ಹೋಟೆಲ್ ಯೋಜನೆ ಬಿಟ್ಟು, ಬಂಗಲೆ ನಿರ್ಮಾಣಕ್ಕೆ ಮುಂದಾದ ಉತ್ತರ ಪ್ರದೇಶ ಮಾಜಿ ಸಿಎಂ
Updated:September 1, 2018, 12:48 PM IST
Updated: September 1, 2018, 12:48 PM IST
ನ್ಯೂಸ್ 18 ಕನ್ನಡ
ಲಕ್ನೋ (ಸೆ.01): ಪ್ರತಿಷ್ಠಿತ ವಿಕ್ರಮಾದಿತ್ಯ ಮಾರ್ಗದಲ್ಲಿ ಹೋಟೆಲ್ ನಿರ್ಮಾಣಕ್ಕೆ ಮುಂದಾಗಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯೋಜನೆಗೆ ಅಲಹಾಬಾದ್ ನ್ಯಾಯಾಲಯ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಕೈ ಬಿಟ್ಟು ಅಖಿಲೇಶ್ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಅಖಿಲೇಶ್ ದಂಪತಿ 2005ರಲ್ಲಿ ವಿಕ್ರಮಾದಿತ್ಯ ಮಾರ್ಗದಲ್ಲಿ 39 ಲಕ್ಷ ವೆಚ್ಚದಲ್ಲಿ 23,872 ಚದರ ಅಡಿಯ ನಿವೇಶನ ಖರೀದಿಸಿದ್ದರು. ಈ ನಿವೇಶನ ಇಂದು ಕೋಟ್ಯಾಂತರ ರೂ ಬೆಲೆ ಬಾಳುತ್ತಿದ್ದು, ಇಲ್ಲಿ ಹೆರಿಟೇಜ್ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು.
ಆದರೆ ಲಕ್ನೋ ನ್ಯಾಯಾಲಯ ಇಲ್ಲಿ ಹೋಟೆಲ್ ನಿರ್ಮಾಣಕ್ಕೆ ತಡೆ ನೀಡಿದ ಹಿನ್ನಲೆ ಈಗ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೋರ್ಟ್ಗೆ ಈ ಬಗ್ಗೆ ಹೇಳಿಕೆ ನೀಡಿರುವ ಡಿಂಪಲ್ ಯಾದವ್ ಹೋಟೆಲ್ ಯೋಜನೆ ಕೈ ಬಿಟ್ಟು ಬಂಗಲೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.ಬಂಗಲೆ ನಿರ್ಮಾಣ ಯೋಜನೆ ಒಪ್ಪಿಗೆ ಪಡೆಯಲು ಈಗಾಗಲೇ ಡಿಂಪಲ್ ಲಕ್ನೋ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಈ ಕುರಿತು ರಕ್ಷಣಾದಳದ ಡಿಜಿ, ಉತ್ತರ ಪ್ರದೇಶ ಸರ್ಕಾರದ ವಸತಿ ಅಧಿಕಾರಿ, ಜಲ ಸಂಸ್ಥಾನ ಅಧಿಕಾರಿಯ ಅನುಮತಿ ಕೋರಿದ್ದಾರೆ.
ಭಾರೀ ಭದ್ರತಾ ವಲಯದಲ್ಲಿ ಈ ನಿವೇಶನ ಬರುವ ಹಿನ್ನಲೆ ಏಳು ಮೀಟರ್ ಗಿಂತ ಎತ್ತರದಲ್ಲಿ ಕಟ್ಟಡವನ್ನು ಕಟ್ಟಬಾರದು ಎಂದು ಅಧಿಕಾರಿಗಳು ತಿಳಿಸಿದ್ದು, ದಂಪತಿ ನಿರಾಪೇಕ್ಷಣಾ ಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಂಗಲೆ ಸಮಾಜವಾದಿ ಪಕ್ಷದ ಮುಖ್ಯ ಕಚೇರಿ ಸಮೀಪದಲ್ಲಿಯೇ ನಿರ್ಮಾಣವಾಗಲಿದೆ.
ಲಕ್ನೋ (ಸೆ.01): ಪ್ರತಿಷ್ಠಿತ ವಿಕ್ರಮಾದಿತ್ಯ ಮಾರ್ಗದಲ್ಲಿ ಹೋಟೆಲ್ ನಿರ್ಮಾಣಕ್ಕೆ ಮುಂದಾಗಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯೋಜನೆಗೆ ಅಲಹಾಬಾದ್ ನ್ಯಾಯಾಲಯ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಕೈ ಬಿಟ್ಟು ಅಖಿಲೇಶ್ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಅಖಿಲೇಶ್ ದಂಪತಿ 2005ರಲ್ಲಿ ವಿಕ್ರಮಾದಿತ್ಯ ಮಾರ್ಗದಲ್ಲಿ 39 ಲಕ್ಷ ವೆಚ್ಚದಲ್ಲಿ 23,872 ಚದರ ಅಡಿಯ ನಿವೇಶನ ಖರೀದಿಸಿದ್ದರು. ಈ ನಿವೇಶನ ಇಂದು ಕೋಟ್ಯಾಂತರ ರೂ ಬೆಲೆ ಬಾಳುತ್ತಿದ್ದು, ಇಲ್ಲಿ ಹೆರಿಟೇಜ್ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು.
ಆದರೆ ಲಕ್ನೋ ನ್ಯಾಯಾಲಯ ಇಲ್ಲಿ ಹೋಟೆಲ್ ನಿರ್ಮಾಣಕ್ಕೆ ತಡೆ ನೀಡಿದ ಹಿನ್ನಲೆ ಈಗ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೋರ್ಟ್ಗೆ ಈ ಬಗ್ಗೆ ಹೇಳಿಕೆ ನೀಡಿರುವ ಡಿಂಪಲ್ ಯಾದವ್ ಹೋಟೆಲ್ ಯೋಜನೆ ಕೈ ಬಿಟ್ಟು ಬಂಗಲೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.ಬಂಗಲೆ ನಿರ್ಮಾಣ ಯೋಜನೆ ಒಪ್ಪಿಗೆ ಪಡೆಯಲು ಈಗಾಗಲೇ ಡಿಂಪಲ್ ಲಕ್ನೋ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಈ ಕುರಿತು ರಕ್ಷಣಾದಳದ ಡಿಜಿ, ಉತ್ತರ ಪ್ರದೇಶ ಸರ್ಕಾರದ ವಸತಿ ಅಧಿಕಾರಿ, ಜಲ ಸಂಸ್ಥಾನ ಅಧಿಕಾರಿಯ ಅನುಮತಿ ಕೋರಿದ್ದಾರೆ.
ಭಾರೀ ಭದ್ರತಾ ವಲಯದಲ್ಲಿ ಈ ನಿವೇಶನ ಬರುವ ಹಿನ್ನಲೆ ಏಳು ಮೀಟರ್ ಗಿಂತ ಎತ್ತರದಲ್ಲಿ ಕಟ್ಟಡವನ್ನು ಕಟ್ಟಬಾರದು ಎಂದು ಅಧಿಕಾರಿಗಳು ತಿಳಿಸಿದ್ದು, ದಂಪತಿ ನಿರಾಪೇಕ್ಷಣಾ ಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಂಗಲೆ ಸಮಾಜವಾದಿ ಪಕ್ಷದ ಮುಖ್ಯ ಕಚೇರಿ ಸಮೀಪದಲ್ಲಿಯೇ ನಿರ್ಮಾಣವಾಗಲಿದೆ.
Loading...