Makarajyothi: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು

ಶಬರಿಮಲೆ ದೇವಸ್ಥಾನ

ಶಬರಿಮಲೆ ದೇವಸ್ಥಾನ

ಇಂದು ಸಂಜೆ 6.42ಕ್ಕೆ ಮಕರ ಜ್ಯೋತಿ ಕಾಣಿಸಿಕೊಂಡಿದೆ. ಈ ವೇಳೆ ದೇವಾಲಯದಲ್ಲಿ ಮಂತ್ರಘೋಷಗಳು ಮೊಳಗಿದವು

  • Share this:

ಶಬರಿಮಲೆಯ ಅಯ್ಯಪ್ಪ ದೇಗುಲದ ಎದುರಿರುವ ಪೊನ್ನಂಬಲಮೇಡೌನಲ್ಲಿ ಕಾಣಿಸಿಕೊಂಡ ಮಕರಜ್ಯೋತಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಕರ ಸಂಕ್ರಾಂತಿಯಾದ ಇಂದು ಸಂಜೆ 6.42ಕ್ಕೆ ಮಕರ ಜ್ಯೋತಿ ಕಾಣಿಸಿಕೊಂಡಿದೆ. ಈ ವೇಳೆ ದೇವಾಲಯದಲ್ಲಿ ಮಂತ್ರಘೋಷಗಳು ಮೊಳಗಿದವು. ದೇವಾಲಯದಲ್ಲಿ ದೀಪಾರಾಧನೆಯಾದ ತಕ್ಷಣದ ಈ ಪವಿತ್ರ ಮಕರ ಜ್ಯೋತಿ ದರ್ಶನವಾಗಿದೆ. ಈ ಬಾರಿ ಕೋವಿಡ್​ ಹಿನ್ನಲೆಯಲ್ಲಿ ದೇವಾಲಯದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿತ್ತು. ಪ್ರತಿ ಬಾರಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸನ್ನಿಧಿಯಲ್ಲಿ ಈ ದಿವ್ಯ ಮಕರ ಜ್ಯೋತಿ ದರ್ಶನ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸೋಂಕಿನ ಹಿನ್ನಲೆ ದೇವಾಲಯಕ್ಕೆ ಈ ದಿನ ಕೇವಲ 5000 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.


ಮಕರ ಜ್ಯೋತಿ ಕಾಣಲು ಭಕ್ತರು ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾದು ನಿಂತಿದ್ದರು, ಈ ವೇಳೆ ಪೊಲೀಸರು ಎಲ್ಲಾ ಸ್ಥಳದಲ್ಲಿ ಪೊಲೀಸ್​ ಭದ್ರತೆ ಯೋಜಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದರು.


ಮಕರ ಜ್ಯೋತಿ ದರ್ಶನಕ್ಕೂ ಮುಂಚೆ ದೇವಸ್ವಂ ಮಂಡಳಿ ಸಚಿವ ಕಡಕಂಪಿಲ್ಲ ಸುರೇಂದ್ರನ್​ ಮತ್ತು ರಾಜೀವರ ನೇತೃತ್ವದಲ್ಲಿ ತಿರುವಭರಂಣ ಹೊತ್ತು ದೇವಾಲಯದವರೆಗೆ ಮೆರವಣಿಗೆ ಸಾಗಿ ಬಂದಿತು. ಬಳಿಕ ದೇವರನ್ನು ಆಭರಣಗಳಿಂದ ಅಲಂಕರಿಸಲಾಯಿತು.


ಇದೇ ವೇಳೆ ದೇವಸ್ವಂ ಗಾಯಯ ವೀರಮಣಿ ರಾಜು ಅವರಿಗೆ ಹರಿವರಸನಂ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ನಗದನ್ನು ಹೊಂದಿದೆ.
ದೇವಾಲಯದ ವಾರ್ಷಿಕ ಯಾತ್ರೆ ಜ. 20ರಂದು ಬೆಳಗ್ಗೆ ಮಲಿಕಪ್ಪುರಂನಲ್ಲಿ ಗುರುತಿ ಆಚರಣೆ ಬಳಿಕ ಅಂತ್ಯಗೊಳ್ಳಲಿದೆ

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು