ವಿವಾದಗಳ ಬಳಿಕ ಸ್ಥಾನದಿಂದ ಕೆಳಗಿಳಿದ ಫೇಸ್​ಬುಕ್​ ಇಂಡಿಯಾ ಅಧಿಕಾರಿ ಅಂಕಿದಾಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾರ್ವಜನಿಕ ಸೇವೆಯ ಆಸಕ್ತಿ ವಿಷಯಗಳನ್ನು ಹಿಡಿದಿಡುವಲ್ಲಿ ವಿಫಲವಾದ ಹಿನ್ನಲೆ ಅವರು ಸ್ಥಾನದಿಂದ ಕೆಳಗೆ ಇಳಿದಿದ್ದಾರೆ ಎಂದು ಫೇಸ್​ಬುಕ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್​ ಮೋಹನ್​ ತಿಳಿಸಿದ್ದಾರೆ.

  • Share this:

ನವದೆಹಲಿ (ಅ.27): ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಫೇಸ್​ಬುಕ್​ ದೇಶದಲ್ಲಿ ರಾಜಕೀಯವ ವಿಷಯಗಳನ್ನು ಹೇಗೆ ನಿರ್ವಹಿಸುತ್ತಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಈ ವರದಿ ಬಳಿಕ ಫೇಸ್​ಬುಕ್​ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್​ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಸಾರ್ವಜನಿಕ ಸೇವೆಯ ಆಸಕ್ತಿ ವಿಷಯಗಳನ್ನು ಹಿಡಿದಿಡುವಲ್ಲಿ ವಿಫಲವಾದ ಹಿನ್ನಲೆ ಅವರು ಸ್ಥಾನದಿಂದ ಕೆಳಗೆ ಇಳಿದಿದ್ದಾರೆ ಎಂದು ಫೇಸ್​ಬುಕ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್​ ಮೋಹನ್​ ತಿಳಿಸಿದ್ದಾರೆ.  ಭಾರತ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನಿಯಮದ ಮುಖ್ಯಸ್ಥರಾಗಿ ದಾಸ್​ ಕಾರ್ಯನಿರ್ವಹಿಸುತ್ತಿದ್ದರು.  


ದೇಶದಲ್ಲಿ ಫೇಸ್​ಬುಕ್​ ವ್ಯವಹಾರ ಭವಿಷ್ಯದಲ್ಲಿ ಹಾನಿಯಾಗಬಹುದೆಂಬ ಭೀತಿಯಿಂದ ಅವರು ಹಿಂದೂ ವಿರೋಧಿ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ಅವರು ವಿರೋಧಿಸಿದ್ದರು ಎಂದು ಈ ಹಿಂದೆ ವಾಲ್​ಸ್ಟ್ರೀಟ್​ ಜರ್ನಲ್​ ವರದಿ ಮಾಡಿತ್ತು.


ಆದರೆ, ಈ ವರದಿ ಬಳಿಕವೂ ಫೇಸ್​ಬುಕ್ ಮುಖ್ಯಸ್ಥ ಅಜಿತ್​ ಮೋಹನ್​ ದಾಸ್​ ತಮ್ಮ ಸಂಸ್ಥೆಯ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೇ ವಾಲ್​ಸ್ಟ್ರೀಟ್​ ಜರ್ನಲ್​ನ ಲೇಖನ ವ್ಯಕ್ತಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದರು.


ಇದನ್ನು ಓದಿ: ದೆಹಲಿ ಗಲಭೆ ಪ್ರಕರಣ: ಸಮನ್ಸ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಫೇಸ್​ಬುಕ್​ ಇಂಡಿಯಾ ಉಪಾಧ್ಯಕ್ಷ; ನಾಳೆ ಅರ್ಜಿ ವಿಚಾರಣೆ


ಅಷ್ಟೇ ಅಲ್ಲದೇ ಈ ವರದಿಯಿಂದಾಗಿ ರಾಜಕೀಯ ಬಿಕ್ಕಟ್ಟಿಗೂ ಕಾರಣವಾಗಿತ್ತು. ಅಲ್ಲದೇ ಭಾರತದಲ್ಲಿ ಫೇಸ್​ಬುಕ್​ ಸರಿಯಾದ ನಿಯಂತ್ರಣ ನೀತಿ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆ ಕೂಡ ಸಂಸ್ಥೆ ಉದ್ಯೋಗಿಗಳನ್ನು ಪ್ರಶ್ನಿಸಲು ಪ್ರೇರೇಪಿಸಿತು.


ಭಾರತದ ಅತ್ಯಂತ ಪ್ರಭಾವಶಾಲಿ ಕಾರ್ಪೋರೇಟ್​ ಲಾಬಿ ಕಾರ್ಯನಿರ್ವಾಹಕರಲ್ಲಿ ದಾಸ್​ ಕೂಡ ಒಬ್ಬರೆಂದು ಪರಿಗಣಿಸಲ್ಪಿಟ್ಟಿದ್ದರು. ವಿಶೇಷ ಎಂದರೆ ಇವರು ಕಂಪನಿ ಸೇರಿದ ಬಳಿಕ 2011ರಿಂದ ಭಾರತದಲ್ಲಿ ಫೇಸ್​ಬುಕ್​ ಏರಿಕೆ ಕಂಡಿತು. ಭಾರತದಲ್ಲಿ ನಮ್ಮ ಸಂಸ್ಥೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಅಂಕಿ ದಾಸ್​ ಪ್ರಮುಖರು ಕೂಡ ಎಂದು ಸಂಸ್ಥೆ ಅವರ ವಿದಾಯದ ವೇಳೆ ತಿಳಿಸಿದೆ.

First published: