• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • FM to News18: ಬಜೆಟ್​ನ ಮೂರು ಅಂಶಗಳನ್ನು ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿರುವುದು ಸಂತಸ; ನಿರ್ಮಲಾ ಸೀತಾರಾಮನ್​

FM to News18: ಬಜೆಟ್​ನ ಮೂರು ಅಂಶಗಳನ್ನು ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿರುವುದು ಸಂತಸ; ನಿರ್ಮಲಾ ಸೀತಾರಾಮನ್​

ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

ಬಜೆಟ್​ನ ಮೂರು ಪ್ರಮುಖ ಅಂಶಗಳು ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಬಜೆಟ್​ನ ಉದ್ದೇಶ ಅರ್ಥವಾಗಿದೆ ಎಂದು ಭಾವಿಸುತ್ತೇನೆ.

  • Share this:

    ನವದೆಹಲಿ (ಫೆ.1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2021-22ನೇ ಸಾಲಿನ ಬಜೆಟ್​ ಮಂಡಿಸಿದ್ದಾರೆ. ಬಜೆಟ್​ ಮಂಡನೆ ಬಳಿಕ ಅವರು ಮೊದಲು ಸಿಎನ್​ಎನ್​ ನ್ಯೂಸ್​ 18ಗೆ ಎಕ್ಸ್​ಕ್ಲೂಸಿವ್​ ಸಂದರ್ಶನ ನೀಡಿದರು. ನೆಟ್​ವರ್ಕ್​ 18 ಸಂಪಾದಕರಾದ ರಾಹುಲ್​ ಜೋಷಿ ಅವರೊಡನೆ ತಾವು ಮಂಡಿಸಿದ ಬಜೆಟ್​ ಕುರಿತು ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದೊಂದು ಐತಿಹಾಸಿಕ ಬಜೆಟ್ ಆಗಿದೆ ಎಂದು ತಿಳಿಸಿದರು. ಬಜೆಟ್​ನ ಮೂರು ಪ್ರಮುಖ ಅಂಶಗಳು ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಬಜೆಟ್​ನ ಉದ್ದೇಶ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ದೇಶ ಕೂಡ ಇದನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತೇವೆ ಎಂದರು. ಕೋವಿಡ್​ ನಿಂದಾಗಿ ನಾವು ಜೆಚ್ಚಿನ ಸಂಪನ್ಮೂಲ ಹರಿವಿರಲಿಲ್ಲ. ಇಂತಹ ಸಮಯದಲ್ಲಿ ನಾವು ಪರಿಹಾರ ಪ್ಯಾಕೇಜ್​ ಅವಶ್ಯಕವಾಗಿದೆ ಎಂದರು. ಇದೇ ವೇಳೆ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಮಾತನಾಡಿದ ಅವರು, ಇದರಿಂದ ಬ್ಯಾಂಕ್​ಗಳಿಗೆ ಲಾಭಾವಾಗಲಿದ್ದು, ಅದರ ಕಾರ್ಯಚರಣೆಯಲ್ಲಿ ಇನ್ನಷ್ಟ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


    ಕೋವಿಡ್​ನಿಂದಾಗಿ ಬೇಡಿಕೆಯನ್ನು ಹೆಚ್ಚಿಸುವುದು ಅಗತ್ಯವಾಗಿತ್ತು. ಖರ್ಚಿನೊಂದಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದಕ್ಕೆ ಪ್ರಚೋದನೆ ಅಗತ್ಯವಾಗಿದ್ದು, ಗುಣಮಟ್ಟದ ವೆಚ್ಚವನ್ನು ನೋಡುತ್ತಿದ್ದೇವೆ. ಜೊತೆಗೆ ಗುಣಾತ್ಮಕ ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ಬಜೆಟ್​ನ್ನು ವಿನ್ಯಾಸಗೊಳಿಸಿದ್ದೇವೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.



    ಇದೇ ವೇಳೆ ರೈತರ ಪ್ರತಿಭಟನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ವಿತ್ತ ಸಚಿವರು, ಕೃಷಿಕರಿಗೆ ಪ್ಪು ಮಾರ್ಗದರ್ಶನ ಮಾಡಲಾಗಿದೆ. ಈ ಕುರಿತು ನಾನು ಅವರೊಟ್ಟಿಗೆ ಮಾತನಾಡಬೇಕು. ಅವರ ಕಾಳಜಿಯ ಉದ್ದೇಶದಿಂದ ನಾನು ಮಾತನಾಡಬೇಕಿದೆ. ನನ್ನ ಮಾತುಗಳನ್ನು ಅವರು ಒಪ್ಪಬಹುದು. ಅವರು ಯಾವ ಅಂಶದಲ್ಲಿ ಬದಲಾವಣೆ ಬೇಕು ಎಂಬುದನ್ನು ತಿಳಿಸಿದರೆ, ನಾವು ಒಪ್ಪಲು ಸಿದ್ಧ ಎಂದರು


    ಕೊರೋನಾ ಸಾಂಕ್ರಾಮಿಕದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೋನಾ ವಾರಿಯರ್ಸ್​ಗಳು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ

    Published by:Seema R
    First published: