ಕೋವಿಡ್​ ನಿಯಮ ಉಲ್ಲಂಘನೆ: ದೆಹಲಿ ಉಪಮುಖ್ಯಮಂತ್ರಿ ಸೇರಿ ಹಲವರ ಮೇಲೆ ಎಫ್​ಐಆರ್​ ದಾಖಲು

ಮನೀಶ್ ಸಿಸೋಡಿಯಾ

ಮನೀಶ್ ಸಿಸೋಡಿಯಾ

ಭಾನುವಾರ ನಡೆಸಲಾದ ತಿರಂಗ ಯಾತ್ರೆಯಲ್ಲಿ ನೂರಾರು Aam Aadmi Party ಬೆಂಬಲಿಗರು ಮತ್ತು ನಾಯಕರು ಭಾಗವಹಿಸಿದ್ದರು, ನಂತರ ಆಗ್ರಾ ಪೊಲೀಸರು ಮನೀಶ್ ಸಿಸೋಡಿಯಾ (Manish Sisodia ) ಮತ್ತು ಸಂಜಯ್ ಸಿಂಗ್ ಸೇರಿದಂತೆ ಹಲವಾರು ಜನರ ವಿರುದ್ಧ ಸಾಂಕ್ರಾಮಿಕ ಕಾಯಿದೆ (Epidemic Act) ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದೆ ಓದಿ ...
  • Share this:

Agra: ಆಗ್ರಾದಲ್ಲಿ ಕೋವಿಡ್ -19 ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಮ್​​ ಆದ್ಮಿ ಪಕ್ಷದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೇರಿದಂತೆ 17 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.


ಆಗ್ರಾದ ಲೋಹಮಂಡಿ ಪೊಲೀಸ್ ಠಾಣೆಯಲ್ಲಿ 500 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 188, 269, 270 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ತಿರಂಗ ಯಾತ್ರೆಯಲ್ಲಿ ಎಎಪಿ ನಾಯಕರು 50 ಕ್ಕೂ ಹೆಚ್ಚು ಜನರ ಗುಂಪನ್ನು ಒಟ್ಟುಗೂಡಿಸಿದ್ದಾರೆ ಎಂದು ಆರೋಪಿಸಲಾಯಿತು. ತಿರಂಗ ಯಾತ್ರೆಯಲ್ಲಿ ಭಾಗವಹಿಸಲು ಕೇವಲ 50 ಜನರಿಗೆ ಮಾತ್ರ ಯುಪಿ ಪೊಲೀಸರು ಅನುಮತಿ ನೀಡಿದ್ದರು, ಆದರೆ ನೂರಾರು ಜನರು ಈ ಮೆರವಣಿಗೆಯಲ್ಲಿ ಜಮಾಯಿಸಿದ್ದರು.


ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ AAP ಯ ಯೋಜನೆಯ ಒಂದು ಭಾಗವೇ ತಿರಂಗ ಯಾತ್ರೆ. ಆಮ್​ ಆದ್ಮಿ ಪಕ್ಷವು ಆಗ್ರಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ತಿರಂಗ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದೆ.


ಆಗ್ರಾ ಜಿಲ್ಲಾಡಳಿತ ಆರಂಭದಲ್ಲಿ ಆಮ್​ ಆದ್ಮಿ ಪಕ್ಷದ ತಿರಂಗಾ ಯಾತ್ರೆ ಕೈಗೊಳ್ಳಲು ಅನುಮತಿ ನಿರಾಕರಿಸಿತ್ತು, ಆದರೆ ನಂತರ ಮಾರ್ಗ ಬದಲಿಸಿದ ನಂತರ ಅನುಮತಿ ನೀಡಲಾಯಿತು. ಯಾತ್ರೆಯಲ್ಲಿ ಭಾಗವಹಿಸಲು ಕೇವಲ 50 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.


ಭಾನುವಾರ ನಡೆಸಲಾದ ತಿರಂಗ ಯಾತ್ರೆಯಲ್ಲಿ ನೂರಾರು Aam Aadmi Party ಬೆಂಬಲಿಗರು ಮತ್ತು ನಾಯಕರು ಭಾಗವಹಿಸಿದ್ದರು, ನಂತರ ಆಗ್ರಾ ಪೊಲೀಸರು ಮನೀಶ್ ಸಿಸೋಡಿಯಾ (Manish Sisodia ) ಮತ್ತು ಸಂಜಯ್ ಸಿಂಗ್ ಸೇರಿದಂತೆ ಹಲವಾರು ಜನರ ವಿರುದ್ಧ ಸಾಂಕ್ರಾಮಿಕ ಕಾಯಿದೆ (Epidemic Act) ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಆಮ್ ಆದ್ಮಿ ಪಕ್ಷವು ಲಕ್ನೋ, ಅಯೋಧ್ಯೆ ಮತ್ತು ನೋಯ್ಡಾದಲ್ಲಿ ಇಂತಹ ಯಾತ್ರೆಗಳನ್ನು ನಡೆಸಲಿದೆ. ಮುಂದಿನ ಯಾತ್ರೆಯನ್ನು ನೋಯ್ಡಾದಲ್ಲಿ ಸೆಪ್ಟೆಂಬರ್ 1 ರಂದು ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿದ್ದು, ಈ ಯಾತ್ರೆ ಅಯೋಧ್ಯೆಯನ್ನು  ತಲುಪಲಿದೆ ಮತ್ತು ಸೆಪ್ಟೆಂಬರ್ 14 ರಂದು ಅಯೋಧ್ಯೆಯಲ್ಲಿಯೇ ಕೊನೆಗೊಳ್ಳಲಿದೆ. ಮಾಹಿತಿಯ ಪ್ರಕಾರ, ತಿರಂಗಾ ಯಾತ್ರೆ ರಾಮನ ದೇವಸ್ಥಾನದ ಹತ್ತಿರ ಕೆಲಕಾಲ ನಿಲ್ಲುತ್ತದೆ ಎಂದು ಹೇಳಲಾಗಿದೆ.


ವರದಿಗಳ ಪ್ರಕಾರ, ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ  ಸರ್ಕಾರವು 500 ಭಾಗಗಳಲ್ಲಿ high-mast  ತ್ರಿವರ್ಣಧ್ವಜಗಳನ್ನು,  85  ಕೋಟಿಗೂ ಅತ್ಯಧಿಕ ವೆಚ್ಚದಲ್ಲಿ ಸ್ಥಾಪಿಸುತ್ತಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Dehradun: ಮೇಘಸ್ಪೋಟಕ್ಕೆ ಚಿದ್ರವಾದ ಬದುಕು; 3 ಜನರ ಸಾವು, ಹಲವರು ಕಣ್ಮರೆ; ಕೊಚ್ಚಿ ಹೋದ ವಾಹನಗಳು


"ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಮುಂದಿನ ಒಂದು ವರ್ಷದಲ್ಲಿ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸಿದೆ. ನಮ್ಮ ಆಮ್​ ಆದ್ಮಿ ಪಕ್ಷದ ಸಂದೇಶ ಸರಳವಾಗಿದೆ: ಬಿಜೆಪಿಯ ರಾಷ್ಟ್ರೀಯತೆ, ನಮ್ಮ ಹಿಂದುತ್ವ , ಅದೂ, ಇದೂ ಎಂದು ಕರೆಯುತ್ತಿರುವುದು ಭಾರತವನ್ನು ಅನಾರೋಗ್ಯಕ್ಕೆ ತಳ್ಳುತ್ತಿದೆ. ರಾಷ್ಟ್ರೀಯತೆ ಎಂದರೆ ಜನರಿಗೆ ಸರ್ಕಾರವು ಅವರ ಹಕ್ಕುಗಳನ್ನು ನೀಡಿವುದೇ ಹೊರತು, ಬೇರೆ- ಬೇರೆ ಆಡುವುದಲ್ಲ ಎಂದು ಎಎಪಿ ನಂಬುತ್ತದೆ ಎಂದು ಹೇಳಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: