Rajasthan Political Crisis | ಫೈರ್ಮೌಂಟ್ ಹೋಟೆಲ್ನಿಂದ ಜೈಸಲ್ಮೇರ್ಗೆ ಪ್ರಯಾಣ ಬೆಳೆಸಿದ ಸಿಎಂ ಗೆಹ್ಲೋಟ್ ಬಣದ ಶಾಸಕರು
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಜುಲೈ 13ರಂದು ಬಹಿರಂಗವಾಗಿ ಬಂಡಾಯವೆದ್ದು, ತಮ್ಮ ಬಳಿ ಕಾಂಗ್ರೆಸ್ನ 30 ಶಾಸಕರು ಹಾಗೂ ಪಕ್ಷೇತರ ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತಾರಕಕ್ಕೆ ಏರಿರುವುದರ ಜೊತೆಗೆ ಕುತೂಹಲವನ್ನು ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
news18-kannada Updated:July 31, 2020, 2:44 PM IST

ಗೆಹ್ಲೋಟ್ ಬಣದ ಶಾಸಕರು ಬಸ್ಸಿನಲ್ಲಿ ಫೈರ್ಮೌಂಟ್ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಹೊರಟಿರುವುದು.
- News18 Kannada
- Last Updated: July 31, 2020, 2:44 PM IST
ಜೈಪುರ; ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿತ ಕಾಂಗ್ರೆಸ್ ಶಾಸಕರು ಫೈರ್ಮೌಂಟ್ ಹೋಟೆಲ್ನಿಂದ ಬಸ್ಸಿನ ಮೂಲಕ ವಿಮಾನ ನಿಲ್ದಾಣ ತಲುಪಿದ್ದಾರೆ. ಆಗಸ್ಟ್ 14ರಂದು ನಿಗದಿಯಾಗಿರುವ ವಿಧಾನಸಭಾ ಅಧಿವೇಶನದವರೆಗೂ ಅವರು ಜೈಸಲ್ಮೇರ್ಗೆ ತೆರಳಲಿದ್ದಾರೆ.
ಎಲ್ಲ ಶಾಸಕರುಗಳ ಗುರುತಿನ ಚೀಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಇವರೆಲ್ಲರೂ ಮಾರಿಯಟ್ ಹೋಟೆಲ್ ಅಥವಾ ಸೂರ್ಯಗರ್ ರೆಸಾರ್ಟ್ನಲ್ಲಿ ತಂಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಚಿವರುಗಳು ವಾಪಸ್ಸಾಗಿ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಎರಡು ಚಾರ್ಟರ್ ವಿಮಾನಗಳು ಎಲ್ಲ ಶಾಸಕರನ್ನು ಜೈಸಲ್ಮೇರ್ಗೆ ಕರೆದೊಯ್ಯಲಿವೆ. ಫೈರ್ಮೌಂಟ್ ಹೋಟೆಲ್ನಿಂದ ಎಲ್ಲ ಶಾಸಕರನ್ನು ಬಸ್ಸಿನ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಜೈಸಲ್ಮೇರ್ ಪೊಲೀಸರಿಗೆ ಎಚ್ಚರಿಕೆ ಸಹ ನೀಡಲಾಗಿದೆ.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಸಿಎಂ ಗೆಹ್ಲೋಟ್ ನಡುವಿನ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಆಗಸ್ಟ್ 14ರಂದು ವಿಧಾನಸಭೆ ಅಧಿವೇಶನ ನಡೆಸಲು ಗಡುವು ನಿಗದಿ ಮಾಡಲಾಗಿದೆ.
ಬಿಜೆಪಿ ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಬಂದ ಬಳಿಕ ಜುಲೈ 13ರಂದು ಕಾಂಗ್ರೆಸ್ನ ಎಲ್ಲ ಶಾಸಕರನ್ನು ಜೈಪುರದ ಫೈರ್ಮೌಂಟ್ ಹೋಟೆಲ್ಗೆ ಸ್ಥಳಾಂತರಿಸಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಸಿಎಂ ಗೆಹ್ಲೋಟ್ ಅವರು ಆಗಸ್ಟ್ 14ರವರೆಗೆ ಎಲ್ಲ ಶಾಸಕರು ಜೈಪುರದ ಫೈರ್ಮೌಂಟ್ ಹೋಟೆಲ್ನಲ್ಲಿ ಇರುವಂತೆ ಶಾಸಕರಿಗೆ ಹೇಳಿದ್ದರು.
ಇದನ್ನು ಓದಿ: ಆಗಸ್ಟ್ 14ಕ್ಕೆ ರಾಜಸ್ಥಾನ ಅಧಿವೇಶನ; ಆಪರೇಷನ್ ಕಮಲಕ್ಕೆ ಹೆದರಿ ಎಲ್ಲಾ ಕೈ ಶಾಸಕರು ರೆಸಾರ್ಟ್ಗೆ ಶಿಫ್ಟ್
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಜುಲೈ 13ರಂದು ಬಹಿರಂಗವಾಗಿ ಬಂಡಾಯವೆದ್ದು, ತಮ್ಮ ಬಳಿ ಕಾಂಗ್ರೆಸ್ನ 30 ಶಾಸಕರು ಹಾಗೂ ಪಕ್ಷೇತರ ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತಾರಕಕ್ಕೆ ಏರಿರುವುದರ ಜೊತೆಗೆ ಕುತೂಹಲವನ್ನು ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲ ಶಾಸಕರುಗಳ ಗುರುತಿನ ಚೀಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಇವರೆಲ್ಲರೂ ಮಾರಿಯಟ್ ಹೋಟೆಲ್ ಅಥವಾ ಸೂರ್ಯಗರ್ ರೆಸಾರ್ಟ್ನಲ್ಲಿ ತಂಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಸಿಎಂ ಗೆಹ್ಲೋಟ್ ನಡುವಿನ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಆಗಸ್ಟ್ 14ರಂದು ವಿಧಾನಸಭೆ ಅಧಿವೇಶನ ನಡೆಸಲು ಗಡುವು ನಿಗದಿ ಮಾಡಲಾಗಿದೆ.
ಬಿಜೆಪಿ ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಬಂದ ಬಳಿಕ ಜುಲೈ 13ರಂದು ಕಾಂಗ್ರೆಸ್ನ ಎಲ್ಲ ಶಾಸಕರನ್ನು ಜೈಪುರದ ಫೈರ್ಮೌಂಟ್ ಹೋಟೆಲ್ಗೆ ಸ್ಥಳಾಂತರಿಸಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಸಿಎಂ ಗೆಹ್ಲೋಟ್ ಅವರು ಆಗಸ್ಟ್ 14ರವರೆಗೆ ಎಲ್ಲ ಶಾಸಕರು ಜೈಪುರದ ಫೈರ್ಮೌಂಟ್ ಹೋಟೆಲ್ನಲ್ಲಿ ಇರುವಂತೆ ಶಾಸಕರಿಗೆ ಹೇಳಿದ್ದರು.
ಇದನ್ನು ಓದಿ: ಆಗಸ್ಟ್ 14ಕ್ಕೆ ರಾಜಸ್ಥಾನ ಅಧಿವೇಶನ; ಆಪರೇಷನ್ ಕಮಲಕ್ಕೆ ಹೆದರಿ ಎಲ್ಲಾ ಕೈ ಶಾಸಕರು ರೆಸಾರ್ಟ್ಗೆ ಶಿಫ್ಟ್
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಜುಲೈ 13ರಂದು ಬಹಿರಂಗವಾಗಿ ಬಂಡಾಯವೆದ್ದು, ತಮ್ಮ ಬಳಿ ಕಾಂಗ್ರೆಸ್ನ 30 ಶಾಸಕರು ಹಾಗೂ ಪಕ್ಷೇತರ ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತಾರಕಕ್ಕೆ ಏರಿರುವುದರ ಜೊತೆಗೆ ಕುತೂಹಲವನ್ನು ಮೂಡಿಸಿದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.