ಕೋಯಿಕ್ಕೋಡ್ ವಿಮಾನ ದುರಂತ: ನೂರಾರು ಜನರ ಜೀವ ಉಳಿಸಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಪೈಲಟ್?

ವಿಂಗ್​ ಕಮಾಂಡರ್​ ದೀಪಕ್​

ವಿಂಗ್​ ಕಮಾಂಡರ್​ ದೀಪಕ್​

Air India Express Crash: ದೀಪಕ್​ ಬೋಯಿಂಗ್​ 737 ವಿಮಾನ ಚಾಲನೆ ಮಾಡುವಲ್ಲಿ ತುಂಬಾನೇ ಅನುಭವ ಹೊಂದಿದ್ದರು.  ಹೈದರಾಬಾದ್​ನಲ್ಲಿ ಏರ್​ಫೋರ್ಸ್​ ಅಕಾಡೆಮಿಯಿಂದ ಸ್ವಾರ್ಡ್​ ಆಫ್​ ಹಾನರ್​ ಗೌರವ ಕೂಡ ಅವರಿಗೆ ದೊರೆತಿತ್ತು.

  • Share this:

    ಕೋಯಿಕ್ಕೋಡ್ (ಆ.8)​: ಕೇರಳದ ಕೊಯಿಕ್ಕೋಡ್​ನಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್ ಸೇರಿ 17 ಜನರು ಮೃತಪಟ್ಟಿದ್ದಾರೆ. ಅಚ್ಚರಿ ಎಂದರೆ,  ಪೈಲಟ್​ಗಳು ನೂರಾರು ಜನರ ಪ್ರಾಣ ಉಳಿಸಿ ತಾವು ಮೃತಪಟ್ಟಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 


    ವಿಂಗ್​ ಕಮಾಂಡರ್​ ದೀಪಕ್​ ಸಾಥೆ ಈ ಮೊದಲು ಇಂಡಿಯನ್​ ಏರ್​ಫೋರ್ಸ್​ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಏರ್​ ಇಂಡಿಯಾ ವಿಮಾನ ಚಾಲನೆ ಮಾಡಲು ಆರಂಭಿಸಿದ್ದರು. ಅವರ ಕಾರ್ಯ ವೈಖರಿ ನೋಡಿ ಅವರನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದ ಪೈಲಟ್​ ಆಗಿ ಬಡ್ತಿ ನೀಡಲಾಗಿತ್ತು. ದೀಪಕ್​ ಬೋಯಿಂಗ್​ 737 ವಿಮಾನ ಚಾಲನೆ ಮಾಡುವಲ್ಲಿ ತುಂಬಾನೇ ಅನುಭವ ಹೊಂದಿದ್ದರು.  ಹೈದರಾಬಾದ್​ನಲ್ಲಿ ಏರ್​ಫೋರ್ಸ್​ ಅಕಾಡೆಮಿಯಿಂದ ಸ್ವಾರ್ಡ್​ ಆಫ್​ ಹಾನರ್​ ಗೌರವ ಕೂಡ ಅವರಿಗೆ ದೊರೆತಿತ್ತು.


    ಸಾವು-ನೋವು ಕಡಿಮೆ ಆಗಲು ದೀಪಕ್​ ಅವರ ಚಾಣಾಕ್ಷತೆಯೇ ಕಾರಣ ಎನ್ನುವ ಮಾತು ಕೇಳಿ ಬಂದಿದೆ. ಕೋಯಿಕ್ಕೋಡ್​ನ ವಿಮಾನ ನಿಲ್ದಾಣ ತುಂಬಾನೇ ಅಪಾಯಕಾರಿಯಾಗಿದೆ. ಅಲ್ಲದೆ, ನಿನ್ನೆ ಭಾರೀ ಪ್ರಮಾಣದ ಮಳೆ ಕೂಡ ಸುರಿಯುತ್ತಿತ್ತು. ವಿಮಾನ ಬಿದ್ದ ರಭಸಕ್ಕೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ದೀಪಕ್​ ಹೀಗಾಗಂದಂತೆ ತಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.  ದುರಂತದಲ್ಲಿ ಮೃತಪಟ್ಟ ಮತ್ತೋರ್ವ ಪೈಲಟ್​ ಅಖಿಲೇಶ್ ಅವರಿಗೆ​ ಕಳೆದ ವರ್ಷವಷ್ಟೇ ಮದುವೆಯಾಗಿತ್ತು.


    ಇದನ್ನೂ ಓದಿ: ಕೇರಳ ವಿಮಾನ ಅಪಘಾತ ಪ್ರಕರಣ; ತನಿಖೆಗೆ ಆದೇಶಿಸಿದ ನಾಗರೀಕ ವಿಮಾನಯಾನ ಸಚಿವಾಲಯ


    ನಡೆದಿದ್ದೇನು?:


    ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುದೆ. ದುಬೈ- ಕೊಜಿಕೋಡ್​ ವಿಮಾನ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಇದ್ದರು. ಈ ವಿಮಾನ ಕೋಯಿಕ್ಕೋಡ್​ನಲ್ಲಿ ಸಂಜೆ 7;41ರಲ್ಲಿ ಲ್ಯಾಂಡ್​ ಆಗಿದ್ದು, ರನ್​ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್​ ಸೇರಿ 17 ಜನರು ಮೃತಪಟ್ಟಿದ್ದಾರೆ.

    Published by:Rajesh Duggumane
    First published: