• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಸರ್ಕಾರವನ್ನು ಕೆಡವಲು ಯತ್ನಿಸಿದವರ ಕುತಂತ್ರ ವಿಫಲವಾಗಿದೆ; ಬಿಜೆಪಿ ನಾಯಕರ ವಿರುದ್ಧ ಅಶೋಕ್ ಗೆಹ್ಲೋಟ್‌ ಕಿಡಿ

ಸರ್ಕಾರವನ್ನು ಕೆಡವಲು ಯತ್ನಿಸಿದವರ ಕುತಂತ್ರ ವಿಫಲವಾಗಿದೆ; ಬಿಜೆಪಿ ನಾಯಕರ ವಿರುದ್ಧ ಅಶೋಕ್ ಗೆಹ್ಲೋಟ್‌ ಕಿಡಿ

ಅಶೋಕ್ ಗೆಹ್ಲೋಟ್

ಅಶೋಕ್ ಗೆಹ್ಲೋಟ್

ವಿಶ್ವಾಸಮತಯಾಚನೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಬಂಡಾಯಗಾರರು ಸೇರಿ 107 ಸದಸ್ಯರು, 13 ಪಕ್ಷೇತರ ಶಾಸಕರು, ಸಿಪಿಎಂ ಇಬ್ಬರು ಸದಸ್ಯರು ಸೇರಿ ಒಟ್ಟು 125 ಮತಗಳು ಅಶೋಕ್ ಗೆಹ್ಲೋಟ್ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಒಂದು ತಿಂಗಳ ಕಾಲ ಅನಿಶ್ಚಿತತೆಯಲ್ಲಿದ್ದ ರಾಜಸ್ಥಾನ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.

ಮುಂದೆ ಓದಿ ...
  • Share this:

ಜೈಪುರ (ಆಗಸ್ಟ್‌ 14); ರಾಜಸ್ಥಾನದ ಕಾಂಗ್ರೆಸ್ ಶಾಸಕರ ಒಗ್ಗಟ್ಟು ಕೊನೆಗೂ ಗೆಲುವು ಸಾಧಿಸಿದೆ. ಚುನಾಯಿತ ಸರ್ಕಾರವನ್ನು ಕೆಡವಲು ಕೆಲವರು ನಡೆಸಿದ ಕುತಂತ್ರ ವಿಫಲವಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.


ಇಂದು ನಡೆದ ರಾಜಸ್ಥಾನ ವಿಧಾನಸಭಾ ಅಧಿವೇಶದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಗೆಹ್ಲೋಟ್‌ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಂದು ಗೆಹ್ಲೋಟ್ ಮಂಡಿಸಿದ ವಿಶ್ವಾಸ ಮತ ಗೊತ್ತುವಳಿ ಪರ 125 ಮತಗಳು ದಾಖಲಾಗಿದ್ದರೆ, ಅವರ ವಿರುದ್ಧವಾಗಿ 75 ಮತಗಳು ಮಾತ್ರ ಚಲಾವಣೆಗೊಂಡವು.


ಕಾಂಗ್ರೆಸ್ ನ ಎಲ್ಲಾ ಬಂಡಾಯಗಾರರು ಸೇರಿ 107 ಸದಸ್ಯರು, 13 ಪಕ್ಷೇತರ ಶಾಸಕರು, ಸಿಪಿಎಂ ಇಬ್ಬರು ಸದಸ್ಯರು ಸೇರಿ ಒಟ್ಟು 125 ಮತಗಳು ಅಶೋಕ್ ಗೆಹ್ಲೋಟ್ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಒಂದು ತಿಂಗಳ ಕಾಲ ಅನಿಶ್ಚಿತತೆಯಲ್ಲಿದ್ದ ರಾಜಸ್ಥಾನ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.



ವಿಶ್ವಾಸಮತ ಗೆಲುವಿನ ಬೆನ್ನಿಗೆ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಅಶೋಕ್ ಗೆಹ್ಲೋಟ್, “ವಿಧಾನಸಭೆಯಲ್ಲಿ ವಿಶ್ವಾಸಾರ್ಹ ಮತದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ಒಂದು ಸಂದೇಶವನ್ನು ರವಾನಿಸಿದೆ. ರಾಜಸ್ಥಾನದಲ್ಲಿ ಅವರ ಪ್ರತಿಯೊಂದು ತಂತ್ರವೂ ವಿಫಲವಾಗಿದೆ. ಇದು ನಮ್ಮ ಮೇಲೆ ಜನರ ಅಚಲ ನಂಬಿಕೆ ಮತ್ತು ನಮ್ಮ ಕಾಂಗ್ರೆಸ್ ಶಾಸಕರ ಐಕ್ಯತೆಯ ಗೆಲುವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.


ರಾಜಸ್ಥಾನ ಸರ್ಕಾರ ಉರುಳಿಹೋಗುವ ಎಲ್ಲಾ ಲಕ್ಷಣಗಳಿದ್ದರೂ ಒಂದು ತಿಂಗಳಾಂತ್ಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸರ್ಕಾರ ಸೇಫಾಗಿದೆ. ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಬಂಡಾಯ ತಣ್ಣಗಾಗಿತ್ತು. ಇದು ಗೆಹ್ಲೋಟ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತ್ತು.


ಬಹುಜನ ಸಮಾಜ ಪಕ್ಷದ ಆರು ಸದಸ್ಯರನ್ನು ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ನೀಡುವ ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ಕೂಡ ಅದೇ ಮಾರ್ಗವನ್ನು ಅನುಸರಿಸಿತ್ತು. ಆದರೆ ಇಂದು ವಿಶ್ವಾಸ ಮತ ಯಾಚಿಸಿದ ಗೆಹ್ಲೋಟ್ ಗೆಲುವು ಕಂಡರು. ಹಾಗಾಗಿ ಗೆಹ್ಲೋಟ್ ಸರ್ಕಾರ ಮುಂದಿನ ಅವಧಿ ಪೂರೈಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.


ಇದನ್ನೂ ಓದಿ : ಶಂಕರಾಚಾರ್ಯರ ಪುತ್ಥಳಿಗೆ ಹಸಿರು ಬಾವುಟ ಪ್ರಕರಣಕ್ಕೆ ತೆರೆ; ಕುಡಿದ ನಶೆಯಲ್ಲಿ ಕೃತ್ಯ, ತಪ್ಪೊಪ್ಪಿಕೊಂಡ ಆರೋಪಿ


ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡಾಯದ ಬಾವುಟ ಹಾರಿಸಿದ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿಗೆ ಮುಖಭಂಗ ಉಂಟಾಗಿದೆ.



ಕರ್ನಾಟಕ, ಮಧ್ಯಪ್ರದೇಶದಲ್ಲಿ ರಾಜಕೀಯ ಪಲ್ಲಟಗಳು ನಡೆದಂತೆ ರಾಜಸ್ಥಾನದಲ್ಲೂ ನಡೆಸಬಹುದು ಎಂಬ ಬಿಜೆಪಿ ತಂತ್ರಗಳಿಗೆ ಹಿನ್ನಡೆಯಾಗಿದೆ. ಶಾಸಕರ ಕುದುರೆ ವ್ಯಾಪಾರಕ್ಕೂ ಸೋಲುಂಟಾಗಿದೆ. ಇದರಿಂದ ರಾಜಸ್ಥಾನದಲ್ಲಿ ಉದ್ಭವಿಸಿದ್ದ ಅನಿಶ್ಚಿತತೆ ಮತ್ತು ರಾಜಕೀಯ ಬಿಕ್ಕಟ್ಟು ಕೊನೆಗೊಂಡಂತಾಗಿದೆ ಎನ್ನಲಾಗುತ್ತಿದೆ.

Published by:MAshok Kumar
First published: