Gangster Vikas Dubey arrested: ಉತ್ತರ ಪ್ರದೇಶದಲ್ಲಿ 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್​ ದುಬೆ ಬಂಧನ

ವಿಕಾಸ್

ವಿಕಾಸ್

ವಿಕಾಸ್​ ವಿರುದ್ಧ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ರಾಜನಾಥ್​ ಸಿಂಗ್ ಸರ್ಕಾರವಿದ್ದಾಗ ಮಂತ್ರಿ ಆಗಿದ್ದ ಸಂತೋಷ್​ ಶುಕ್ಲಾ ಸೇರಿ ಸಾಕಷ್ಟು ಜನರನ್ನು ಹತ್ಯೆ ಮಾಡಿದ ಕೇಸ್​ನಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ.

  • Share this:
top videos

    ಕಾನ್ಪುರ (ಜು.9): 8 ಪೊಲೀಸರನ್ನು ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ ಗ್ಯಾಂಗಸ್ಟರ್​ ವಿಕಾಸ್​ ದುಬೆಯನ್ನು ಉತ್ತರ ಪ್ರದೇಶ ಪೊಲೀಸರು ಉಜ್ಜಯಿನಿಯಲ್ಲಿ ಬಂಧಿಸಿದ್ದಾರೆ. ವಿಕಾಸ್​ ಸಹಚರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ವಿಕಾಸ್​ನನ್ನು ಬಂಧಿಸಲಾಗಿದೆ.

    ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ಕುಖ್ಯಾತ ಗ್ಯಾಂಗಸ್ಟರ್​ ವಿಕಾಸ್​ ದುಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್​ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್​ಪುರ ಪೊಲೀಸ್​ ಠಾಣಾಧಿಕಾರಿ ಮಹೇಶ್​ ಯಾದವ್​, ಸಬ್​ ಇನ್ಸ್​ಪೆಕ್ಟರ್​, ಐದು ಕಾನ್​​ಸ್ಟೇಬಲ್​ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

    ಈ ಘಟನೆ ನಂತರ ವಿಕಾಸ್​ ತಲೆಮೆರಿಸಿಕೊಂಡಿದ್ದ. ಈತನಿಗಾಗಿ ಪೊಲೀಸರು ನಾನಾ ಕಡೆಗಳಲ್ಲಿ ಹುಡುಕಿದ್ದರು. ನಿನ್ನೆ ಈತ ಹರಿಯಾಣದ ಹೋಟೆಲ್​ ಒಂದರಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿತ್ತು. ಈ ಮಧ್ಯೆ ಆತನ ಆಪ್ತ ಅಮರ್, ಸಹಚರರಾದ ಪ್ರಭಾತ್ ಹಾಗೂ ರಣಬೀರ್​​ನನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದರು. ಈ ಬೆನ್ನಲ್ಲೇ ಈಗ ವಿಕಾಸ್​ನನ್ನು ಬಂಧಿಸಲಾಗಿದೆ.


    ಇದನ್ನೂ ಓದಿ: ಪೊಲೀಸರು ಬರುವ ಸುಳಿವನ್ನು ಗ್ಯಾಂಗ್​ಸ್ಟರ್ ವಿಕಾಸ್ ದುಬೇಗೆ ನೀಡಿದ ಆರೋಪ: ಇಬ್ಬರ ಬಂಧನ

    ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್​ ಅಡಗಿರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಸದ್ಯ, ಈತನ್ನು ಕಾನ್ಪುರಕ್ಕೆ ಕರೆತರಲಾಗುತ್ತಿದ್ದು, ಶೀಘ್ರವೇ ಕೋರ್ಟ್​ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

    ವಿಕಾಸ್​ ವಿರುದ್ಧ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ರಾಜನಾಥ್​ ಸಿಂಗ್ ಸರ್ಕಾರವಿದ್ದಾಗ ಮಂತ್ರಿ ಆಗಿದ್ದ ಸಂತೋಷ್​ ಶುಕ್ಲಾ ಸೇರಿ ಸಾಕಷ್ಟು ಜನರನ್ನು ಹತ್ಯೆ ಮಾಡಿದ ಕೇಸ್​ನಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ.

    First published: