ಮೊರಾದಾಬಾದ್, ಉತ್ತರ ಪ್ರದೇಶ: ಚಿತ್ರರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ದಂಧೆ (arge-scale drug peddling) ನಡೆಯುತ್ತಿದೆ ಎನ್ನುವ ಆರೋಪ ಇಂದು, ನಿನ್ನೆಯದಲ್ಲ. ಅದರಲ್ಲೂ ಬಾಲಿವುಡ್ನಲ್ಲಿ (Bollywood) ಡ್ರಗ್ಸ್ ಪಾರ್ಟಿಗಳು (Drugs Party) ಸಾಮಾನ್ಯ ಎನ್ನುವುದು ದೊಡ್ಡ ಆರೋಪ. ಇದೀಗ ಬಾಲಿವುಡ್ ಡ್ರಗ್ಸ್ ದಂಧೆ ಕುರಿತಂತೆ ಯೋಗ ಗುರು ಬಾಬಾ ರಾಮ್ದೇವ್ (yoga guru Baba Ramdev) ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ನ ಸೂಪರ್ ಸ್ಟಾರ್ಗಳು (Super Stars) ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಅಂತ ಬಾಬಾ ರಾಮ್ದೇವ್ ಆರೋಪಿಸಿದ್ದಾರೆ. ಅದರಲ್ಲೂ ಬಾಲಿವುಡ್ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ (Salman Khan) ಸೇರಿದಂತೆ ಪ್ರಮುಖರು ಡ್ರಗ್ಸ್ ಸೇವಿಸುತ್ತಾರೆ ಅಂತ ಆರೋಪಿಸಿದ್ದಾರೆ. ಬಾಬಾ ರಾಮ್ದೇವ್ ಅವರ ಈ ಗಂಭೀರ ಆರೋಪ, ಇದೀಗ ಬಾಲಿವುಡ್ನಲ್ಲಿ ಕೋಲಾಹಲ ಎಬ್ಬಿಸಿದೆ.
ಬಾಬಾ ರಾಮ್ದೇವ್ ಗಂಭೀರ ಆರೋಪ
ಕಳೆದ ಕೆಲವು ವರ್ಷಗಳಿಂದ, ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ವರದಿಯಾಗಿದೆ, ಇದರಲ್ಲಿ ಅನೇಕ ತಾರೆಯರ ಹೆಸರುಗಳು ಮುಂಚೂಣಿಗೆ ಬಂದಿವೆ. ಇನ್ನು ಯೋಗ ಗುರು ಬಾಬಾ ರಾಮ್ದೇವ್ ಡ್ರಗ್ ಪ್ರಕರಣದಲ್ಲಿ ಹಲವು ನಟರನ್ನು ಟಾರ್ಗೆಟ್ ಮಾಡಿದ್ದು, ಸಲ್ಮಾನ್ ಖಾನ್ ಸೇರಿದಂತೆ ಹಲವು ನಟಿಯರು ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
जिन्ना पर बाबा रामदेव का जोरदार हमला
जिन्ना दारू पीता था- रामदेव#BreakingNews #BabaRamdev pic.twitter.com/Zj68GyQWNG
— ADV Nitin Chauhan (@ADVNitinChauha5) October 15, 2022
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಆರ್ಯವೀರ ಮತ್ತು ವೀರಾಂಗನಾ ಸಮಾವೇಶದಲ್ಲಿ ಭಾಗವಹಿಸಲು ಬಾಬಾ ರಾಮ್ದೇವ್ ಬಂದಿದ್ದರು, ಅಲ್ಲಿ ಅವರು ಮಾದಕ ದ್ರವ್ಯ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಾಲಿವುಡ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Weirdest Law: ಹಸು ಸೆಗಣಿ ಹಾಕಿದ್ರೂ ಕೊಡಬೇಕು ಟ್ಯಾಕ್ಸ್! ವಿಚಿತ್ರ ಕಾನೂನಿನಿಂದ ರೈತರು ಕಂಗಾಲು
“ಶಾರುಖ್ ಖಾನ್, ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ”
ಬಾಲಿವುಡ್ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ ಅಂತ ಬಾಬಾ ರಾಮ್ದೇವ್ ಆರೋಪಿಸಿದ್ದಾರೆ. ಆಮೀರ್ ಖಾನ್ ಬಗ್ಗೆ ನನಗೆ ತಿಳಿದಿಲ್ಲ ಎಂದಿರುವ ಬಾಬಾ ರಾಮ್ದೇವ್, ಶಾರುಖ್ ಖಾನ್ ಅವರ ಮಗು ಡ್ರಗ್ಸ್ ಸೇವಿಸುವಾಗ ಸಿಕ್ಕಿಬಿದ್ದಿದ್ದು, ಜೈಲಿನಲ್ಲಿ ಉಳಿದಿದೆ. ಕಾರಾಗೃಹದಲ್ಲಿದ್ದಾಗ ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸಿದ್ದರು. ಅಮೀರ್ ತಿಳಿದಿಲ್ಲ. ನಟಿಯರ ಬಗ್ಗೆ ನನಗೆ ಗೊತ್ತಿಲ್ಲ, ಅವೆಲ್ಲ ದೇವರಿಗೇ ಗೊತ್ತಿದೆ. ಬಾಲಿವುಡ್ ತಾರೆಯರು ಎಷ್ಟು ದೊಡ್ಡ ವ್ಯಕ್ತಿಗಳು ಅಂತ ಜನರು ಕರೆಯುತ್ತಾರೆ. ಆದರೆ ಅವರು ಏನು ಅಂತ ದೇವರಿಗೆ ಮಾತ್ರ ತಿಳಿದಿದೆ ಅಂತ ರಾಮ್ದೇವ್ ಹೇಳಿದ್ದಾರೆ.
ಯುವ ಜನರಲ್ಲಿ ಬಾಬಾ ರಾಮ್ದೇವ್ ಮನವಿ
ಬಾಬಾ ರಾಮ್ದೇವ್ ಅವರು ವೇದಿಕೆಯಿಂದಲೇ ಜನರಿಗೆ ಚಟ-ವ್ಯಸನದ ಬಗ್ಗೆ ಅರಿವು ಮೂಡಿಸುವ ಮೂಲಕ ಮಾದಕ ವ್ಯಸನ ಮುಕ್ತ ಸಮಯವನ್ನು ಸೃಷ್ಟಿಸಲು ಜನರಿಗೆ ಕರೆ ನೀಡಿದರು. ನಾವು ಯಾರೂ ಬೀಡಿ, ಸಿಗರೇಟ್, ಮದ್ಯ ಸೇವಿಸಬಾರದು ಎಂಬುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಇದರಲ್ಲಿ ಆರ್ಯಸಮಾಜ ಮಾಡುವ ಕೆಲಸ ಅತ್ಯಂತ ಅಗತ್ಯವಾಗಿದೆ ಎಂದರು. ಇಡೀ ರಾಷ್ಟ್ರವು ಮಾದಕ ವ್ಯಸನ ಮುಕ್ತವಾದರೆ, ಮಹರ್ಷಿ ದಯಾನಂದರ ಕನಸು ನನಸಾಗಿದೆ ಎಂದು ಅರ್ಥಮಾಡಿಕೊಳ್ಳಿ, ಅದು ಕಾನೂನಿನಿಂದ ಆಗುವುದಿಲ್ಲ, ಇದಕ್ಕಾಗಿ ನೀವೇ ಅದನ್ನು ಮಾಡಬೇಕಾಗಿದೆ ಅಂತ ಯುವ ಜನರಿಗೆ ಕರೆ ನೀಡಿದರು.
ಇದನ್ನೂ ಓದಿ: Sabarimala Ayyappa: ಯಾರಿಗೆ ಸಿಗುತ್ತೆ ಅಯ್ಯಪ್ಪನ ಪೂಜೆಯ ಅವಕಾಶ? ಪುಟ್ಟ ಮಕ್ಕಳಿಂದ ಆಯ್ಕೆಯಾಗಲಿದ್ದಾರೆ ಅರ್ಚಕರು!
ಡ್ರಗ್ಸ್ ಜೊತೆ ಬಾಲಿವುಡ್ನ ಹೆಸರು ಥಳುಕು!
ಡ್ರಗ್ಸ್ ಜೊತೆ ಬಾಲಿವುಡ್ ನ ಸಂಪರ್ಕದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಡ್ರಗ್ಸ್ ಸಂಪರ್ಕದ ಚರ್ಚೆ ಪ್ರಾರಂಭವಾಯಿತು. ಅಂದಿನಿಂದ ಬಾಲಿವುಡ್ ಮತ್ತು ಬಾಲಿವುಡ್ ತಾರೆಯರು ಎನ್ಸಿಬಿಯ ಗುರಿಯಲ್ಲಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಬಂಧಿಸಿತ್ತು. ಆದರೆ, ಈ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ