ತಮ್ಮ ಆದೇಶವನ್ನು ಅನುಸರಿಸುವಂತೆ ತಿಳಿಸಿ ಕೇಂದ್ರ ಸರ್ಕಾರ ಟ್ವಿಟರ್ಗೆ ನೋಟೀಸ್ ಜಾರಿ ಮಾಡಿದೆ. #ModiPlanningFarmerGenocide ಎಂಬ ಹ್ಯಾಷ್ಟ್ಯಾಗ್ಗಳೊಂದಿಗೆ ಅನೇಕ ಟ್ವೀಟ್ ಮಾಡಲಾಗಿದೆ. ಇವು ಜನರಲ್ಲಿ ಭಾವನೆಗಳನ್ನು ಕೆರಳಿಸುವಂತೆ ಇದೆ. ಇದು ದ್ವೇಷ ಬಿತ್ತುವ ಪರಿಕಲ್ಪನೆಯಾಗಿದ್ದು, ವಾಸ್ತವಕ್ಕೆ ದೂರಾವಾಗಿದೆ. ಇದೊಂದು ಆಧಾರರಹಿತ, ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ರೂಪಿಸಿರುವ ಅಭಿಯಾನವಾಗಿದೆ ಎಂದು ಆರೋಪಿಸಿ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ವಾಕ್ ಸ್ವಾತಂತ್ರ್ಯವಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆವೊಡ್ಡುವ ಕ್ರಿಯೆಯಾಗಿದೆ. ಈ ಹಿನ್ನಲೆ ಈ ಹ್ಯಾಷ್ಟ್ಯಾಗ್ ಅಡಿಯ ಟ್ವೀಟ್ ಮತ್ತು ಖಾತೆ ತೆಗೆದು ಹಾಕುವಂತೆ ಟ್ವಿಟರ್ಗೆ ನೋಟಿಸ್ ನೀಡಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಐಟಿ ಸಚಿವಾಲಯ ಈ ಆದೇಶವನ್ನು ಜಾರಿ ಮಾಡಿದೆ
ಗಣರಾಜ್ಯೋತ್ಸವ ದಿನದಂದು ದೆಹಲಿಯು ರೈತರ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಈ ಸಂದರ್ಭದಲ್ಲಿ ಟ್ವಿಟರ್ ಸರ್ಕಾರದ ನಿರ್ಧಾರದ ಹೊರತಾಗಿ ಕೆಲ ಅನಿರ್ಬಂಧಿತ ಖಾತೆಗಳನ್ನು ನಿರ್ಬಂಧಿಸಿತ್ತು.
ಟ್ವಿಟರ್ ಮಧ್ಯವರ್ತಿಯಾಗಿದ್ದು, ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕಾಗಿದೆ. ಒಂದು ವೇಳೆ ಅವರು ಸರ್ಕಾರದ ಈ ನಿರ್ದೇಶನವನ್ನು ಪಾಲಿಸದಿದ್ದರೆ, ದಂಡನ ಕ್ರಮಕ್ಕೆ ಗುರಿಯಾಗಬಹುದು.
ಇದನ್ನು ಓದಿ: ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ರೋಲಿಗೆ ಒಳಗಾದ ಅಮೆರಿಕ ಮಾಜಿ ನೀಲಿ ಚಿತ್ರತಾರೆ
ಯಾವುದು ಸಾರ್ವಜನಿಕ ಆದೇಶ ಮತ್ತು ಅಧಿಕಾರಿಗಳ ಹಕ್ಕುಗಳು ಯಾವುದು ಎಂಬ ಕುರಿತು ಸರ್ಕಾರ ಸುಪ್ರೀಂಕೋರ್ಟ್ನ ಸಂವಿಧಾನಿಕ ಪೀಠ ತಿಳಿಸಿದ ಅನೇಕ ತೀರ್ಪುಗಳನ್ನು ಉಲ್ಲೇಖಿಸಿ ನೋಟಿಸ್ ಜಾರಿ ಮಾಡಿದೆ.
ಮಾಹಿತಿ ತಂತ್ರಜ್ಞಾನದ ಕಾಯ್ದೆ 69ರ ಅಡಿ ಈ ಟ್ವೀಟ್ಗಳನ್ನು ತೆಗೆದುಹಾಕುವಂತೆ ತಿಳಿಸಲಾಗಿದೆ. ಸೋಮವಾರ ಈ ಹ್ಯಾಷ್ಟ್ಯಾಗ್ ಅಡಿ 100 ಟ್ವಿಟರ್ ಹಾಗೂ ರೈತರ ಪ್ರತಿಭಟನೆ ಸಂಬಂಧ 150 ಟ್ವೀಟ್ಗಳಾಗಿದ್ದವು.
ಟ್ವಿಟರ್ ಮಧ್ಯವರ್ತಿಯಾಗಿರುವುದರಿಂದ ಜನರನ್ನು ಪ್ರೇರೆಪಿಸುವ ಹಿನ್ನಲೆ ಅಂತಹವುಗಳನ್ನು ನಿರ್ಬಂಧಿಸಲು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ಅಲ್ಲದೇ, ಅಧಿಕಾರಿಗಳ ಈ ಆದೇಶದ ವಿರುದ್ಧ ಹೋಗುವ ಅಧಿಕಾರವನ್ನು ಹೊಂದಿರುವುದಿಲ್ಲ. ಜೊತೆಗೆ ಟ್ವಿಟರ್ ನ್ಯಾಯವನ್ನು ನಿರ್ಣಯಿಸುವ ಪಾತ್ರವನ್ನುವಹಿಸುವಂತಿಲ್ಲ. ಸರ್ಕಾರದ ಆದೇಶವನ್ನು ಟ್ವಿಟರ್ ಪಾಲಿಸದಿದ್ದರೆ ಅದು ದಂಡನ ಕ್ರಮವನ್ನು ಎದುರಿಸಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ