ಹರ್ದೋಯಿ: ಉತ್ತರ ಪ್ರದೇಶದಲ್ಲಿ (Uttar Pradesh) 45 ವರ್ಷದ ಬಿಜೆಪಿ BJP) ನಾಯಕರೊಬ್ಬರು ಸಮಾಜವಾದಿ ಪಕ್ಷದ (Samajwadi Party ) ನಾಯಕರೊಬ್ಬರ 26 ವರ್ಷದ ಮಗಳೊಂದಿಗೆ ಪಲಾಯನ ಮಾಡಿರುವ ಘಟನೆ ವರದಿಯಾಗಿದೆ. ಈ ಕುರಿತು ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಎದುರಾಳಿ ಪಕ್ಷದ ನಾಯಕನ ಮಗಳೊಂದಿಗೆ ಓಡಿ ಹೋಗಿರುವ ಘಟನೆ ಬೆಳಕಿಗೆ ಬರುತ್ತಿದ್ದ ಬಿಜೆಪಿ ಆತನನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಉಚ್ಚಾಟಿಸಿದೆ (expelled) ತಿಳಿದುಬಂದಿದೆ.
ಐಎಎನ್ಎಸ್ ವರದಿಯ ಪ್ರಕಾರ ಬಿಜೆಪಿ ನಾಯಕನನ್ನು ಆಶಿಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಶುಕ್ಲಾ ಅವರು ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 21 ವರ್ಷದ ಮಗ ಮತ್ತು ಏಳು ವರ್ಷದ ಮಗಳಿಗೆ ತಂದೆಯಾಗಿರುವ ಆತ 26 ವರ್ಷದ ಯುವತಿಯೊಂದಿಗೆ ಓಡಿ ಹೋಗಿರುವುದು ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಆ ಯುವತಿಯ ಕುಟುಂಬ ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಿಗದಿಪಡಿಸಿದೆ. ಆದರೆ ಆಕೆ ಈಗಾಗಲೇ ಆಶಿಸ್ ಶುಕ್ಲಾ ಜೊತೆ ಪ್ರೀತಿಯಲ್ಲಿದ್ದರಿಂದ ಈ ವಿವಾಹವನ್ನು ಹೇಗಾದರೂ ನಿಲ್ಲಿಸಬೇಕೆಂದು ಇಬ್ಬರು ಮನೆಬಿಟ್ಟು ಓಡಿ ಹೋಗಿದ್ದಾರೆ. ಇತ್ತ ಮಹಿಳೆ ಕಡೆಯಿಂದ ದೂರು ದಾಖಲಿಸಿದರೆ, ಬಿಜೆಪಿ ಶುಕ್ಲಾರನ್ನು ಪಕ್ಷದಿಂದ ಹೊರದಬ್ಬಿದೆ.
ಇದನ್ನೂ ಓದಿ: Uttar Pradesh: ಬೇರೆ ಸಮುದಾಯದವರ ಜೊತೆ ಮಾತನಾಡಿದ್ದಕ್ಕೆ ಆಪ್ತರಿಂದಲೇ ಮುಸ್ಲಿಂ ವ್ಯಕ್ತಿಯ ಹತ್ಯೆ
ಪಕ್ಷದಿಂದ ಉಚ್ಛಾಟನೆ
ಆಶಿಶ್ ಶುಕ್ಲಾ ಬಿಜಪಿಯ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಅವರು ಪಕ್ಷದ ನೀತಿಗೆ ವಿರುದ್ಧವಾದ ಕೆಲಸ ಮಾಡಿದ್ದಾರೆ. ಈ ನಡವಳಿಕೆಯಿಂದ ಆಶಿಶ್ ಅವರನ್ನು ತಕ್ಷಣೆವೇ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಶುಕ್ಲಾ ಇನ್ನುಮುಂದೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಗಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರವಿದೆ ಎಂದು ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ
ಶುಕ್ಲಾ ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ತಮ್ಮ ಪಕ್ಷದ ಮಗಳನ್ನು ಓಡಿಸಿಕೊಂಡು ಹೋಗಿರುವುದಕ್ಕೆ ಎಸ್ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಸರಿ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬೇಟಿ ಬಚಾವೋ ಎಂಬುದು ಬಿಜೆಪಿಯ ಕೇವಲ ಕಣ್ಣೊರೆಸುವ ತಂತ್ರವಷ್ಟೆ ಎಂದು ಎಸ್ಪಿ ಪಕ್ಷದ ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ
ವಿವಾಹವಾಗಿ ವಯಸ್ಸಿಗೆ ಬಂದ ಮಗನಿದ್ದರು 26 ವರ್ಷದ ಯುವತಿಯನ್ನು ಕರೆದುಕೊಂಡು ಹೋಗಿರುವ ಆಶಿಶ್ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಬಂಧಿಸದಿದ್ದರೆ ನಾವು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಹರ್ದೋಯಿ ನಗರ ಸ್ಥಳೀಯ ಎಸ್ಪಿ ಮುಖಂಡ ಜೀತೇಂದ್ರ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ದೂರು ದಾಖಲು
ಆಶಿಶ್ ಶುಕ್ಲಾ ಹಾಗೂ ಯುವತಿ ಕಾಣೆಯಾಗಿ ಒಂದು ವಾರ ಕಳೆದಿದೆ. ಈ ಕುರಿತು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಾರವಾದರೂ ಇನ್ನೂ ಆಶಿಶ್ ಶುಕ್ಲಾರನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಜನವರಿ 12ರಂದೇ ಬಿಜಿಪಿ ಶುಕ್ಲಾರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ