• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • AAP Government| ಕರ್ತವ್ಯದ ವೇಳೆ ಕೊಲ್ಲಲ್ಪಟ್ಟ 6 ರಕ್ಷಣಾ ಸಿಬ್ಬಂದಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿದ ದೆಹಲಿ ಸರ್ಕಾರ

AAP Government| ಕರ್ತವ್ಯದ ವೇಳೆ ಕೊಲ್ಲಲ್ಪಟ್ಟ 6 ರಕ್ಷಣಾ ಸಿಬ್ಬಂದಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿದ ದೆಹಲಿ ಸರ್ಕಾರ

ಮನೀಶ್ ಸಿಸೋಡಿಯಾ.

ಮನೀಶ್ ಸಿಸೋಡಿಯಾ.

ಮೃತ ಸಂಕೆತ್ ಕೌಶಿಕ್, ರಾಜೇಶ್ ಕುಮಾರ್, ಸುನೀತ್ ಮೊಹಂತಿ, ಮೀಟ್ ಕುಮಾರ್, ವಿಕಾಸ್ ಕುಮಾರ್ ಮತ್ತು ಪ್ರವೀಶ್ ಕುಮಾರ್ ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

  • Share this:

ನವ ದೆಹಲಿ (ಜೂನ್ 19); ಕರ್ತವ್ಯದ ವೇಳೆ ದುಷ್ಕರ್ಮಿಗಳಿಂದ ಕೊಲ್ಲಲ್ಪಟ್ಟ 6 ಜನ ರಕ್ಷಣಾ ಸಿಬ್ಬಂದಿಯ ಕುಟುಂಬಗಳಿಗೆ ತಲಾ ₹ 1 ಕೋಟಿ ಆರ್ಥಿಕ ನೆರವು ನೀಡುವುದಾಗಿ ದೆಹಲಿ ಸರ್ಕಾರ ಇಂದು ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರವು ವಾಯುಸೇನೆಯ ಮೂವರು, ಇಬ್ಬರು ದೆಹಲಿ ಪೊಲೀಸರು ಮತ್ತು ಓರ್ವ ನಾಗರಿಕ ರಕ್ಷಣಾ ಇಲಾಖೆಯ ಕುಟುಂಬಗಳಿಗೆ ಪರಿಹಾರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. "ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಆರು ಹುತಾತ್ಮರ ಕುಟುಂಬಗಳಿಗೆ ದೆಹಲಿ ಸರ್ಕಾರ 1 ಕೋಟಿ ನೀಡಲು ಇಂದು ನಿರ್ಧರಿಸಿದೆ. ಈ ಪೈಕಿ ಮೂವರು ಭಾರತೀಯ ವಾಯುಸೇನೆಯವರು, ಇಬ್ಬರು ದೆಹಲಿ ಪೊಲೀಸರಿಂದ ಮತ್ತು ಒಬ್ಬರು ನಾಗರಿಕ ರಕ್ಷಣಾ ಕಾರ್ಯದವರು ಇದ್ದಾರೆ" ಎಂದು ಮನೀಶ್​ ಸಿಸೋಡಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.



"ಅರವಿಂದ್ ಕೇಜ್ರಿವಾಲ್ ಸರ್ಕಾರ ತನ್ನ ಕೆಚ್ಚೆದೆಯ ಹೋರಾಟಗಾರರ ಹುತಾತ್ಮರಿಗೆ ನಮಸ್ಕರಿಸುತ್ತದೆ" ಎಂದು ಅವರು ಹೇಳಿದ್ದಾರೆ.


ಮೃತ ಸಂಕೆತ್ ಕೌಶಿಕ್, ರಾಜೇಶ್ ಕುಮಾರ್, ಸುನೀತ್ ಮೊಹಂತಿ, ಮೀಟ್ ಕುಮಾರ್, ವಿಕಾಸ್ ಕುಮಾರ್ ಮತ್ತು ಪ್ರವೀಶ್ ಕುಮಾರ್ ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.


ಇದನ್ನೂ ಓದಿ: Swiss Bank: ಸ್ವಿಸ್ ಬ್ಯಾಂಕ್​ನಲ್ಲಿನ ಭಾರತೀಯರ ಠೇವಣಿ 20,700 ಕೋಟಿಗೆ ಏರಿಕೆ; ಕಳೆದ 13 ವರ್ಷದಲ್ಲೇ ಅತಿ ಹೆಚ್ಚು!


ರಕ್ಷಣಾ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡ ದುರದೃಷ್ಟಕರ ಘಟನೆಗಳ ಬಗ್ಗೆಯೂ ಮಾತನಾಡಿದ ಅವರು, "ದೇಶವು ಒಬ್ಬ ಮಗನನ್ನು ಕಳೆದುಕೊಂಡಾಗ, ಒಂದು ಕುಟುಂಬವು ಸಹ ತನಗೆ ಆಸರೆಯಾಗಿದ್ದ ರ್ವ ಧೈರ್ಯಶಾಲಿ ಮಗನನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ದೆಹಲಿ ಸರ್ಕಾರವು ದೇಶಕ್ಕೆ ಸೇವೆ ಸಲ್ಲಿಸಿ ಮರಣ ಹೊಂದಿದ ಸಿಬ್ಬಂದಿಗಳ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ" ಎಂದು ತಿಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: