ಹರಿಯಾಣ; ತನ್ನ 11ನೇ ತರಗತಿ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ!

ಶಿಕ್ಷಕಿ.

ಶಿಕ್ಷಕಿ.

ಘಟನೆಯ ನಂತರ ಶಿಕ್ಷಕಿಯ ಕುಟುಂಬವು ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ, ಆಕೆಯ ತಂದೆ ಹುಡುಗ ಜೊತೆ ತಮ್ಮ ಮಗಳು ಓಡಿಹೋಗಿರುವದನ್ನು ಹುಡುಗನ ಪೋಷಕರಿಗೆ ನಂತರ ತಿಳಿಸಿದ್ದಾರೆ.

  • Share this:

    ಹರಿಯಾಣ: ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧವು ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಹರಿಯಾಣದ ಪಾಣಿಪತ್ ನಗರದಲ್ಲಿ ಈ ಸಂಬಂಧವು ಕಳಂಕಿತವಾಗಿದೆ. ಅಲ್ಲಿ ಬೋಧನಾ ಶಿಕ್ಷಕಿಯೊಬ್ಬಳು ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಂದಿಗೆ ಓಡಿಹೋಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕಳೆದ ವಾರ ಖಾಸಗಿ ಶಾಲಾ ಶಿಕ್ಷಕಿ ಅಪ್ರಾಪ್ತ ವಯಸ್ಕ ಹುಡುಗನೊಂದಿಗೆ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ನಾಪತ್ತೆಯಾದ ನಂತರ, ವಿದ್ಯಾರ್ಥಿಯ ಪೋಷಕರು ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ಕಳೆದ ಎರಡು ಮೂರು ತಿಂಗಳಿನಿಂದ ಮಗನಿಗೆ ಟ್ಯೂಷನ್ ನೀಡುತ್ತಿದ್ದಳು. ಈ ವೇಳೆ ಆತನ ಜೊತೆ ಸಲುಗೆ ಬೆಳೆಸಿ ಇದೀಗ ಓಡಿ ಹೋಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.


    ಪೋಷಕರ ಪ್ರಕಾರ, ಮೇ 29 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ 17 ವರ್ಷದ ಮಗ ದೇಸರಾಜ್, ಕಾಲೋನಿಯಲ್ಲಿರುವ ತನ್ನ ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಲಾಕ್​ಡೌನ್ ಸಮಯದಲ್ಲಿ, ಅವರು ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾಲ ಆತನಿಗೆ ಪಾಠ ಕಲಿಸುತ್ತಿದ್ದರು. ಆದರೆ, ಆ ದಿನ ಸಂಜೆಯಾದರೂ ಆತ ಮನೆಗೆ ಹಿಂದಿರುಗದಿದ್ದನ್ನು ಗಮನಿಸಿ ಗಾಬರಿಯಾಗಿದ್ದ ಪೋಷಕರು ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.


    ವಿಚ್ಚೇಧನದ ನಂತರ ಅವಳು ತನ್ನ ಹೆತ್ತವರೊಂದಿಗೆ ಆ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಘಟನೆಯ ನಂತರ ಶಿಕ್ಷಕಿಯ ಕುಟುಂಬವು ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ, ಆಕೆಯ ತಂದೆ ಹುಡುಗ ಜೊತೆ ತಮ್ಮ ಮಗಳು ಓಡಿಹೋಗಿರುವದನ್ನು ಹುಡುಗನ ಪೋಷಕರಿಗೆ ನಂತರ ತಿಳಿಸಿದ್ದಾರೆ. ಆನಂತರ ಬಾಲಕನ ಪೋಷಕರು ಕೋಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.


    ದೂರಿನ ಆಧಾರದ ಮೇಲೆ,  20 ರ ಹರೆಯದ ಮಹಿಳೆಯ ಮೇಲೆ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಓಡಿ ಹೋಗುವಾಗ ಅವರಲ್ಲಿ ಯಾರೂ ಯಾವುದೇ ಬೆಲೆಬಾಳುವ ವಸ್ತುಗಳನ್ನು ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾದಾಗ ಮಹಿಳೆ ಬೆರಳಿನಲ್ಲಿ ಚಿನ್ನದ ಉಂಗುರ ಮಾತ್ರ ಇತ್ತು. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಇವರಿಬ್ಬರ ಹುಡುಕಾಟದಲ್ಲಿದ್ದಾರೆ. ಆದಾಗ್ಯೂ, ಅವರು ಇರುವ ಸ್ಥಳದ ಬಗ್ಗೆ ಯಾವುದೇ ಸುಳಿವು ಕಂಡುಬಂದಿಲ್ಲ. ನಾಪತ್ತೆಯಾದಾಗಿನಿಂದ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.


    ಇದನ್ನೂ ಓದಿ: Karnataka Politics: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಜೆ.ಪಿ. ನಡ್ಡಾ ಭೇಟಿ ಮಾಡಿದ ಬಿ.ವೈ‌. ವಿಜಯೇಂದ್ರ!


    ತನಿಖಾ ಅಧಿಕಾರಿ ರಾಣಾ ಪ್ರತಾಪ್ ಪ್ರಕಾರ, ಪೊಲೀಸರು ಶಿಕ್ಷಕ ಮತ್ತು ವಿದ್ಯಾರ್ಥಿ ಇಬ್ಬರ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಕೆಲವು ಮಾಹಿತಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:MAshok Kumar
    First published: