ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ತಾನು ಶಕ್ತಿಶಾಲಿಯಾಗಬೇಕು ಎಂಬ ಬಯಕೆಯನ್ನು ಹೊಂದಿರುತ್ತಾನೆ. ಅದರಲ್ಲೂ ಯುವಕರು ಶಕ್ತಿಗಾಗಿ ಹಲವು ಬಗೆಯ ಔಷಧಗಳನ್ನೂ ಸೇವಿಸುತ್ತಾರೆ. ಜಿಮ್, ಡಯಟ್ ಮಾಡ್ತಾರೆ. ಫಿಟ್ (Fit) ಆಗಿರಬೇಕು ಎಂದು ಬಯಸುತ್ತಾರೆ. ಇದರ ಹೊರತಾಗಿಯೂ, ದೈಹಿಕ ದೌರ್ಬಲ್ಯವು ಅವರನ್ನು ಕಾಡುತ್ತದೆ. ಯುವಕರೇ ನಾಚುವಂತಹ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ಪರಿಚಯ ಮಾಡುತ್ತಿದ್ದೇವೆ. ಇವರ ಆಹಾರ ಕ್ರಮದ ಬಗ್ಗೆ ನಿಮಗೆ ತಿಳಿಸುತ್ತೇವೆ. 84ನೇ ವಿಯಸ್ಸಿನಲ್ಲೂ (84 Age) ಇಷ್ಟು ಶಕ್ತಿ ಹೇಗೆ ಇದೆ. ಇರದ ಹಿಂದಿನ ರಹಸ್ಯ ಏನು? ನೀವು ಈ ರೀತಿಯ ಆಹಾರ (Food) ಕ್ರಮ ಅನುಸರಿಸಿದ್ರೆ ಫಿಟ್ ಆಗ್ತೀರಿ. ಶಕ್ತಿಶಾಲಿ ವೃದ್ಧನೊಬ್ಬರ ಆಸಕ್ತಿದಾಯಕ (Interesting) ಕಥೆ ಇದು.
84 ನೇ ವಯಸ್ಸಿನ ರಂಗಿ ಮಹತೋ
ಇವರ ಹೆಸರು ರಂಗಿ ಮಹತೋ. ಬಿಹಾರದ ಪಶ್ಚಿಮ ಚಂಪಾರಣ್ ನವರು. ವಯಸ್ಸು 84. ವಯಸ್ಸು ಆಯ್ತು ಎಂದು ಕೂತು ತಿನ್ನದೇ, ಇವತ್ತೀಗೂ ಸಹ ಇವರು ಕೆಲಸ ಮಾಡ್ತಾರೆ. ಅದು ಕಷ್ಟದ ಕೆಲಸವನ್ನು. ಹೌದು 84 ವರ್ಷದ ರಂಗಿ ಮಹತೋ ಪ್ರತಿದಿನ ಕಲ್ಲುಗಳನ್ನು ಒಡೆದು ನೆಲದಿಂದ ನೀರನ್ನು ತೆಗೆಯುತ್ತಾರೆ.
ಕೊರೊನಾ ಭೀತಿಯಿಂದ ಮನೆಯಲ್ಲಿ ಎಲ್ಲರೂ ಒದ್ದಾಡುತ್ತಿದ್ದಾಗಲೂ ತಾನು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದೆ ಎಂದು ಅವರು ಹೇಳುತ್ತಾರೆ. ನೆಗಡಿ ಮತ್ತು ಕೆಮ್ಮಿನ ಹೊರತಾಗಿಯೂ, ಕೊರೊನಾ ವೈರಸ್ ಕೂಡ ಇವರನ್ನು ಟಚ್ ಮಾಡೋಕೆ ಆಗಿಲ್ವಂತೆ.
ವಯಸ್ಸಲ್ಲ, ಇಚ್ಛಾಶಕ್ತಿ ಮುಖ್ಯ
ಬೆಟ್ಟಿಯ ನಿವಾಸಿ 84 ವರ್ಷ ವಯಸ್ಸಿನವರು. ವೃತ್ತಿಯಲ್ಲಿ ಹ್ಯಾಂಡ್ ಗನ್ ಮೆಕ್ಯಾನಿಕ್. ಈ ವಯಸ್ಸಿನಲ್ಲೂ, ಪ್ರತಿದಿನ ಅವರು ನೆಲದಡಿಯಲ್ಲಿ ಅನೇಕ ಬಂಡೆಗಳನ್ನು ಒಡೆದು ನೀರನ್ನು ಹೊರತೆಗೆಯುತ್ತಾರೆ. ಈ ಶಕ್ತಿಗೆಲ್ಲಾ ಅವರು ಸೇವಿಸಿದ ಆಹಾರವೇ ಕಾರಣವಂತೆ. ಅದನ್ನು ಅವರೇ ಹೇಳಿದ್ದಾರೆ. ನಾವು ಆಗ ತಿಂದ ಆಹಾದಿಂದ, ನಾವು ಇಷ್ಟು ಗಟ್ಟಿಯಾಗಿದ್ದೇವೆ ಎಂದು ರಂಗಿ ಮಹತೋ ಹೇಳಿದ್ದಾರೆ.
ರಂಗಿ ಮಹತೋ ಫಿಟ್ನೆಸ್ ಗುಟ್ಟು
ನಾವು ಬಾಲ್ಯದಲ್ಲಿ ಕೊಡೋ ಅಕ್ಕಿ, ಮಡುವಿನ ಭಂಜದ ಜೊತೆಗೆ ಮದುವಕಿ ರೊಟ್ಟಿ, ಬಾಜ್ರ, ಜೋಳದ ಭಂಜ, ಕೋನ್ ಅಂದರೆ ಸಿಹಿ ಗೆಣಸು, ಶುದ್ಧ ಮತ್ತು ಒಣ ಧಾನ್ಯಗಳು ಇತ್ಯಾದಿಗಳನ್ನು ತಿನ್ನುತ್ತಿದ್ದೇವು. ಈಗ ಅಂತಹ ಆಹಾರ ಗಳನ್ನು ಯಾರೂ ಸೇವಿಸುವುದಿಲ್ಲ ಎಂದು ರಂಗಿ ಮಹತೋ ಹೇಳಿದ್ದಾರೆ.
ಬಡ ಕುಟುಂಬದವರು
ರಂಗಿ ಮಹತೋ ಅವರು ಬಡ ಕುಟುಂಬದವರು. ಆದ್ದರಿಂದ ಅವರಿಗೆ ಬೇಳೆಕಾಳು, ಅಕ್ಕಿ, ತರಕಾರಿ, ಹಾಲು ಸಿಗಲಿಲ್ಲ. ಅದಕ್ಕೇ ಈ ಧಾನ್ಯಗಳನ್ನೆಲ್ಲ ತಿಂದು ಬದುಕಬೇಕಿತ್ತು. ಆದರೆ ಇಂದು ಅದರ ಪರಿಣಾಮವೇನೆಂದರೆ ವೃದ್ಧಾಪ್ಯದಲ್ಲಿಯೂ ಅವರು ಸಂಪೂರ್ಣ ಆರೋಗ್ಯವಂತರಾಗಿದ್ದಾರೆ ಮತ್ತು ಶಕ್ತಿ ಶಾಲಿಯಾಗಿದ್ದಾರೆ.
ಯುವಕರು ಈ ಆಹಾರವನ್ನು ತೆಗೆದುಕೊಳ್ಳಬೇಕು
ಇಂದಿನ ಕಾಲದಲ್ಲಿ ಈ ಎಲ್ಲಾ ಆಹಾರಗಳು ಸಿಗುವುದು ಬಹಳ ಕಷ್ಟ ಎಂದು ರಂಗಿ ಮಹತೋ ಹೇಳುತ್ತಾರೆ. ಒಂದು ವೇಳೆ ಸಿಗಬೇಕಾದರೂ ಬೆಲೆ ತುಂಬಾ ಹೆಚ್ಚಿರುತ್ತದೆ. ಆದರೆ ಇವುಗಳ ಹೊರತಾಗಿಯೂ, ನೀವು ಕೆಲವು ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: Milk: ಹೆಚ್ಚು ಹಾಲು ಕುಡಿಯುವುದು ಒಳ್ಳೆಯದಲ್ಲ, ಅನಾರೋಗ್ಯವೂ ಕಾಡುತ್ತೆ!
ರಂಗಿ ಮಹತೋ ಸಲಹೆ
ಯುವಕರು ಹಾಲು ಸೇವಿಸುವುದು ಅಗತ್ಯ, ಇದಲ್ಲದೇ ಅಕ್ಕಿಗೆ ವಿಶೇಷ ಒತ್ತು ನೀಡಿದರು. ಚುರುಕುತನ ಮತ್ತು ಆರೋಗ್ಯಕ್ಕಾಗಿ ಬೇಳೆಯನ್ನು ಬೆಲ್ಲದೊಂದಿಗೆ ಸೇವಿಸಬೇಕು. ದೇಹದಲ್ಲಿ ರಕ್ತವಾಗಲು ಸೊಪ್ಪಿನ ನೀರು, ಭಾರ ಎತ್ತಲು ಊದಿದ ಸೊಪ್ಪಿನ ನೀರು ಇಂತಹ ಆಹಾರ ಸೇವಿಸಬೇಕು. ಇವುಗಳನ್ನು ತಿಂದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ವೃದ್ಧಾಪ್ಯದಲ್ಲಿ ಶಕ್ತಿಯುತವಾಗಿರಬಹುದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ