ಬಿಹಾರದಲ್ಲಿ ಮಕ್ಕಳ ಸಾವು; ವೈದ್ಯರು, ಮಕ್ಕಳನ್ನು ಭೇಟಿ ಮಾಡಲಿರುವ ಸಿಎಂ ನಿತೀಶ್ಗೆ ಸಂಬಂಧಿಕರಿಂದ ಗೋ ಬ್ಯಾಕ್ ಘೋಷಣೆ
ಜೂನ್ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.

ಜೂನ್ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.
- News18
- Last Updated: June 18, 2019, 1:26 PM IST
ಬಿಹಾರದಲ್ಲಿ ಕಳೆದ ಎರಡು ವಾರದಿಂದ ಮೆದುಳು ಜ್ವರಕ್ಕೆ 126 ಮಕ್ಕಳು ಬಲಿಯಾಗಿದ್ದಾರೆ. ಇನ್ನು ನೂರಾರು ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಜಾಫರ್ನಗರದ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಏತನ್ಮಧ್ಯೆ ರೊಚ್ಚಿಗೆದ್ದಿರುವ ರೋಗಿಗಳ ಸಂಬಂಧಿಕರು ನಿತೀಶ್ ಕುಮಾರ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ನಿತೀಶ್ ಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಮತ್ತು ರೋಗಗ್ರಸ್ಥ ಮಕ್ಕಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಆದರೆ, ಎರಡು ವಾರಗಳಿಂದ ರೋಗ ತಡೆಗಟ್ಟವಲ್ಲಿ ನಿರ್ಲಕ್ಷ್ಯ ತೋರಿರುವ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಪ್ರತಿಭಟನಾಕಾರರು ಗೋ ಬ್ಯಾಕ್ ಎಂದು ನಿತೀಶ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಕಾಯಿಲೆಗೆ ಮಕ್ಕಳು ಬಲಿಯಾದ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಕುರಿತು ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಹಾರ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ.ಇದನ್ನು ಓದಿ: ಬಿಹಾರದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 126 ಕ್ಕೆ ಏರಿಕೆ; ಸಿಎಂ ನಿತೀಶ್ ಕುಮಾರ್ ಆಸ್ಪತ್ರೆಗೆ ಮೊದಲ ಭೇಟಿ
ಜೂನ್ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.
ಈ ಘಟನೆ ರಾಜಕೀಯವಾಗಿಯೂ ತಿರುಗಿದ್ದು, ಆರ್ಜೆಡಿ ಮತ್ತು ಕಾಂಗ್ರೆಸ್, ನಿತೀಶ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸುತ್ತಿವೆ.
ನಿತೀಶ್ ಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಮತ್ತು ರೋಗಗ್ರಸ್ಥ ಮಕ್ಕಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಆದರೆ, ಎರಡು ವಾರಗಳಿಂದ ರೋಗ ತಡೆಗಟ್ಟವಲ್ಲಿ ನಿರ್ಲಕ್ಷ್ಯ ತೋರಿರುವ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಪ್ರತಿಭಟನಾಕಾರರು ಗೋ ಬ್ಯಾಕ್ ಎಂದು ನಿತೀಶ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಸಚಿವ ಹರ್ಷವರ್ದನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವಾನ ಹೇಳಿ, ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈ ವೇಳೆ ಅವರನ್ನು ತಡೆಗಟ್ಟಿದ್ದ ಪ್ರತಿಭಟನಾಕಾರರು ಮುಜಾಫರ್ನಗರದಿಂದ ಪಾಟ್ನಾಗೆ ಹಿಂದಿರುಗುವಂತೆ ಆಗ್ರಹಿಸಿದ್ದರು. ಮತ್ತು ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಕಾಯಿಲೆಗೆ ಮಕ್ಕಳು ಬಲಿಯಾದ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಕುರಿತು ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಹಾರ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ.ಇದನ್ನು ಓದಿ: ಬಿಹಾರದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 126 ಕ್ಕೆ ಏರಿಕೆ; ಸಿಎಂ ನಿತೀಶ್ ಕುಮಾರ್ ಆಸ್ಪತ್ರೆಗೆ ಮೊದಲ ಭೇಟಿ
ಜೂನ್ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.
ಈ ಘಟನೆ ರಾಜಕೀಯವಾಗಿಯೂ ತಿರುಗಿದ್ದು, ಆರ್ಜೆಡಿ ಮತ್ತು ಕಾಂಗ್ರೆಸ್, ನಿತೀಶ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸುತ್ತಿವೆ.