ಎರಡು ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಸೋಮವಾರದಿಂದ ಪುನಾರಾರಂಭ
ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ

ಕಾಶ್ಮೀರದ ಚಿತ್ರಣ
- News18 Kannada
- Last Updated: October 12, 2019, 1:32 PM IST
ನವದೆಹಲಿ (ಅ.12): ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಮೊಬೈಲ್ ಪೋಸ್ಟ್ ಪೇಯ್ಡ್ ಸೇವೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಲಾಗುವುದು. ಸೋಮವಾರದಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಪುನರ್ಸ್ಥಾಪಿಸಲಾಗುವುದು ಎಂದು ರಾಜ್ಯ ಆಡಳಿತ ಪ್ರಕಟಿಸಿದೆ.
ರಾಜ್ಯದ ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ, ರೋಹಿತ್ ಕನ್ಸಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನ 12 ಬಳಿಕ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಮರು ಅಳವಡಿಸಲಾಗುವುದು ಎಂದಿದ್ದಾರೆ.
ಶನಿವಾರ ಈ ಸೇವೆಯನ್ನು ನೀಡುವುದಾಗಿ ನಾವು ಹೇಳಿದ್ದೇವು. ಆದರೆ ಇಂಟರ್ನೆಟ್ ಸೇವೆಯನ್ನು ಅಳವಡಿಸಲು ಸಮಯಬೇಕು ಎಂದಿದ್ದಾರೆ.ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ ಎಂದರು
ಇದನ್ನು ಓದಿ: ಫೋರ್ಬ್ಸ್ ಪಟ್ಟಿ 2019: ಸತತ 12 ಬಾರಿಗೆ ಭಾರತೀಯ ಶ್ರೀಮಂತರಲ್ಲಿ ಮುಕೇಶ್ ಅಂಬಾನಿಗೆ ಅಗ್ರಸ್ಥಾನ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿ, ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಆದಾದ ಬಳಿಕ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಂವಹನ ಸಂಪರ್ಕವನ್ನು ಅಂದಿನಿಂದಲೇ ರದ್ದುಗೊಳಿಸಲಾಗಿದೆ. ರಾಜ್ಯಕ್ಕೆ ವಿಧಿಸಿರುವ ನಿರ್ಬಂಧವನ್ನು ನಿಧಾನವಾಗಿ ತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ, ರೋಹಿತ್ ಕನ್ಸಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನ 12 ಬಳಿಕ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಮರು ಅಳವಡಿಸಲಾಗುವುದು ಎಂದಿದ್ದಾರೆ.
ಶನಿವಾರ ಈ ಸೇವೆಯನ್ನು ನೀಡುವುದಾಗಿ ನಾವು ಹೇಳಿದ್ದೇವು. ಆದರೆ ಇಂಟರ್ನೆಟ್ ಸೇವೆಯನ್ನು ಅಳವಡಿಸಲು ಸಮಯಬೇಕು ಎಂದಿದ್ದಾರೆ.ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ ಎಂದರು
ಇದನ್ನು ಓದಿ: ಫೋರ್ಬ್ಸ್ ಪಟ್ಟಿ 2019: ಸತತ 12 ಬಾರಿಗೆ ಭಾರತೀಯ ಶ್ರೀಮಂತರಲ್ಲಿ ಮುಕೇಶ್ ಅಂಬಾನಿಗೆ ಅಗ್ರಸ್ಥಾನ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿ, ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಆದಾದ ಬಳಿಕ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಂವಹನ ಸಂಪರ್ಕವನ್ನು ಅಂದಿನಿಂದಲೇ ರದ್ದುಗೊಳಿಸಲಾಗಿದೆ. ರಾಜ್ಯಕ್ಕೆ ವಿಧಿಸಿರುವ ನಿರ್ಬಂಧವನ್ನು ನಿಧಾನವಾಗಿ ತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Loading...