ಸಿಕ್ಕಿಂ(ಫೆ.13): ಕೆಲ ದಿನಗಳ ಹಿಂದಷ್ಟೇ ಟರ್ಕಿಯಲ್ಲಿ (Turkey Earthquake) ಸಂಭವಿಸಿದ ಭಾರೀ ಭೂಕಂಪ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆದರೀಗ ಇದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಸಿಕ್ಕಿಂನ (Sikkim) ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಈವರೆಗೂ ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ, ನಸುಕಿನ ಜಾವ 4.15 ಕ್ಕೆ ಕಂಪನದ ಅನುಭವವಾಯಿತು. ಇದರ ಕೇಂದ್ರವು ಈಶಾನ್ಯ ಯುಕ್ಸೋಮ್ನಲ್ಲಿತ್ತು (Yuksom) . ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ 70 ಕಿಲೋಮೀಟರ್ ಆಳದಲ್ಲಿದೆ.
ಕಳೆದ ಭಾನುವಾರ, ಅಸ್ಸಾಂನ ಕೆಲವು ಭಾಗಗಳಲ್ಲಿಯೂ ನಾಲ್ಕು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂಬುವುದು ಉಲ್ಲೇಋಖನೀಯ. ಈ ಮಾಹಿತಿಯನ್ನು ಅಧಿಕೃತ ಬುಲೆಟಿನ್ನಲ್ಲಿ ನೀಡಲಾಗಿದೆ. ಬುಲೆಟಿನ್ ಪ್ರಕಾರ, ತಕ್ಷಣದ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.
ಇದನ್ನೂ ಓದಿ: Explained: ಭೂಕಂಪದ ಅವಶೇಷಗಳಲ್ಲಿ ಸಿಕ್ಕಿಬಿದ್ದವರ ಬದುಕು ಹೇಗಿರುತ್ತೆ?
ರಾಷ್ಟ್ರೀಯ ಭೂಕಂಪ ಕೇಂದ್ರದ ವರದಿಯ ಪ್ರಕಾರ, ಕಂಪನವು ಸಂಜೆ 4.18 ಕ್ಕೆ ಅನುಭವವಾಯಿತು ಮತ್ತು ಅದರ ಕೇಂದ್ರಬಿಂದುವು ನಾಗಾನ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿದೆ. ಭೂಕಂಪದ ಕೇಂದ್ರಬಿಂದುವು ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿದೆ.
ಇದನ್ನೂ ಓದಿ: Eartquake: ಟರ್ಕಿ, ಸಿರಿಯಾದಂತೆ ಭಾರತಕ್ಕೂ ಕಾದಿದ್ಯಾ ಭೂಕಂಪದ ಭೀತಿ? ಶಾಕಿಂಗ್ ರಿಪೋರ್ಟ್ ಕೊಟ್ಟ ಸಂಶೋಧಕರು
ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಗುವಾಹಟಿಯಿಂದ 160 ಕಿಮೀ ದೂರದ ಮಧ್ಯ ಅಸ್ಸಾಂನ ಹೊಜೈ ಬಳಿ ಇದೆ. ಪಶ್ಚಿಮ ಕರ್ಬಿ ಆಂಗ್ಲಾಂಗ್, ಕರ್ಬಿ ಆಂಗ್ಲಾಂಗ್, ಗೋಲಾಘಾಟ್ ಮತ್ತು ಮೋರಿ ಗ್ರಾಮ ಜಿಲ್ಲೆಗಳಲ್ಲೂ ಜನರು ಸಹ ಕಂಪನವನ್ನು ಅನುಭವಿಸಿದ್ದಾರೆ. ಇದಲ್ಲದೆ, ಬ್ರಹ್ಮಪುತ್ರ ನದಿಯ ಉತ್ತರ ದಡದಲ್ಲಿರುವ ಸೋನಿತ್ಪುರದಲ್ಲಿ ವಾಸಿಸುವ ಜನರು ಸಹ ಆಘಾತವನ್ನು ಅನುಭವಿಸಿದರು. ಈಶಾನ್ಯದ ಎಲ್ಲಾ ರಾಜ್ಯಗಳು ಹೆಚ್ಚಿನ ಭೂಕಂಪನ ಪೀಡಿತ ಪ್ರದೇಶಗಳಲ್ಲಿ ಬೀಳುತ್ತವೆ ಮತ್ತು ಕಂಪನಗಳು ಈ ಪ್ರದೇಶದಲ್ಲಿ ನಿಯಮಿತವಾಗಿ ಕಂಡುಬರುತ್ತವೆ.
.
ಭಾರತದ ಸುಮಾರು 59 ಪ್ರತಿಶತದಷ್ಟು ಭೂಮಿ ವಿವಿಧ ತೀವ್ರತೆಯ ಭೂಕಂಪಗಳಿಗೆ ಸೂಕ್ಷ್ಮವಾಗಿರುತ್ತದೆ. 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ನಗರಗಳು ಮತ್ತು ಪಟ್ಟಣಗಳು ವಲಯ-5 ರಲ್ಲಿವೆ ಮತ್ತು ಹೆಚ್ಚಿನ ತೀವ್ರತೆಯ ಭೂಕಂಪಗಳ ಅಪಾಯದಲ್ಲಿದೆ. ವಲಯ-5ರಲ್ಲಿ 9ರ ತೀವ್ರತೆಯ ಭೂಕಂಪ ಸಂಭವಿಸಬಹುದು. ವಲಯ-5 ಗುಜರಾತ್, ಹಿಮಾಚಲ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ ಮತ್ತು ಸಂಪೂರ್ಣ ಈಶಾನ್ಯವನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ