ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಎಪಿ ಮಾಜಿ ಶಾಸಕಿ ಅಲ್ಕಾ ಲಾಂಬಾ
ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ ಅವರು, ಪಕ್ಷ ಸೇರುವ ಕುರಿತು ಚರ್ಚೆ ನಡೆಸಿದ್ದರು.

ಅಲ್ಕಾ ಲಂಬಾ
- News18 Kannada
- Last Updated: October 12, 2019, 4:53 PM IST
ನವದೆಹಲಿ (ಅ.12) ತಮ್ಮ ಪಕ್ಷದ ಶಾಸಕರ ಹಾಗೂ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಡೆ ವಿರುದ್ಧ ಅಸಮಾಧಾನಹೊಂದಿ ಎಎಪಿ ತೊರೆದಿದ್ದ ಚಾಂದಿನಿ ಚೌಕ್ ಶಾಸಕಿ ಅಲ್ಕಾ ಲಾಂಬಾ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರ್ಪಡನೆಯಾಗಿದ್ದು, ಪಿಸಿ ಚಾಕೊ ಮತ್ತು ಇತರೆ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ ಅವರು, ಪಕ್ಷ ಸೇರುವ ಕುರಿತು ಚರ್ಚೆ ನಡೆಸಿದ್ದರು.
2020ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅವರು ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.
ಅರವಿಂದ್ ಕೇಜ್ರಿವಾಲ್ ಹಾಗೂ ಪಕ್ಷದೊಂದಿಗೆ ಬಹಿರಂಗವಾಗಿ ಮುನಿಸು ತೋರಿದ್ದ ಅವರನ್ನು ರಾಜೀನಾಮೆ ನೀಡುವಂತೆ ಪಕ್ಷದ ಸದಸ್ಯರು ತಿಳಿಸಿದ್ದರು.
ಇದನ್ನು ಓದಿ: ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್; ಪಿಎ ರಮೇಶ್ ಸಾವಿಗೆ ಪರಮೇಶ್ವರ್ ನೋವು
1984 ರ ಸಿಖ್ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ವಿಫಲರಾದ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿದ್ದು ಸರಿಯಲ್ಲ, ಅದನ್ನು ವಾಪಸ್ಸು ಪಡೆಯಬೇಕು ಎಂಬ ನಿರ್ಣಯವನ್ನು ಎಎಪಿ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಈ ನಿರ್ಣಯಕದ ವಿರುದ್ಧ ಮಾತನಾಡಿದ ಲಾಂಬಾ 'ರಾಜೀವ್ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ಸು ಪಡೆಯುವ ವಿಧಾನಸಭೆಯ ನಿರ್ಣಯವನ್ನು ನಾನು ಒಪ್ಪುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಕೇಜ್ರಿವಾಲ್ ಹಾಗೂ ಲಾಂಬಾ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರ್ಪಡನೆಯಾಗಿದ್ದು, ಪಿಸಿ ಚಾಕೊ ಮತ್ತು ಇತರೆ ನಾಯಕರು ಈ ವೇಳೆ ಉಪಸ್ಥಿತರಿದ್ದರು.
— Alka Lamba - अलका लाम्बा🇮🇳 (@LambaAlka) October 12, 2019
2020ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅವರು ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.
ಅರವಿಂದ್ ಕೇಜ್ರಿವಾಲ್ ಹಾಗೂ ಪಕ್ಷದೊಂದಿಗೆ ಬಹಿರಂಗವಾಗಿ ಮುನಿಸು ತೋರಿದ್ದ ಅವರನ್ನು ರಾಜೀನಾಮೆ ನೀಡುವಂತೆ ಪಕ್ಷದ ಸದಸ್ಯರು ತಿಳಿಸಿದ್ದರು.
ಇದನ್ನು ಓದಿ: ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್; ಪಿಎ ರಮೇಶ್ ಸಾವಿಗೆ ಪರಮೇಶ್ವರ್ ನೋವು
1984 ರ ಸಿಖ್ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ವಿಫಲರಾದ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿದ್ದು ಸರಿಯಲ್ಲ, ಅದನ್ನು ವಾಪಸ್ಸು ಪಡೆಯಬೇಕು ಎಂಬ ನಿರ್ಣಯವನ್ನು ಎಎಪಿ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಈ ನಿರ್ಣಯಕದ ವಿರುದ್ಧ ಮಾತನಾಡಿದ ಲಾಂಬಾ 'ರಾಜೀವ್ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ಸು ಪಡೆಯುವ ವಿಧಾನಸಭೆಯ ನಿರ್ಣಯವನ್ನು ನಾನು ಒಪ್ಪುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಕೇಜ್ರಿವಾಲ್ ಹಾಗೂ ಲಾಂಬಾ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು