ಗುವಾಹಟಿ (ಸೆ.24): ಕೊರೋನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ದೇಶ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ ಅಸ್ಸಾಂನಲ್ಲಿ ಮಾರಾಣಾಂತಿಕ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ. ಹಂದಿ ಜ್ವರ ಹರಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಹಂದಿಗಳಲ್ಲಿ ಈ ಜ್ವರ ಕಾಣಿಸಿಕೊಂಡಿರುವ ಹಿನ್ನಲೆ ಸೋಂಕಿತ ಪ್ರದೇಶದ 12 ಸಾವಿರ ಹಂದಿಗಳನ್ನು ಕೊಲ್ಲಲು ಸೂಚನೆ ನೀಡಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಈ ಆದೇಶ ನೀಡಿದ್ದು, ಹಂದಿ ಮಾಲೀಕರಿಗೆ ಪರಿಹಾರ ಡುವ ಭರವಸೆಯನ್ನು ಕೂಡ ನೀಡಿದ್ದಾರೆ. ಇಲ್ಲಿಯವರೆಗೆ 18 ಸಾವಿರ ಹಂದಿಗಳು ಈ ಸೋಂಕಿನಿಂದ ಮೃತಪಟ್ಟಿವೆ. ರಾಜ್ಯದ 14 ಜಿಲ್ಲೆಯಲ್ಲಿ ಈ ಸೋಂಕು ಹನ್ನಿದೆ ಎಂದು ಪಶು ಸಂಗೋಪನಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಯಂತೆ ತಜ್ಞರ ಅಭಿಪ್ರಾಯ ಪಡೆದು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದಸರೆಯ ದುರ್ಗಾ ಪೂಜೆಗೂ ಮುನ್ನ ಜಿಲ್ಲೆಗಳಲ್ಲಿ ಸೋಂಕಿಗೆ ಒಳಗಾಗಿರುವ ಹಂದಿಗಳನ್ನು ಕೊಲ್ಲಬೇಕು ಎಂದು ಸೂಚಿಸಿದ್ದಾರೆ.
ಸದ್ಯ ಮುಂದಿನ ದಿನಗಳಲ್ಲಿ ಸೋಂಕು ಕಂಡು ಬಂದಿರುವ 12 ಸಾವಿರ ಹಂದಿಗಳಲ್ಲಿ ಕೊಲ್ಲಬೇಕಿದೆ. ಈ ಕಾರ್ಯಾಚಾರಣೆಯಿಂದ ಹಂದಿ ಸಾಗಾಣೆ ಮಾಲೀಕರು ನಷ್ಟ ಅನುಭವಿಸಲಿದ್ದಾರೆ. ಇದಕ್ಕಾಗಿ ಅವರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಇದನ್ನು ಓದಿ: ಎರಡನೇ ಹಂತದ ಕೊರೋನಾ ಸುಳಿಯಲ್ಲಿ ದೆಹಲಿ; ಅರವಿಂದ್ ಕೇಜ್ರಿವಾಲ್
ತಕ್ಷಣದಿಂದಲೇ ಈ ಕಾರ್ಯಾಚಾರಣೆ ಮಾಡುವಂತೆ ಸೂಚನೆ ನೀಡಲಾಗಿದೆ. 14 ಜಿಲ್ಲೆಗಳಲ್ಲಿ 30 ಕೇಂದ್ರದ 1 ಕಿ.ಮೀ ಪರಿಧಿಯೊಳಗೆ ಈ ಕಾರ್ಯಾಚಾರಣೆ ನಡೆಸಲಾಗುವುದು.
ಈಗಾಗಲೇ ಈ ಕಾರ್ಯಾಚಾರಣೆಯಲ್ಲಿ 18 ಸಾವಿರ ಹಂದಿಗಳನ್ನು ಕೊಲ್ಲಲ್ಲಾಗಿದೆ. ಈ ಹಂದಿ ಸಾಗಾಣೆ ಮಾಡುತ್ತಿದ್ದ ಮಾಲೀಕರ ಬ್ಯಾಂಕ್ ಖಾತೆಗೆ ಹಣ ಹಾಕುವ ಪ್ರಸ್ತಾವದ ಕುರಿತು ಈಗಾಗಲೇ ಸರ್ಕಾರ ಮನವಿ ಸಲ್ಲಿಸಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ