ಗುಜರಾತ್: ಮಹಾತ್ಮಾ ಗಾಂಧಿಯವರ (Mahatma Gandhi) ನಾಡು ಗುಜರಾತ್ನಲ್ಲಿ (Gujarat) ಚುನಾವಣಾ ಬಿಸಿ (Election heat) ಜೋರಾಗಿದೆ. ಎರಡು ಹಂತಗಳಲ್ಲಿ (two phases) ಎಲೆಕ್ಷನ್ ನಡೆಯಲಿದೆ. ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 5ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಇನ್ನು ಡಿಸೆಂಬರ್ 8ರಂದು ರಿಸಲ್ಟ್ (Result) ಹೊರಬರಲಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವನ್ನು (BJP government) ಕೆಳಗಿಳಿಸುವುದಕ್ಕೆ ಕಾಂಗ್ರೆಸ್ (Congress) ಹಾಗೂ ಎಎಪಿ (AAP) ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ನಡುವೆ ಪ್ರಚಾರದ ಭರಾಟೆಯಲ್ಲಿ ರಾಜಕೀಯ ನಾಯಕರು (political leaders) ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಮಾಜಿ ಸಿಎಂ ಹಾಗೂ ಗುಜರಾತ್ ಕಾಂಗ್ರೆಸ್ ಹಿರಿಯ ನಾಯಕ ಶಂಕರ್ಸಿಂಗ್ ವಘೇಲಾ (former CM Shankarsinh Vaghela) ಅಯೋಧ್ಯಾ ಶ್ರೀರಾಮಮಂದಿರ (Ayodhya Sri Ram Mandir) ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆ ರಾಮಮಂದಿರ ಕುರಿತಂತೆ ವಿವಾದಾತ್ಮಕ ಹೇಳಿಕೆ
ಗುಜರಾತ್ನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಚಾರಕ ಶಂಕರಸಿಂಗ್ ವಘೇಲಾ ಅವರು 'ರಾಮ ಮಂದಿರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಮಂದಿರ ಎನ್ನುವುದು ಒಂದು ವಿಚಾರವೇ ಅಲ್ಲ. ಅದು ಒಂದು ಸಮಸ್ಯೆಯೇ ಅಲ್ಲ, ಭಗವಾನ್ ರಾಮ ಎಲ್ಲಿ ಉಳಿಯುತ್ತಾರೆ ಎಂಬುದು ಮುಖ್ಯವಲ್ಲ. ರಾಮ ಮಂದಿರದಲ್ಲಾದರೂ ಇರಲಿ, ಟೆಂಟ್ನಲ್ಲಾದರೂ ಇರಲಿ ಅಂತ ಹೇಳಿದ್ದಾರೆ.
“ಮಂದಿರ ಕಟ್ಟಿ ಜನರನ್ನು ಮೂರ್ಖರನ್ನಾಗಿಸುವ ಯತ್ನ”
ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿಯವರು ರಾಮಮಂದಿರ ಕಟ್ಟುತ್ತಿದ್ದಾರೆ ಅಂತ ಶಂಕರ್ ಸಿನ್ಹಾ ವಘೇಲಾ ಹೇಳಿದ್ದಾರೆ. ರಾಮಮಂದಿರ ಕಟ್ಟಿದರೆ ಏನು ವ್ಯತ್ಯಾಸ? ರಾಮಮಂದಿರ ಕಟ್ಟುವಾಗ ಯಾರಿಗಾದರೂ ಕೆಲಸ ಸಿಗುತ್ತದೆಯೇ? ಉದ್ಯೋಗ ಕೊಡುತ್ತದೆಯೇ ಅಂತ ಪ್ರಶ್ನಿಸಿದ್ದಾರೆ. "ದೇವರ ಮೇಲಿನ ಭಕ್ತಿ ವೈಯಕ್ತಿಕವಾಗಿದೆ ಮತ್ತು ಅದನ್ನು ಮಾರ್ಕೆಟಿಂಗ್ ತಂತ್ರವನ್ನಾಗಿ ಮಾಡಬಾರದು" ಎಂದು ಆಡಳಿತ ಪಕ್ಷದ ವಿರುದ್ಧ ವಾಘೇಲಾ ಗುಡುಗಿದ್ದಾರೆ.
ಇದನ್ನೂ ಓದಿ: Bharat Jodo Yatra: ನರ್ಮದಾ ತೀರದಲ್ಲಿ 'ರಾಗಾ'! ಪ್ರಿಯಾಂಕಾ, ರಾಹುಲ್ ಗಾಂಧಿಯಿಂದ ಆರತಿ
“ರಾಮಮಂದಿರ ಬಿಜೆಪಿಗಾಗಿ ಹೊರತು ಜನರಿಗಾಗಿ ಅಲ್ಲ”
"ದೇವಾಲಯ ಕಟ್ಟಿದರೆ ಜನ ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ 500 ಮೀಟರ್ ಎತ್ತರದ ಗೋಡೆಗಳನ್ನು ಕಟ್ಟಿಸಿ ಅಥವಾ ಚಿನ್ನದಿಂದ ನಿರ್ಮಿಸಿ. ಸೋಮನಾಥ ದೇವಸ್ಥಾನದಲ್ಲಿ ಹೇಗೋ ಚಿನ್ನ ಇದೆ. ಆದರೆ ಅದನ್ನು ಮಾರ್ಕೆಟಿಂಗ್ ತಂತ್ರಕ್ಕೆ ಇಳಿಸಬೇಡಿ. ರಾಜಕೀಯ ಉದ್ದೇಶಗಳಿಗಾಗಿ ದೇವಾಲಯವನ್ನು ಬಳಸಲಾಗುತ್ತಿದೆ ಅಂತ ಕಿಡಿಕಾರಿದ್ದಾರೆ. 1990 ರಲ್ಲಿ ರಥಯಾತ್ರೆಯನ್ನು ಮುನ್ನಡೆಸಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ಗುಜರಾತ್ ಮಾಜಿ ಮುಖ್ಯಮಂತ್ರಿ ಹೇಳಿದರು. ಬಿಜೆಪಿ ಕೂಡ ರಾಮಮಂದಿರವನ್ನು ತನಗಾಗಿ ನಿರ್ಮಿಸಿದೆಯೇ ಹೊರತು ಜನರಿಗಾಗಿ ಅಲ್ಲ ಎಂದರು.
ಮಾಜಿ ಸಿಎಂ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ
ಇನ್ನು ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದಿನೇಶ್ ಶರ್ಮಾ ವಘೇಲಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಘೇಲಾ ಅವರಿಗೆ ಜ್ಞಾನದ ಕೊರತೆಯಿದೆ ಮತ್ತು ಅವರ ಹೇಳಿಕೆ ಸಾವಿರಾರು ಭಾರತೀಯರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Bharat Jodo Yatra: ಭಾರತ್ ಜೋಡೋ ಯಾತ್ರಾದಲ್ಲಿ ಕೇಳಿ ಬಂತಾ ಪಾಕ್ ಪರ ಘೋಷಣೆ? ಬಿಜೆಪಿ ಗಂಭೀರ ಆರೋಪ
“ಇದು ಕಾಂಗ್ರೆಸ್ನ ಮನಸ್ಥಿತಿ ತೋರಿಸುತ್ತದೆ”
ಶ್ರೀರಾಮನು ಟೆಂಟ್ನಲ್ಲೂ ವಾಸಿಸುತ್ತಾನೆ ಎಂಬ ವಘೇಲಾ ಅವರ ಹೇಳಿಕೆಯನ್ನು ಖಂಡಿಸಿದ ಶರ್ಮಾ, "ರಾಮನನ್ನು ಟೆಂಟ್ನಲ್ಲಿ ಇರಲು ಹೇಗೆ ಕೇಳುತ್ತಾನೆ? ಅವರ ಹೇಳಿಕೆಗಳು ಕಾಂಗ್ರೆಸ್ನ ಮನಸ್ಥಿತಿಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಈ ಜನರು ಮೊದಲು ಭಗವಂತನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ರಾಮ ಮತ್ತು ರಾಮೇಶ್ವರಂ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ, ಸುಪ್ರೀಂ ಕೋರ್ಟ್ ತೀರ್ಪಿನ ನಂತರವೇ ಪ್ರಧಾನಿ ಮೋದಿ ರಾಮ ಮಂದಿರದ ಶಂಕುಸ್ಥಾಪನೆ ಮಾಡಿದರು, ವಘೇಲಾ ಅವರು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಭಗವಾನ್ ರಾಮನ ಬಗ್ಗೆ ಇಂತಹ ಹೇಳಿಕೆಗಳು," ಶರ್ಮಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ