ದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರ ಔಪಚಾರಿಕ ಪೀಠದ ಕಲಾಪಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ನ್ಯಾಯಮೂರ್ತಿ ಎನ್.ವಿ. ರಮಣ ಅವರು (CJI NV Ramana) ) ಇಂದು ಶುಕ್ರವಾರ (ಆಗಸ್ಟ್ 26) ಕಚೇರಿಯಿಂದ ನಿವೃತ್ತರಾಗಲಿದ್ದಾರೆ.ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಲೈವ್ ಸ್ಟ್ರೀಮ್ (Supreme Court Live Streaming) ಮಾಡಲಾಗುತ್ತಿದೆ. ಸಿಜೆಐ ಎನ್.ವಿ.ರಮಣ ಅವರು ನಿಯೋಜಿತ ಸಿಜೆಐ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳಲಿದ್ದಾರೆ. ನಾಳೆ (ಆಗಸ್ಟ್ 27) ಸಿಜೆಐ ಆಗಿ ನ್ಯಾಯಮೂರ್ತಿ ಯು. ಯು. ಲಲಿತ್ (Justice Uday Umesh Lalit) ಅಧಿಕಾರ ಸ್ವೀಕರಿಸಲಿದ್ದಾರೆ.
ತಮ್ಮ ನಿವೃತ್ತಿಯ ಕುರಿತು ಭಾವನಾತ್ಮಕವಾಗಿ ಮಾತನಾಡಿರುವ ಸಿಜೆಐ ಎನ್.ವಿ.ರಮಣ ಅವರು, ನೀವು ನನ್ನಿಂದ ನಿರೀಕ್ಷಿಸಿದ ನಿರೀಕ್ಷೆಗೆ ನಾನು ನಿಂತಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯವನ್ನು ಸಾಧ್ಯವಿರುವ ರೀತಿಯಲ್ಲಿ ನಿರ್ವಹಿಸಿದ್ದೇನೆ. ನಿಮಗೆಲ್ಲರಿಗೂ ತಿಳಿದಿರುವ ಮೂಲಸೌಕರ್ಯ ಮತ್ತು ನ್ಯಾಯಾಧೀಶರ ನೇಮಕಾತಿ ಎಂಬ ಎರಡು ವಿಷಯಗಳನ್ನು ನಾನು ಕೈಗೆತ್ತಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಧನ್ಯವಾದ ಅರ್ಪಿಸಿದ ಸಿಜೆಐ ಎನ್.ವಿ.ರಮಣ
ಸುಪ್ರೀಂಕೋರ್ಟ್ ಮತ್ತು ಕೊಲಿಜಿಯಂನಲ್ಲಿ ನನ್ನ ಸಹೋದರ ಮತ್ತು ಸಹೋದರಿ ನ್ಯಾಯಾಧೀಶರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾವು ಹೈಕೋರ್ಟ್ಗಳಲ್ಲಿ ಸುಮಾರು 224 ನ್ಯಾಯಾಧೀಶರನ್ನು ಯಶಸ್ವಿಯಾಗಿ ನೇಮಕ ಮಾಡಿದ್ದೇವೆ. ನಿರ್ಗಮಿಸುವ ಸಿಜೆಐ ಅವರನ್ನು ಬೀಳ್ಕೊಡಲು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿಜೆಐ ಆಗಿ ಜವಾಬ್ದಾರಿ ನಿರ್ವಹಿಸಿದ ದಿನಗಳ ಕುರಿತು ಮಾತನಾಡಿದ್ದಾರೆ.
ವಿವಿಧ ನ್ಯಾಯಮೂರ್ತಿಗಳು ಭಾಗಿ
ಈ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೌಲ್, ಇಂದಿರಾ ಬ್ಯಾನರ್ಜಿ, ಸಂಜೀವ್ ಖನ್ನಾ, ಎಸ್ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ದೆಹಲಿ ಹೈಕೋರ್ಟ್ನ ಎಲ್ಲಾ ಮಾಜಿ ನ್ಯಾಯಾಧೀಶರು, ಹೈಕೋರ್ಟ್ನ ನ್ಯಾಯಾಧೀಶರು ಮತ್ತು ಬಾರ್ನ ಸದಸ್ಯರು ಭಾಗವಹಿಸಿದ್ದರು.
ದೆಹಲಿ ಹೈಕೋರ್ಟ್ ಕುರಿತು ಶ್ಲಾಘನೆ
ದೆಹಲಿ ಹೈಕೋರ್ಟ್ ತನ್ನ ವಿಶಿಷ್ಟ ಲಕ್ಷಣಗಳು ಮತ್ತು ವಿಶೇಷತೆಗಳು ಮತ್ತು ಅದರ ವ್ಯಾಜ್ಯಗಳ ಪ್ರಮಾಣವನ್ನು ಬೇರೆ ಯಾವುದೇ ಹೈಕೋರ್ಟ್ನೊಂದಿಗೆ ಹೋಲಿಸಲಾಗುವುದಿಲ್ಲ. ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅವರ ಅಧಿಕಾರಾವಧಿಯು ಯಶಸ್ವಿ ಸಿಜೆಐ ಆಗಲು ಅವರ ಉಡಾವಣಾ ವೇದಿಕೆಯಾಗಿತ್ತು ಎಂದು ಸಹ ಸಿಜೆಐ ಎನ್.ವಿ.ರಮಣ ಅವರು ವ್ಯಾಖ್ಯಾನಿಸಿದ್ದಾರೆ.
ಇದನ್ನೂ ಓದಿ: CJI U U Lalit: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಉಮೇಶ್ ಲಲಿತ್ ನೇಮಕ
ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಅವರು, ನ್ಯಾಯಾಧೀಶರು ರಾತ್ರಿ 7-8 ಗಂಟೆಯವರೆಗೆ ಚೇಂಬರ್ನಲ್ಲಿ ಶ್ರಮಿಸುತ್ತಿದ್ದರು. ಅವರು ಬೆಳಿಗ್ಗೆ ಬಂದು ಕೆಲವೊಮ್ಮೆ ರಾತ್ರಿ 8 ಗಂಟೆ 9 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ, ಇತರ ಸ್ಥಳಗಳಲ್ಲಿ, ನ್ಯಾಯಾಧೀಶರು 4 ಗಂಟೆಗೆ ಹೋಗುತ್ತಾರೆ. ದೆಹಲಿ ಹೈಕೋರ್ಟ್ ಕಂಡು ನನಗೆ ಆಶ್ಚರ್ಯವಾಗಿತ್ತು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ತಿಳಿಸಿದ್ದಾರೆ.
ಮುಂದಿನ ಸಿಜೆಐ ಆಗಿ ಯು.ಯು.ಲಲಿತ್
ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಎನ್. ವಿ. ರಮಣ ಅವರು ನಿವೃತ್ತರಾದ ನಂತರ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಭಾರತದ ಮುಂದಿನ ನೂತನ ಮುಖ್ಯ ನ್ಯಾಯಮೂರ್ತಿಯಾಗಿಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಮಾತ್ರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ನಿರ್ವಹಿಸಲಿದ್ದಾರೆ. ನವೆಂಬರ್ 8 ರಂದು ಅಧಿಕಾರದಿಂದ ನಿರ್ಗಮಿಸಲಿರುವ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು 65 ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ