• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Asaduddin Owaisi| ಅಸಾದುದ್ದೀನ್ ಓವೈಸಿ ದೆಹಲಿ ಮನೆ ಮೇಲೆ ದಾಳಿ; ಐದು ಜನ ಹಿಂದೂಸೇನಾ ಕಾರ್ಯಕರ್ತರ ಬಂಧನ!

Asaduddin Owaisi| ಅಸಾದುದ್ದೀನ್ ಓವೈಸಿ ದೆಹಲಿ ಮನೆ ಮೇಲೆ ದಾಳಿ; ಐದು ಜನ ಹಿಂದೂಸೇನಾ ಕಾರ್ಯಕರ್ತರ ಬಂಧನ!

ದಾಳಿಗೊಳಗಾಗಿರುವ ಓವೈಸಿ ಮನೆ.

ದಾಳಿಗೊಳಗಾಗಿರುವ ಓವೈಸಿ ಮನೆ.

ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ದೆಹಲಿ ನೂತನ ಪೊಲೀಸ್ ಆಯುಕ್ತ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.

  • Share this:

ದೆಹಲಿ (ಸೆಪ್ಟೆಂಬರ್​ 22); ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲೀಸ್​-ಎ-ಇತ್ತೆಹಾದುಲ್ ಮುಸ್ಲಿಮೆನ್(All India Majlis-e-Ittehadul Muslimeen) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದೆಹಲಿ ಅಧಿಕೃತ ನಿವಾಸದ ಮೇಲೆ ಇತ್ತೀಚೆಗೆ ಕೆಲವು ಹಿಂದೂ ಸೇನಾ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದೀಗ ಹಿಂದೂ ಸೇನೆ ಎಂಬ ಗುಂಪಿನವರೆಂದು ಹೇಳಿಕೊಂಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಓವೈಸಿ, "ಮನೆ ಮೇಲೆ ದಾಳಿ ನಡೆಸಿದ ಈ ಗುಂಪು ಕೋಮು ಘೋಷಣೆಗಳನ್ನು ಕೂಗಿ, ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದೆ" ಎಂದಿದ್ದಾರೆ.


ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ದೆಹಲಿ ನೂತನ ಪೊಲೀಸ್ ಆಯುಕ್ತ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.


ಘಟನೆ ಕುರಿತು ಸರಣಿ ಟ್ವೀಟ್ ಮಾಡಿರುವ ಹೈದರಾಬಾದ್ ಸಂಸದ ಓವೈಸಿ, "ನನ್ನ ದೆಹಲಿಯ ನಿವಾಸದ ಮೇಲೆ ಇಂದು ಗೂಂಡಾಗಳು ದಾಳಿ ಮಾಡಿದ್ದಾರೆ. ಅವರ ಹೇಡಿತನ ನನಗೆ ಚೆನ್ನಾಗಿ ತಿಳಿದಿದೆ. ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಎಂದಿನಂತೆ ಗುಂಪಿನಲ್ಲಿ ಬಂದಿದ್ದಾರೆ. ಕೊಡಲಿ ಮತ್ತು ಕೋಲುಗಳನ್ನು ಹಿಡು ಬಂದಿದ್ದ ಅವರು ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆ ಮುಂದಿನ ನನ್ನ ನಾಮಫಲಕ ನಾಶ ಮಾಡಿದ್ದಾರೆ" ಎಂದಿದ್ದಾರೆ.


"ದಾಳಿ ನಡೆಸಿದವರು ಕನಿಷ್ಠ 13 ಜನರಿದ್ದರು, ಅದರಲ್ಲಿ 6 ಜನರನ್ನು ಬಂಧಿಸಲಾಗಿದೆ. ನನ್ನ ನಿವಾಸದ ಮೇಲೆ ದಾಳಿ ನಡೆಸುತ್ತಿರುವುದು ಇದು ಮೂರನೇ ಬಾರಿ. ಕಳೆದ ಬಾರಿ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ರಾಜನಾಥ ಸಿಂಗ್ ಅವರು ಕೇವಲ ಗೃಹ ಸಚಿವರಾಗಿರದೆ ನನ್ನ ನೆರೆಯವರಾಗಿದ್ದರು" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Crime News| ಮಗಳನ್ನ ನೇಣಿಗೇರಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ; ರಾಜ್ಯದಲ್ಲಿ ಹೆಚ್ಚುತ್ತಿದೆ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ!


"ಕಳೆದ 40 ವರ್ಷಗಳಿಂದ ಮನೆಯನ್ನು ನೊಡಿಕೊಳ್ಳುತ್ತಿರುವ ರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಗುಂಪು ಕೋಮು ಘೋಷಣೆಗಳನ್ನು ಕೂಗಿ, ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ರಾಜು ಅವರ ಮೊಮ್ಮಕ್ಕಳು ಈಗ ಭಯದಿಂದ ಬದುಕುತ್ತಿದ್ದಾರೆ. ರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದು ಭಾವಿಸುತ್ತೇವೆ" ಎಮದು ಅಸಾದುಸ್ಸೀನ್ ಓವೈಸಿ ಹೇಳಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: