ಪಾಟ್ನಾ(ಆ.09): ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಈಗ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದು, ಈಗ ಮಹಾಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯಪಾಲ ಫಗು ಚೌಹಾಣ್ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ 164 ಶಾಸಕರ ಬೆಂಬಲ ಪತ್ರವನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ ನೂತನ ಸರ್ಕಾರ ರಚಿಸುವ ಅವಕಾಶವೂ ಸಿಕ್ಕಿದೆ. ಏತನ್ಮಧ್ಯೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ (Lalu Prasad Yadav) ಅವರ ಟ್ವೀಟ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಾಸ್ತವವಾಗಿ, ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟವನ್ನು ತೊರೆದು ಜುಲೈ 27, 2017 ರಂದು ಬಿಜೆಪಿ (BJP) ಜೊತೆ ಕೈ ಜೋಡಿಸಿದ್ದರು, ನಂತರ ಲಾಲು ಯಾದವ್ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಬಿಹಾರದಲ್ಲಿ ರಾಜಕೀಯದಲ್ಲಿ ಕೋಲಾಹಲ, ಅಪ್ಪನೇ 'ಕಿಂಗ್ಮೇಕರ್' ಎಂದ ಲಾಲೂ ಪುತ್ರಿ ರೋಹಿಣಿ!
ಈ ಟ್ವೀಟ್ನಲ್ಲಿ, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು, 'ಹೇಗೆ ಹಾವು ತನ್ನ ಚರ್ಮ ಕಳಚಿಕೊಳ್ಳುತ್ತದೋ ಹಾಘೇ, ಅದೇ ರೀತಿ ನಿತೀಶ್ ಕೂಡ ಚರ್ಮವನ್ನು ಕಳಚಿಕೊಳ್ಳುತ್ತಿರುತ್ತಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಚರ್ಮವನ್ನು ಹಾವಿನಂತೆ ಧರಿಸುತ್ತಾರೆ. ಈ ವಿಚಾರವಾಗಿ ಯಾರಿಗಾದರೂ ಅನುಮಾನವಿದೆಯೇ? ’ ಎಂದು ಬರೆದಿದ್ದರು. ಸದ್ಯ ಲಾಲು ಯಾದವ್ ಅವರ ಈ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಆಗುತ್ತಿದೆ.
ರಾಜೀನಾಮೆಗೆ ಕಾರಣ ಕೊಟ್ಟ ನಿತೀಶ್ ಕುಮಾರ್
ಈಗ ನಿತೀಶ್ ಕುಮಾರ್ ಶೀಘ್ರದಲ್ಲೇ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚಿಸಲಿದ್ದಾರೆ. ಇದೇ ವೇಳೆ ಎಲ್ಲ ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ ಬಳಿಕ ಸಿಎಂ ನಿತೀಶ್ ಕುಮಾರ್ ಮಾಧ್ಯಮದವರನ್ನುದ್ದೇಶಿಸಿ ರಾಜೀನಾಮೆ ನೀಡಿದ ಕಾರಣವನ್ನೂ ವಿವರಿಸಿದ್ದಾರೆ. ಈ ವೇಳೆ ಜೆಡಿಯುನ ಎಲ್ಲ ಸಂಸದರು ಮತ್ತು ಶಾಸಕರು ಎನ್ಡಿಎಯಿಂದ ಬೇರ್ಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು. ಆರ್ಜೆಡಿ ಜೊತೆ ಹೋಗುವಾಗ ಸಮಾಜದಲ್ಲಿ ವಿವಾದ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದರು. ಹೀಗಾಗಿ ಈಗ ಬಿಜೆಪಿಯಿಂದ ಬೇರ್ಪಡಲು ನಿರ್ಧರಿಸಿದ್ದೇವೆ. ಇದು ನನ್ನದು ಮಾತ್ರವಲ್ಲ ಇಡೀ ಪಕ್ಷದ ನಿರ್ಧಾರ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Bihar Politics: ಬಿಜೆಪಿ ಫ್ರೆಂಡ್ಶಿಪ್ಗೆ ಟಾಟಾ; ಮತ್ತೆ ಮಹಾಘಟಬಂಧನ ರಚನೆಗೆ ನಿತೀಶ್ ಕುಮಾರ್ ಒಲವು?
ನಿತೀಶ್ ಕುಮಾರ್ ಅವರು 2013 ರಲ್ಲಿ ಬಿಜೆಪಿ ತೊರೆದು 2014 ರ ಲೋಕಸಭೆ ಚುನಾವಣೆಗೆ ಮೊದಲು ಕೊನೆಯ ಬಾರಿಗೆ ಆರ್ಜೆಡಿ ಸೇರಿದ್ದರು. ಆಗ ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟದ ಸಹಯೋಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿತನ್ ರಾಮ್ ಮಾಂಝಿ ಅವರನ್ನು ಸಿಎಂ ಮಾಡಿದರು. ಆದರೆ, 2015ರ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಬಂಪರ್ ಜಯ ಸಿಕ್ಕಿದ್ದು, ಆ ಬಳಿಕ ಸಿಎಂ ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರ ಸಿಎಂ ಆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ