• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಅರವಿಂದ ಕೇಜ್ರಿವಾಲ್ ಕೈಜೋಡಿಸಿದ್ದಾರೆ; ಸಂಸದ ಗೌತಮ್ ಗಂಭೀರ್​ ಆರೋಪ

ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಅರವಿಂದ ಕೇಜ್ರಿವಾಲ್ ಕೈಜೋಡಿಸಿದ್ದಾರೆ; ಸಂಸದ ಗೌತಮ್ ಗಂಭೀರ್​ ಆರೋಪ

ಗೌತಮ್ ಗಂಭೀರ್​.

ಗೌತಮ್ ಗಂಭೀರ್​.

ರೈತ ಹೋರಾಟಕ್ಕೆ ಪಂಜಾಬ್​ ರಾಜ್ಯದಲ್ಲಿ ಬಹುದೊಡ್ಡ ಬೆಂಬಲ ಇದೆ. ಹೀಗಾಗಿ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷವನ್ನು ಬೆಳೆಸುವ ಸಲುವಾಗಿ, ಅರವಿಂದ ಕೇಜ್ರಿವಾಲ್​ ಈ ಅಹಿತಕರ ಘಟನೆಯಲ್ಲಿ ಪಾಲ್ಗೊಂಡವರ ಜೊತೆ ಕೈಜೋಡಿಸಿದ್ದಾರೆ ಎಂದು ಗಂಭೀರ್​ ಆರೋಪಿಸಿದ್ದಾರೆ.

  • Share this:

    ನವ ದೆಹಲಿ (ಜನವರಿ 28): ಗಣರಾಜ್ಯೋತ್ಸವದ ದಿನ ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣರಾದವರೊಂದಿಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಸಂಸದ ಮಾಜಿ ಕ್ರಿಕೆಟಿಗ ಗೌತಮ್ ಗಂಬೀರ್​ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರವಲಯದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 20 ಜನ ಗಾಯಾಳುಗಳಾಗಿದ್ದಾರೆ. ಕೆಲ ಪೊಲೀಸರಿಗೂ ಸಹ ಗಾಯಗಳಾಗಿವೆ. ಈ ಸಂಬಂಧ 200 ಜನರನ್ನು ಬಂಧಿಸಲಾಗಿದ್ದು 22 ಎಫ್​ಐಆರ್​ ದಾಖಲಿಸಲಾಗಿದೆ.



    ಈ ಅಹಿತಕರ ಘಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಕಿಡಿಕಾರಿರುವ ಗೌತಮ್​ ಗಂಭೀರ್​, "ರೈತ ಹೋರಾಟಕ್ಕೆ ಪಂಜಾಬ್​ ರಾಜ್ಯದಲ್ಲಿ ಬಹುದೊಡ್ಡ ಬೆಂಬಲ ಇದೆ. ಹೀಗಾಗಿ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷವನ್ನು ಬೆಳೆಸುವ ಸಲುವಾಗಿ, ಅರವಿಂದ ಕೇಜ್ರಿವಾಲ್​ ಈ ಅಹಿತಕರ ಘಟನೆಯಲ್ಲಿ ಪಾಲ್ಗೊಂಡವರ ಜೊತೆ ಕೈಜೋಡಿಸಿದ್ದಾರೆ" ಎಂದು ಗಂಭೀರ್​ ಆರೋಪಿಸಿದ್ದಾರೆ. ಪಂಜಾಬ್​ ರಾಜ್ಯದಲ್ಲಿ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಪ್ರಮುಖ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ.


    ಇನ್ನೂ ದೆಹಲಿಯಲ್ಲಿ ಇಂದು ನಡೆದ ಒಂಬತ್ತನೇ ರಾಷ್ಟ್ರೀಯ ಕೌನ್ಸಿಲ್​ ಸಭೆಯಲ್ಲಿ ಮಾತನಾಡಿರುವ ಅರವಿಂದ ಕೇಜ್ರಿವಾಲ್, "ಗಣ ರಾಜ್ಯೋತ್ಸವದ ದಿನ ದೆಹಲಿ ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರವನ್ನು ಎಎಪಿ ಖಂಡಿಸುತ್ತದೆ. ಅಲ್ಲದೆ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು" ಎಂದು ಕರೆ ನೀಡಿದ್ದರು.


    ರೈತರ ಟ್ರ್ಯಾಕ್ಟರ್​ ಮೆರವಣಿಗೆಗೆ ಅನುಮತಿ ನೀಡಿದ್ದ ಪೊಲೀಸರು ಮಾರ್ಗಗಳನ್ನೂ ಸೂಚಿಸಿದ್ದರು. ಆದರೆ, ಕೆಲ ಹೋರಾಟಗಾರರು ಮಾರ್ಗ ಬದಲಿಸಿ ಕೆಂಪುಕೋಟೆಗೆ ಮುತ್ತಿಗೆ ಇಡಲು ಹೊರಟಾಗ ಈ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದರೆ, 20 ಜನರಿಗೆ ಗಾಯಗಳಾಗಿವೆ. ಪೊಲೀಸರು ಸಹ ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ. ಅಮಿತ್​ ಶಾ ಸಹ ಗಾಯಗೊಂಡ ಪೊಲೀಸರನ್ನು ಭೇಟಿ ಮಾಡಿ ಸಾಂತ್ವನ ನೀಡಿದ್ದಾರೆ.


    ಇದನ್ನೂ ಓದಿ: Farmers Protest: ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್​


    ಈ ಕುರಿತು ಮಾತನಾಡಿರುವ ಕೇಜ್ರಿವಾಲ್, "ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಹಿಂಸಾತ್ಮಕ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕಾನೂನು ಕ್ರಮ ಜರುಗಿಸಬೇಕು. ಆದರೆ ಅಹಿಂಸಾತ್ಮಕ ರೈತರ ಹೋರಾಟ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ತಮ್ಮ ಹಕ್ಕಿಗಾಗಿನ ರೈತರ ಹೋರಾಟ ಮುಂದುವರೆಯಲಿದೆ" ಎಂದು ತಿಳಿಸಿದ್ದರು.


    ಅಲ್ಲದೆ, "ಈ ಘಟನೆಗೆ ಯಾರು ಹೊಣೆಗಾರರು ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿ. ತಪ್ಪು ಮಾಡಿದವರು ಶಿಕ್ಷೆಗೆ ಅರ್ಹರು. ಆದರೆ, ನಕಲಿ ಪ್ರಕರಣ ದಾಖಲಿಸುವುದು ಸರಿಯಲ್ಲ" ಎಂದು ಪೊಲೀಸರಿಗೆ ಕಿವಿಮಾತು ಹೇಳಿದ್ದರು.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು