• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ತೆಲಂಗಾಣ ಸಿಎಂ​ ಸಂಬಂಧಿ, ಮಾಜಿ ಹಾಕಿಪಟು ಸೇರಿದಂತೆ ಮೂವರ ಕಿಡ್ನಾಪ್​ ಮಾಡಿದ ಆಂಧ್ರದ ಮಾಜಿ ಸಚಿವೆ 

ತೆಲಂಗಾಣ ಸಿಎಂ​ ಸಂಬಂಧಿ, ಮಾಜಿ ಹಾಕಿಪಟು ಸೇರಿದಂತೆ ಮೂವರ ಕಿಡ್ನಾಪ್​ ಮಾಡಿದ ಆಂಧ್ರದ ಮಾಜಿ ಸಚಿವೆ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೈದ್ರಾಬಾದ್​ನ ಹಫೀಜ್​ಪೇಟ್​ನಲ್ಲಿರುವ 100 ಕೋಟಿ ರೂ ಮೌಲ್ಯದ ಭೂಮಿ ಕುರಿತು ಈ ಘಟನೆ ನಡೆದಿದೆ. ಆರೋಪಿಗಳು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅವರ ಮನೆಗೆ ನುಗ್ಗಿ ಈ ಅಪಹರಣ ನಡೆಸಿದ್ದಾರೆ

  • Share this:

ಹೈದ್ರಾಬಾದ್​ (ಡಿ. 6): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ಅವರ ಆಪ್ತ ಸಂಬಂಧಿಯನ್ನು ಅಪಹರಿಸಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ, ಮಾಜಿ ಸಚಿವರಾದ ಭೂಮಾ ಅಖಿಲ ಪ್ರಿಯಾ ಅವರನ್ನು ಹೈದ್ರಾಬಾದ್​ ಪೊಲೀಸರು ಬಂಧಿಸಿದ್ದಾರೆ. ಮಾಜಿ ಹಾಕಿ ಕ್ರೀಡಾಪಟುವಾಗಿರುವ ಪ್ರವೀಣ್​ ರಾವ್​ ಮತ್ತು ಅವರ ಸಹೋದರ ಸುನೀಲ್​ ಮತ್ತು ನವೀನ್​ ಅವರು ಅಪಹರಣಕ್ಕೆ ಒಳಗಾದವರು. ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಈ ಮೂವರನ್ನು ಹೈದ್ರಾಬಾದ್​ನ ಬೋವೆನ್​ಪಲ್ಲಿಯ ಪ್ರದೇಶದ ಮನೆಯಿಂದ ಕಿಡ್ನಾಪ್​ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದಂತೆ ಬುಧವಾರ ಮುಂಜಾನೆ 3.30ಕ್ಕೆ ಅಪಹರಣಕ್ಕೆ ಒಳಗಾದವರನ್ನು ಕೋಕಾಪೇಟೆಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.


ಈ ಪ್ರಕರಣದಲ್ಲಿ ಭೂಮಾ ಅಖಿಲ ಪ್ರಿಯಾ ಅವರ ಚಿಕ್ಕಪ್ಪ ಎ.ವಿ ಸುಬ್ಬಾ ರೆಡ್ಡಿಯವರನ್ನು ಪ್ರಮುಖ ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಆಂಧ್ರ ಪ್ರದೇಶ ಮಾಜಿ ಸಚಿವರು ಮತ್ತು ಅವರ ಗಂಡ ಭಾಗವ್​ ರಾಮ್​ ಅವರ ಹೆಸರನ್ನು ದಾಖಲಿಸಲಾಗಿದೆ. ಜೊತೆಗೆ ಪ್ರಕರಣದಲ್ಲಿ ಪ್ರಿಯಾ ಮತ್ತು ಅವರ ಸಹೋದರ ಮತ್ತು ಮಾಜಿ ಶಾಸಕ ಜಗದ್ವಿಖ್ಯಾತ್​ ರೆಡ್ಡಿ ಮತ್ತು ಅವರ ಸೋದರ ಮಾವ ಚಂದ್ರಹಾಸ್​ ಅವರನ್ನು ಶಂಕಿತರನ್ನಾಗಿ ಪರಿಗಣಿಸಲಾಗಿದೆ.


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಹೈದ್ರಾಬಾದ್​ ಪೊಲೀಸ್​ ಆಯುಕ್ತ ಅಂಜನಿ ಕುಮಾರ್​, ಭಾಗವ್​ ರಾಮ್​ ಮತ್ತು ಎವಿ ಸುಬ್ಬಾರೆಡ್ಡಿ ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ. ಇದಕ್ಕಾಗಿ ಆಂಧ್ರಪ್ರದೇಶ ಪೊಲೀಸರ ಸಹಾಯ ಪಡೆಯಲಾಗುವುದು ಎಂದರು.


ಇದನ್ನು ಓದಿ: ಹಸುವಿನ ಬಗ್ಗೆ ಅರಿವು ಮೂಡಿಸಲು ಗೋ ವಿಜ್ಞಾನ ಪರೀಕ್ಷೆ ನಡೆಸಲು ಮುಂದಾದ ಸರ್ಕಾರ


ಹೈದ್ರಾಬಾದ್​ನ ಹಫೀಜ್​ಪೇಟ್​ನಲ್ಲಿರುವ 100 ಕೋಟಿ ರೂ ಮೌಲ್ಯದ ಭೂಮಿ ಕುರಿತು ಈ ಘಟನೆ ನಡೆದಿದೆ. ಆರೋಪಿಗಳು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅವರ ಮನೆಗೆ ನುಗ್ಗಿ ಈ ಅಪಹರಣ ನಡೆಸಿದ್ದಾರೆ.


ಟಿಡಿಪಿ, ಪ್ರಜಾರಾಜ್ಯಂ, ವೈಎಸ್​ ಆರ್​ ಕಾಂಗ್ರೆಸ್​ನ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡಿದ್ದ ಭೂಮಾನಾಗಿ ರೆಡ್ಡಿ ಮತ್ತು ಶೋಭಾ ನಾಗಿ ರೆಡ್ಡಿ ಅವರ ಮಗಳು ಈ ಅಖಿಲಾ ಪ್ರಿಯಾ. ತಾಯಿ ಮರಣದ ನಂತರ 2014ರಲ್ಲಿ ಕರ್ನೂಲ್​ನ ಅಲ್ಲಗಡ್ಡ ಕ್ಷೇತ್ರದಿಂದ ವೈಎಸ್​ಆರ್​ಸಿಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು.  ಇದಾದ ಬಳಿಕ ಪ್ರಿಯಾ ಮತ್ತು ಆಕೆಯ ತಂದೆ ಟಿಡಿಪಿ ಸೇರಿದ್ದರು. 2017ರಲ್ಲಿ ತಂದೆಯ ಅಚಾನಕ್​ ಸಾವಿನಿಂದಾಗಿ ಚಂದ್ರಬಾಬು ನಾಯ್ಡು ಸಂಪುಟ ಸೇರಿದ್ದರು. 2019ರ ಚುನಾವಣೆಯಲ್ಲಿ ಪ್ರಿಯಾ ಸೋಲುಂಡಿದ್ದರು.


(ವರದಿ: ಪಿವಿ ರಮಣ್​ ಕುಮಾರ್​)

top videos
    First published: