Vizag Accident: 100 ಅಡಿ ಕಂದಕಕ್ಕೆ ಉರುಳಿದ ಬಸ್​; 8 ಮಂದಿ ಸಾವು

ಕಂದಕಕ್ಕೆ ಉರುಳಿದ ಬಸ್​

ಕಂದಕಕ್ಕೆ ಉರುಳಿದ ಬಸ್​

ಏಂಟು ಜನರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅರಕು ನಿಂದ ಹೈದ್ರಾಬಾದ್​​ಗೆ ಮರಳುವಾಗ ಈ ಬಸ್​ ಅಪಘಾತ ನಡೆದಿದೆ.

  • Share this:

    ಹೈದ್ರಾಬಾದ್​ (ಫೆ. 12): ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಅರುಕು ಸ್ಥಳದಲ್ಲಿನ 100 ಅಡಿ ಆಳದ ಕಣಿವೆಯಲ್ಲಿ ಬಸ್​ ಉರುಳಿದ ಪರಿಣಾಮ ಏಂಟು ಜನರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅರಕು ನಿಂದ ಹೈದ್ರಾಬಾದ್​​ಗೆ ಮರಳುವಾಗ ಈ ಬಸ್​ ಅಪಘಾತ ನಡೆದಿದೆ. ಖಾಸಗಿ ಬಸ್​ನಲ್ಲಿ ಸುಮಾರು 20 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸಂಜೆ 7.30ರ ಸುಮಾರಿಗೆ ಬಸ್​ ಕಂದಕಕ್ಕೆ ಉರುಳಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವರನ್ನು ಪತ್ತೆಗಾಗಿ ಕಾರ್ಯ ನಡೆದಿದೆ. ಗಾಯಗೊಂಡವರನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


    ವಿಶಾಖ ಪಟ್ಟಣ- ಅರಕು ಘಾಟ್​ ಮಾರ್ಗದಲ್ಲಿ ಈ ಅಪಘಾತ ನಡೆದಿದೆ. ಘಾಟಿನ ನಂ. 5ನೇ ತಿರುವಿನಲ್ಲಿ ಬಸ್​ ಕಂದಕಕ್ಕೆ ಉರುಳಿದೆ. ಬಸ್​ನಲ್ಲಿ ಹಲವರ ದೇಹ ಸಿಕ್ಕಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ದೇಹವನ್ನು ಹೊರ ತೆಗೆಯುವ ಯತ್ನ ನಡೆಸಲಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.


    ಘಟನೆ ಕುರಿತು ಸಚಿವ ಅವತಿ ಶ್ರೀನಿವಾಸ್​ ವಿಷಾದ ವ್ಯಕ್ತಪಡಿಸಿದ್ದಾರೆ. ಪೊಲೀಸರೊಂದಿಗೆ ಬುಡಕಟ್ಟು ಜನರು ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು