• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂಬುದು ಶುದ್ಧ ಸುಳ್ಳು; ಛೋಟಾ ಶಕೀಲ್​

ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂಬುದು ಶುದ್ಧ ಸುಳ್ಳು; ಛೋಟಾ ಶಕೀಲ್​

ಛೋಟಾ ಶಕೀಲ್​-ದಾವೂದ್​ ಇಬ್ರಾಹಿಂ

ಛೋಟಾ ಶಕೀಲ್​-ದಾವೂದ್​ ಇಬ್ರಾಹಿಂ

ಸಿಎನ್​ಎನ್​-ನ್ಯೂಸ್​18 ಜೊತೆ ದೂರವಾಣಿ ಕರೆ ಮೂಲಕ ಛೋಟಾ ಶಕೀಲ್​ ಮಾತನಾಡಿದ್ದಾನೆ. ಈ ವೇಳೆ  ದಾವೂದ್​ ಕರಾಚಿಯಲ್ಲಿರುವ ವಿಚಾರ ಸುಳ್ಳು ಎಂದು ಹೇಳಿದ್ದಾನೆ.

  • Share this:

ಮುಂಬೈ (ಆಗಸ್ಟ್​ 26): ದಾವೂದ್​ ಇಬ್ರಾಹಿಂ ಕರಾಚಿಯಲ್ಲಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿತ್ತು. ಅಷ್ಟೇ ಅಲ್ಲ, ಆತನ ವಿಳಾಸವನ್ನು ಕೂಡ ಬಹಿರಂಗ ಮಾಡಿತ್ತು. ಆದರೆ ದಾವೂದ್​ ಕರಾಚಿಯಲ್ಲಿದ್ದಾನೆ ಎನ್ನುವ ವಿಚಾರವನ್ನು ಆತನ ಆಪ್ತ ಛೋಟಾ ಶಕೀಲ್​ ಅಲ್ಲ ಗಳೆದಿದ್ದಾನೆ.


ಸಿಎನ್​ಎನ್​-ನ್ಯೂಸ್​18 ಜೊತೆ ದೂರವಾಣಿ ಕರೆ ಮೂಲಕ ಛೋಟಾ ಶಕೀಲ್​ ಮಾತನಾಡಿದ್ದಾನೆ. ಈ ವೇಳೆ  ದಾವೂದ್​ ಕರಾಚಿಯಲ್ಲಿರುವ ವಿಚಾರ ಸುಳ್ಳು ಎಂದು ಹೇಳಿದ್ದಾನೆ. ಪಾಕಿಸ್ತಾನ ದಾವೂದ್​ ವಿಳಾಸ ಬಹಿರಂಗ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಛೋಟಾ ಶಕೀಲ್​,  ದಾವೂದ್ ಕಂಪನಿಯವರು ಯಾರಿಗೂ ಉತ್ತರ ಕೊಡುವ ಅಗತ್ಯ ಇಲ್ಲ. ಕರಾಚಿಯಲ್ಲಿ ನಾವು ಇಲ್ಲ. ನಾವು ಪಾಕಿಸ್ತಾನ ಸರ್ಕಾರಕ್ಕೂ ಉತ್ತರ ಕೊಡಬೇಕಿಲ್ಲ ಎಂದು ಹೇಳಿದ್ದಾನೆ.


ಇದನ್ನೂ ಓದಿ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ನಿವಾಸದ ವಿಳಾಸ ಬಹಿರಂಗ ಮಾಡಿದ ಪಾಕಿಸ್ತಾನ!


ಇದು ಸೋಷಿಯಲ್​ ಮೀಡಿಯಾ ಕಾಲ. ನೀವು ಒಂದು ಬಂಗಲೆ ತೋರಿಸಿ ಇದು ದಾವೂದ್​ ಇಬ್ರಾಹಿಂಗೆ ಸೇರಿದ್ದು ಎಂದರೆ ಜನ ನಂಬುತ್ತಾರೆ. ನೀವು ಹಾಗೆ ತೋರಿಸೋಕೆ ಯಾವುದೇ ನಿರ್ಬಂಧ ಇಲ್ಲ ಎಂದಿದ್ದಾನೆ.

top videos


    ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್​ ದಾಳಿಗೆ ಈತನೇ ಮಾಸ್ಟರ್​ ಮೈಂಡ್​. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಸಾಲಿಗೆ ದಾವೂದ್​ ಸೇರಿದ್ದ. ಈಗ ಇದೇ ಮೊದಲ ಬಾರಿಗೆ ದಾವೂದ್​ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗ ಮಾಡಿದ್ದರು. ಆದರೆ, ಈ ವಿಳಾಸ ಸುಳ್ಳು ಎಂಬುದಾಗಿ ಛೋಟಾ ಶಕೀಲ್​ ಹೇಳಿಕೊಂಡಿದ್ದಾನೆ.


    1993ರ ಮುಂಬೈ ಬಾಂಬ್​ ಸ್ಫೋಟದ ಪ್ರಮುಖ ರುವಾರಿ ಈತನೇ ಆಗಿದ್ದ. ದಾವೂದ್​ ಮಾಡಿದ ದುಷ್ಕೃತ್ಯದಿಂದ ಸಾಕಷ್ಟು ಜನರು ಮೃತಪಟ್ಟಿದ್ದರು. ಇದಿಷ್ಟೇ ಅಲ್ಲದೆ ಬೇರೆ ಬೇರೆ ಕೃತ್ಯಗಳಲ್ಲೂ ಈತನ ಹೆಸರು ಕೇಳಿ ಬಂದಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು