• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Afghanistan Crisis| ಸೈನಿಕರ ಮನಸ್ಥಿತಿ ಬದಲಾಗಿಲ್ಲ, ಮಹಿಳೆಯರು ಮನೆಯಿಂದ ಹೊರ ಬರುವುದು ಸುರಕ್ಷಿತವಲ್ಲ; ತಾಲಿಬಾನ್ ವಕ್ತಾರ

Afghanistan Crisis| ಸೈನಿಕರ ಮನಸ್ಥಿತಿ ಬದಲಾಗಿಲ್ಲ, ಮಹಿಳೆಯರು ಮನೆಯಿಂದ ಹೊರ ಬರುವುದು ಸುರಕ್ಷಿತವಲ್ಲ; ತಾಲಿಬಾನ್ ವಕ್ತಾರ

ಅಫ್ಘನ್​ ಮಹಿಳೆಯರು.

ಅಫ್ಘನ್​ ಮಹಿಳೆಯರು.

1996 ಮತ್ತು 2001 ರ ನಡುವೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಅವರನ್ನು ಮನೆಯಿಂದ ಹೊರಹೋಗದಂತೆ ತಡೆಹಿಡಿದಿತ್ತು. ಕಾಲುಗಳು ಕೂಡ ಕಾಣದಂತೆ ಸಂಪೂರ್ಣ ದೇಹವನ್ನು ಬುರ್ಖಾ ಹಾಕುವ ಮೂಲಕ ಮುಚ್ಚುವಂತೆ ಒತ್ತಾಯಿಸಲಾಗಿತ್ತು.

  • Share this:

ಕಾಬೂಲ್​ (ಆಗಸ್ಟ್​ 26); ಉಗ್ರ ತಾಲಿಬಾನ್ (Taliban) ಸಂಘಟನೆ ಅಫ್ಘಾನಿಸ್ತಾನ ವನ್ನು (Afghanistan) ಆಕ್ರಮಿಸಿ ತನ್ನ ಅಧಿಕಾರವನ್ನು ಸ್ಥಾಪಿಸಿದೆ. ಈ ಮೂಲಕ 20 ವರ್ಷಗಳ ಪ್ರಜಾಪ್ರಭುತ್ವ (Democracy) ಕೊನೆಗೂ ಅಂತ್ಯವಾಗಿದ್ದು, ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ವರದಿಯಾಗುತ್ತಲೇ ಇದೆ. ಕಳೆದ ವಾರ ಅಫ್ಘಾನ್​ ಸ್ವಾತಂತ್ರ್ಯ ದಿನಾಚರಣೆಯ ದಿನ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು, ಇದೀಗ ಮನೆ ಮನೆಗ ನುಗ್ಗಿ ಅಡಿಗೆ ಮಾಡಿಕೊಂಡುವಂತೆ ಜನರನ್ನು ಹಿಂಸಿಸುತ್ತಿದ್ದಾರೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ ಎಂಬ ವರದಿ ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಅಫ್ಘನ್​ ಮಹಿಳೆಯರಿಗೆ ಎಚ್ಚರಿಕೆ ನೀಡಿರುವ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ (Zabiullah Mujahid), "ಈಗಿನ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳು ತ್ತೇವೆ. ಹೀಗಾಗಿ ತಾಲಿಬಾನ್ ಸರ್ಕಾರ, ಅಫ್ಘಾನ್ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ" ಎಂದು ತಿಳಿಸಿದ್ದಾರೆ.


"ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕೆಲಸಕ್ಕೆ ಹೋಗಬಾರದು, ನಮ್ಮ ಸೈನಿಕರ ಗುಂಪು ಇನ್ನು ಹಳೆಯ ಮನಸ್ಥಿತಿಯಲ್ಲಿಯೇ ಇದೆ. ಹೊಸ ಬದಲಾವಣೆ ಬರಲು ಸಮಯ ಬೇಕಾಗಿದೆ. ಹೀಗಾಗಿ ಮಹಿಳೆಯರು ಮನೆಯಲ್ಲಿಯೇ ಇರುವ ಕ್ರಮವು ಅಗತ್ಯವಾಗಿದೆ. ಏಕೆಂದರೆ ತಾಲಿಬಾನ್ ಬದಲಾಗುತ್ತಲೇ ಇದೆ ಮತ್ತು ಅವರಿಗೆ ಮಹಿಳೆಯರಿಗೆ ಗೌರವ ಕೊಡುವ ತರಬೇತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ತರಬೇತಿಯನ್ನು ನೀಡುವ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಲಾಗುವುದು" ಎಂದು ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.


1996 ಮತ್ತು 2001 ರ ನಡುವೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಅವರನ್ನು ಮನೆಯಿಂದ ಹೊರಹೋಗದಂತೆ ತಡೆಹಿಡಿದಿತ್ತು. ಕಾಲುಗಳು ಕೂಡ ಕಾಣದಂತೆ ಸಂಪೂರ್ಣ ದೇಹವನ್ನು ಬುರ್ಖಾ ಹಾಕುವ ಮೂಲಕ ಮುಚ್ಚುವಂತೆ ಒತ್ತಾಯಿಸಲಾಗಿತ್ತು. ಅಲ್ಲದೆ, ನಿಯಮ ಮೀರಿದ ಮಹಿಳೆಯರಿಗೆ ಶಿಕ್ಷೆ ನೀಡಿದ ನಿದರ್ಶನಗಳೂ ಸಾಕಷ್ಟಿವೆ.


ಇದನ್ನೂ ಓದಿ: Delhi University Controversy| ವಿವಾದದಲ್ಲಿ ದೆಹಲಿ ವಿವಿ; ಮಹಾಶ್ವೇತಾದೇವಿ ಸೇರಿದಂತೆ ಪ್ರಮುಖ ದಲಿತ ಲೇಖಕರ ಪಠ್ಯ ಹೊರಕ್ಕೆ!


ಈ ನಡುವೆ ಈ ಬಾರಿ ತಾಲಿಬಾನ್ ತನ್ನ ಹೊಸ ಯುಗವು ಹೆಚ್ಚು ಆಶಾದಾಯಕವಾಗಿರುತ್ತದೆ ಎಂದು ಭರವಸೆ ನೀಡಿತ್ತು. ಆದರೆ, ತಾಲಿಬಾನ್ ನಾಯಕರು ಮಹಿಳಾ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಭರವಸೆ ನೀಡಲು ನಿರಾಕರಿಸಿದ್ದಾರೆ. ಈಗಾಗಲೇ ಅನೇಕ ಮಹಿಳೆಯರು ಹಿಂಸೆಯನ್ನು ಎದುರಿಸಿದ್ದಾರೆ.


ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನವನ್ನು ತೊರೆದ ಒಟ್ಟು ಜನಸಂಖ್ಯೆ 19,000. ಇದರಲ್ಲಿ 11,200 ಜನರು 42 ಯುಎಸ್ ಮಿಲಿಟರಿ ವಿಮಾನಗಳಲ್ಲಿ ಸ್ಥಳಾಂತರಗೊಂಡಿದ್ದಾರೆ. ಇತರ 7,800 ಜನರನ್ನು ಒಕ್ಕೂಟದ ಪಾಲುದಾರರಿಂದ ಸ್ಥಳಾಂತರಿಸಲಾಗಿದೆ ಎಂದು ಬುಧವಾರ ಘೋಷಿಸಿಸಲಾಗಿದೆ.


ಇದನ್ನೂ ಓದಿ: Basavaraja Bommai| ಬೊಮ್ಮಾಯಿ-ಕೇಂದ್ರ ಸಚಿವರ ಭೇಟಿ; ಕೃಷ್ಣ-ಮೇಕೆದಾಟು ಸೇರಿದಂತೆ ಹಲವು ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ಚರ್ಚೆ!


ಇನ್ನು, ಅಫ್ಘಾನ್‌ನಿಂದ ಭಾರತಕ್ಕೆ ಬಂದಿರುವ ನೂರಾರು ಅಫ್ಘಾನಿಸ್ತಾನದ ಪ್ರಜೆಗಳು ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಬುಧವಾರ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ನಿರಾಶ್ರಿತರ ಕಾರ್ಡ್‌ಗಾಗಿ ಅಫ್ಘಾನ್ ನಿರಾಶ್ರಿತರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನಿರಾಶ್ರಿತರ ಕಾರ್ಡುಗಳು ಸಿಗದ ಹಿನ್ನೆಲೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು