• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rahul Gandhi: ತಮಿಳುನಾಡಿನಲ್ಲಿ ರಾಹುಲ್​ ಗಾಂಧಿ ಚುನಾವಣಾ ಪ್ರಚಾರ; ತಮಿಳಿಗರ ಬಗ್ಗೆ ಮೋದಿಗೆ ಗೌರವವಿಲ್ಲ ಎಂದ ಕಾಂಗ್ರೆಸ್​ ನಾಯಕ

Rahul Gandhi: ತಮಿಳುನಾಡಿನಲ್ಲಿ ರಾಹುಲ್​ ಗಾಂಧಿ ಚುನಾವಣಾ ಪ್ರಚಾರ; ತಮಿಳಿಗರ ಬಗ್ಗೆ ಮೋದಿಗೆ ಗೌರವವಿಲ್ಲ ಎಂದ ಕಾಂಗ್ರೆಸ್​ ನಾಯಕ

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

ತಮಿಳುನಾಡಿಗೆ ಹೊಸ ಸರ್ಕಾರದ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ತಮಿಳುನಾಡಿನ ಜನ ಹೆಮ್ಮೆಪಡುವಂತಹ ಸರ್ಕಾರ ರಚನೆ ಮಾಡಲು ನಿಮ್ಮೊಂದಿಗೆ ಕೆಲಸ ಮಾಡಲು ನಾವು ಬಯಸುತ್ತೇವೆ

  • Share this:

ಚೆನ್ನೈ (ಜ. 23): ವಿಧಾನಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಮಿಳುನಾಡಿನಲ್ಲು ಭರ್ಜರಿ ಪ್ರಚಾರ ನಡೆಸಿದ್ದಾರೆ. ತಮಿಳು ಭಾಷೆ ಮತ್ತು ಸಂಸ್ಕೃತಿ ಮೂಲಕ ಮತದಾರರನ್ನು ಸೆಳೆಯುವ ಯತ್ನ ನಡೆಸಿರುವ ರಾಹುಲ್​ ಗಾಂಧಿ ಪ್ರಧಾನಿಗೆ ತಮಿಳಿಗರ ಭಾಷೆ ಸಂಸ್ಕೃತಿ ಮೇಲೆ ಗೌರವವಿಲ್ಲ ಎಂದು ಜರಿದಿದ್ದಾರೆ. ಅನೇಕ ಭಾಷೆ ಮತ್ತು ಅವರ ವಿವಿಧ ಸಂಪ್ರದಾಯಗಳ ಬಗ್ಗೆ ನಂಬಿಕೆ ಹೊಂದಿದ್ದೇವೆ. ತಮಿಳು, ಹಿಂದಿ ಮತ್ತು ಬೆಂಗಾಲಿ ಅದರೆ ಆದ ಜಾಗವನ್ನು ಹೊಂದಿದೆ ಎಂದು ಭಾಷಾವಾರು ವಿಷಯದ ಮೂಲಕ ಜನರನ್ನು ಸೆಳೆಯುವ   ಯತ್ನ ನಡೆಸಿದರು. ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಅವರು, ಇಂದು ಕೊಯಮತ್ತೂರಿನಲ್ಲಿ ರೋಡ್​ ಶೋ ನಡೆಸಿದರು. ಈ ವೇಳೆ ಪ್ರಧಾನಿ ವಿರುದ್ಧ ಹರಿಹಾಯ್ದ ಅವರು, ಮೋದಿಗೆ ತಮಿಳುನಾಡಿನ ಜನ, ಭಾಷೆ ಮತ್ತೆ ಸಂಸ್ಕೃತಿ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಹೀಗಳೆದರು.



ಇದೇ ವೇಳೆ ರೈತರ ಪ್ರತಿಭಟನೆ ಕುರಿತು ಮಾತನಾಡಿದ ರಾಹುಲ್​ ಗಾಂಧಿ, ಮೋದಿ ಸರ್ಕಾರ ಕೇವಲ ಉದ್ಯಮಿಗಳ ಹಿತಾಸಕ್ತಿ ಹೊಂದಿದೆ. ರೈತರ ಕಾಳಜಿ ಅವರಿಗಿಲ್ಲ. ರೈತರಿಗೆ ಸೇರಬೇಕಾಗಿರುವುದನ್ನು ಕಿತ್ತುಕೊಳ್ಳಲಾಗಿದೆ. ಇದೇ ಕಾರಣಕ್ಕೆ ನಾವು ರೈತರ ಪರವಾಗಿ ನಿಂತಿದ್ದೇವೆ ಎಂದರು.


ತಮಿಳುನಾಡಿಗೆ ಹೊಸ ಸರ್ಕಾರದ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ತಮಿಳುನಾಡಿನ ಜನ ಹೆಮ್ಮೆಪಡುವಂತಹ ಸರ್ಕಾರ ರಚನೆ ಮಾಡಲು ನಿಮ್ಮೊಂದಿಗೆ ಕೆಲಸ ಮಾಡಲು ನಾವು ಬಯಸುತ್ತೇವೆ ಎಂದರು.


ಮೂರು ದಿನಗಳ ಪ್ರವಾಸದ ವೇಳೆ ರಾಹುಲ್​ ಗಾಂಧಿ ಎಂಎಸ್​ಎಂಇ, ಕೈಗಾರಿಕಾ ಕಾರ್ಮಿಕರು, ರೈತರು, ಕೊಯಮತ್ತೂರಿನ ನೇಕಾರರ ಜೊತೆ ಮಾತುಕತೆ ನಡೆಸಲಿದ್ದಾರೆ. ತ್ರಿಪುರ, ಈರೋಡ್​, ಕರೂರ್​ ಜಿಲ್ಲೆಗಳಲ್ಲಿ ಅವರು ಪ್ರವಾಸ ನಡೆಸಲಿದ್ದಾರೆ. ಕಾಂಗ್ರೆಸ್​ ಡಿಎಂಕೆ ಜೊತೆ ಈ ಬಾರಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ.

First published: