ತಾನು ರಾಜಕೀಯದಿಂದ ದೂರ ಉಳಿಯುವುದಾಗಿ ಶನಿವಾರ ಘೋಷಿಸಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ಸೋಮವಾರ ಸಂಜೆ ವೇಳೆಗೆ ಉಲ್ಟಾ ಹೊಡೆದಿದ್ದು, ತಮ್ಮ ಯೋಜನೆಗಳನ್ನು ಏನಾದರೂ ಬದಲಾವಣೆ ಮಾಡಿಕೊಂಡರಾ ಎನ್ನುವ ಅನುಮಾನ ಕಾಡುತ್ತಿದೆ. ಏಕೆಂದರೆ ಅವರು ಸೋಮವಾರ ಸಂಜೆ ಹೊತ್ತಿಗೆ ನಾನು ಸಂಸತ್ತಿನ ಸದಸ್ಯರಾಗಿ ಸೇವೆ ಮುಂದುವರೆಸುತ್ತೇನೆ ಎಂದು ಹೇಳಿದರು.
ಫೇಸ್ಬುಕ್ನಲ್ಲಿ ರಾಜಕೀಯ ತೊರೆಯುವುದಾಗಿ ಘೋಷಿಸಿದ ನಂತರ ಬಿಜೆಪಿಯೊಳಗೆ ರಾಜಕೀಯ ಬಿರುಗಾಳಿಯೇ ಆರಂಭವಾಗಿತ್ತು, ತಾನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಮತ್ತು ದೆಹಲಿಯಲ್ಲಿನ ಭದ್ರತೆ ಮತ್ತು ವಸತಿಗಳನ್ನು ತ್ಯಜಿಸುತ್ತೇನೆ ಎಂದು ಶನಿವಾರದಂದು ಸುಪ್ರಿಯೋ ಖಂಡಾತುಂಡವಾಗಿ ಹೇಳಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಅವರ ಮೂಲಕ ಈ ರೀತಿ ಹೇಳಿಕೆ ಬಂದಿದೆ. "ನಾನು ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನನ್ನು ಇಲ್ಲೇ ಇರಿ, ಹಿನ್ನೆಲೆಯಲ್ಲಿ ಕೆಲಸ ಮಾಡಿ ಎಂದು ಕೇಳಿದರು. ಆದರೆ ನಾನು ರಾಜಕೀಯ ಮಾಡುವುದನ್ನು ತೊರೆಯುತ್ತಿದ್ದೇನೆ. ಆದರೆ ಸಂಸದನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದನ್ನು ಮುಂದುವರಿಸುತ್ತೇನೆ ಏಕೆಂದರೆ ಅದು ಸಾಂವಿಧಾನಿಕ ಹುದ್ದೆಯಾಗಿದೆ "ಎಂದು ಅವರು ಹೇಳಿದರು.
ಸುಪ್ರಿಯೋ ಅವರು ಶನಿವಾರ ಮಧ್ಯರಾತ್ರಿ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು, ಎಂದು ಪಿಟಿಐ ಸಂಸ್ಥೆಗೆ ಬಿಜೆಪಿಯ ಮೂಲಗಳು ತಿಳಿಸಿವೆ ಎಂದು ಹೇಳಾಗಿದೆ.
"ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ" ಎಂದು ಗಾಯಕ-ರಾಜಕಾರಣಿ ಹೇಳಿದರು. "ನಾನು ಬಿಜೆಪಿ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ ... ನನ್ನ ಸ್ಥಾನ ಏನು ಎಂದು ನಾನು ಅವರಿಗೆ ಸವಿವರವಾಗಿ ವಿವರಿಸಿದ್ದೇನೆ’’ ಎಂದರು.
"ನೀವು ರಾಜಕಾರಣಿ ಬಾಬುಲ್ ಅನ್ನು ಇನ್ನೂ ಸರಿಯಾಗಿ ನೋಡಿಲ್ಲ ... ಆದರೆ ನನ್ನ ಕ್ಷೇತ್ರದ ಜನರು ನನ್ನನ್ನು ತಮ್ಮ ಸಂಸದನನ್ನಾಗಿ ನೋಡಲು ಬಯಸುತ್ತಾರೆ" ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಸುಪ್ರಿಯೋ ಹೇಳಿರುವುದಾಗಿ ಉಲ್ಲೇಖೀಸಲಾಗಿದೆ. "ನಾನು ಶೀಘ್ರದಲ್ಲೇ ಮುಂಬೈ ಅಥವಾ ಕೋಲ್ಕತ್ತಾದಲ್ಲಿ ಇರುವುದಾಗಿ" ಅವರು ಹೇಳಿದರು.
ಇದಕ್ಕೂ ಮುನ್ನ, ಭಾನುವಾರ, ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಸುಪ್ರಿಯೋ ಅವರು ನಾಟಕ ಮಾಡುತ್ತಿದ್ದಾರೆ ಮತ್ತು ಅವರಿಗೆ ಸಂಸದ ಸ್ಥಾನವನ್ನು ತೊರೆಯುವ ಧೈರ್ಯವಿಲ್ಲ ಎಂದು ಗೇಲಿ ಮಾಡಿದ್ದರು, "ನಾನು ಈಗಾಗಲೇ ಲೋಕಸಭಾ ಸ್ಪೀಕರ್ನಿಂದ ಸಮಯ ಕೇಳಿದ್ದೇನೆ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಆತನ ಒಪ್ಪಿಗೆ ಅಗತ್ಯ ಇದೆಯೇ ಕೇಳಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ