ್ನಲಾಗುತ್ತಿದೆ.

    Published by:MAshok Kumar
    First published: