ನೂತನ ಕೃಷಿ ಕಾಯ್ದೆ ರದ್ದುಪಡಿಸಲು ವಿಶೇಷ ಸಂಸತ್​ ಅಧಿವೇಶನಕ್ಕೆ ರೈತರ ಒತ್ತಾಯ

ಪಂಜಾಬ್ ರೈತರ ಬೃಹತ್ ಪ್ರತಿಭಟನೆ

ಪಂಜಾಬ್ ರೈತರ ಬೃಹತ್ ಪ್ರತಿಭಟನೆ

ಗುರುವಾರ ರೈತರೊಂದಿಗೆ ಮಾತುಕತೆಗೂ ಮುನ್ನ ಕೇಂದ್ರ ಸರ್ಕಾರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್​, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಸಭೆ ನಡೆಸಲಿದ್ದು, ರೈತರ ವಿಚಾರ ಕುರಿತು ಚರ್ಚಿಸಲಿದ್ದಾರೆ.

  • Share this:

ನವದೆಹಲಿ (ಡಿ.2): ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ವಿಶೇಷ ಸಂಸತ್​ ಅಧಿವೇಶನ ಕರೆಯಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ದೇಶದ ರಾಜಧಾನಿಯ ಎಲ್ಲಾ ರಸ್ತೆಗಳನ್ನು ಬಂದ್​ ಮಾಡುವ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಕೈ ಬಿಡುವಂತೆ ಕುರಿತು ನಾಳೆ ಕೇಂದ್ರ ಸರ್ಕಾರದ ಸಚಿವ ನಿಯೋಗದೊಂದಿಗೆ ರೈತರು ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೈತ ಮುಖಂಡ ದರ್ಶನ್​ ಪಾಲ್​, ಸರ್ಕಾರ ರೈತ ಸಂಘಟನೆಗಳನ್ನು ಇಬ್ಬಾಗವಾಗಿಸುತ್ತಿವೆ ಎಂಬ ಆರೋಪ ಹೊರಿಸಿದ್ದಾರೆ. ಮೂರು ಕಾಯ್ದೆಗಳನ್ನು ರದ್ದು ಪಡಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಈ ಮೂರು ಮಸೂದೆ ರದ್ದುಗೊಳಿಸಲಿಉ ಕೇಂದ್ರ ಸರ್ಕಾರ ವಿಶೇಷ ಸಂಸತ್​ ಅಧಿವೇಶನ ನಡೆಸಬೇಕು ಎಂದಿದ್ದಾರೆ.



ಕೇಂದ್ರ ಸರ್ಕಾರ ಈ ಹೊಸ ಕಾಯ್ದೆ ಹಿಂಪಡೆಯದಿದ್ದರೆ ಮತ್ತಷ್ಟು ಬಿಗು ನಿಲುವು ಕೈಗೊಳ್ಳಬೇಕಾಗಿದತ್ತದೆ ಎಂದು ಮತ್ತೊನ್ನ ರೈತ ಮುಖಂಡ ಗುರ್ನಮ್​ ಸಿಂಗ್​ ಚಡೋನಿ ತಿಳಿಸಿದ್ದಾರೆ. ಈ ಪ್ರತಿಕಾಗೋಷ್ಟಿಗೂ ಮುನ್ನ 32 ರೈತ ಸಂಘಟನೆ ಮುಖಂಡರು ಸಭೆ ನಡೆಸಿದರು.


ಗುರುವಾರ ರೈತರೊಂದಿಗೆ ಮಾತುಕತೆಗೂ ಮುನ್ನ ಕೇಂದ್ರ ಸರ್ಕಾರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್​, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಸಭೆ ನಡೆಸಲಿದ್ದು, ರೈತರ ವಿಚಾರ ಕುರಿತು ಚರ್ಚಿಸಲಿದ್ದಾರೆ. ಇನ್ನು ಸಭೆಗೂ ಮುನ್ನ ಅಮಿತ್​ ಶಾ ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರೊಂದಿಗೆ ಬೆಳಗ್ಗೆ 9.30ಕ್ಕೆ ಸಭೆ ನಡೆಸಲಿದ್ದಾರೆ.


ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ಪಂಜಾಬ್​, ಹರಿಯಾಣ ಮತ್ತು ಇತರೆ ರಾಜ್ಯಗಳ ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸಿದ್ದಾರೆ. ಕಳೆದ ಏಳು ದಿನಗಳಿಂದ ಈ ಪ್ರತಿಭಟನೆ ನಡೆಯುತ್ತಿದೆ. ಈ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ಹಾಗೂ ಮಂಡಿ ವ್ಯವಸ್ಥೆಗೆ ಅಂತ್ಯ ಹಾಡಲಿದೆ ಎಂಬ ಬಗ್ಗೆ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಸರ್ಕಾರ ಮಾತ್ರ ಈ ಕಾಯ್ದೆಗಳು ರೈತರಿಗೆ ಅನುಕೂಲ ಮಾಡಿಕೊಡಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಅವಕಾಶ ನೀಡಲಿದೆ. ರೈತರಿಗೆ ಉತ್ತಮ ಅವಕಾಶಗಳನ್ನು ಇವು ಒದಗಿಸಲಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲದೇ ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿವೆ ಎಂದು ಟೀಕಿಸಿವೆ.

top videos
    First published: