• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime: 4 ವರ್ಷದ ಮರಿಮೊಮ್ಮಗನನ್ನೇ ಕೊಂದ ಮುತ್ತಾತ! ಆಸ್ತಿ ಕೊಡ್ಬೇಕಾಗುತ್ತೆ ಅಂತ ಹತ್ಯೆಗೈದನಂತೆ ಪಾಪಿ!

Crime: 4 ವರ್ಷದ ಮರಿಮೊಮ್ಮಗನನ್ನೇ ಕೊಂದ ಮುತ್ತಾತ! ಆಸ್ತಿ ಕೊಡ್ಬೇಕಾಗುತ್ತೆ ಅಂತ ಹತ್ಯೆಗೈದನಂತೆ ಪಾಪಿ!

ಮರಿಮೊಮ್ಮಗನನ್ನು ಕೊಂದ ಮುತ್ತಾತ

ಮರಿಮೊಮ್ಮಗನನ್ನು ಕೊಂದ ಮುತ್ತಾತ

ದೊಡ್ಡವನಾದ ಮೇಲೆ ಆಸ್ತಿ ಕೇಳಬಹುದೆಂದು 80 ವರ್ಷದ ಶೋಭರಾಮ್ ಎಂಬಾತ ತನ್ನ 4 ವರ್ಷದ ಮರಿಮೊಮ್ಮಗನನ್ನು ನಿರ್ಧಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾನೆ.

  • Share this:

ಇಂದೋರ್​: ಆಸ್ತಿಗೋಸ್ಕರ (Property) ತಂದೆಯನ್ನು, ಅಜ್ಜನನ್ನು, ಸಹೋದರರನ್ನು ಕೊಲೆ (Murder) ಮಾಡಿರುವ ಹಲವು ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ 80 ವರ್ಷದ ತಾತ(Grandfather) ಆಸ್ತಿ ವಿಷಯವಾಗಿ ಏನೂ ಅರಿಯದ ಮುಗ್ಧ ಕಂದಮ್ಮನನ್ನು ಕೊಂದಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ (Madhya Pradesh) ಇಂದೋರ್​ನಲ್ಲಿ ನಡೆದಿದೆ. 80 ವರ್ಷದ ಶೋಭರಾಮ್ ಎಂಬಾತ ತನ್ನ 4 ವರ್ಷದ ಮರಿಮೊಮ್ಮಗನನ್ನು ನಿರ್ಧಾಕ್ಷಿಣ್ಯವಾಗಿ ಕೊಂದಿದ್ದಾನೆ. ಮೊದಲು ಇದು ಸಹಜ ಸಾವು ಎನ್ನಲಾಗಿತ್ತು, ಆದರೆ ಮರೋಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.


ಏಪ್ರಿಲ್ 8ರಂದು ಕೊಲೆ


ಕಳೆದ ತಿಂಗಳು ಏಪ್ರಿಲ್​ 8ರಂದು 4 ವರ್ಷದ ಬಾಲಕ ಶ್ರೇಯಾಂಶ್​ ಎಂಬ ಬಾಲಕ ಮೃತಪಟ್ಟಿದ್ದರ ಬಗ್ಗೆ ವರದಿಯಾಗಿತ್ತು. ನಂತರ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಈ ವರದಿ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು.


ಇದನ್ನೂ ಓದಿ: Husband and Wife: ಹೆಂಡ್ತಿ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದ ವರ! 25 ಲಕ್ಷ ಹಣ, ಕಾರು, ಚಿನ್ನ ಕೊಟ್ಟರೂ ವರದಕ್ಷಿಣೆ ಕಿರುಕುಳ!


ಕೌಟುಂಬಿಕ ಕಲಹ ಕಾರಣ


ಮರಣೋತ್ತರ ಪರೀಕ್ಷೆಯ ವರದಿಯ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಶ್ರೇಯಾಂಶ್​ ತಾಯಿ ನೀತು ಕಳೆದ ಎರಡು ವರ್ಷಗಳಿಂದ ಗಂಡನನ್ನು ಬಿಟ್ಟು ಮಗುವಿನೊಂದಿಗೆ ತವರಿನಲ್ಲಿದ್ದರು. ಆದರೆ ಮಹಿಳೆಯ ಕುಟುಂಬಸ್ಥರು ಮತ್ತೊಂದು ಮದುವೆ ಮಾಡುವ ಆಲೋಚನೆಯಲ್ಲಿದ್ದರು. ಆದರೆ ಮದುವೆ ನಡೆದಿರಲಿಲ್ಲ.




ಆಸ್ತಿಯಲ್ಲಿ ಪಾಲು ಹೋಗುತ್ತೆ ಅಂತಾ ಕೊಲೆ


ನೀತು ತವರಿನಲ್ಲೇ ಇದ್ದಿದ್ದರಿಂದ ಮಗ ಶ್ರೇಯಾಂಶ್​ ಅಜ್ಜನ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂಬ ಮಾತು ಬಂದಿದೆ. ಹಾಗಾಗಿ ಬಾಲಕ ಬೆಳೆದು ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಅಜ್ಜ ಶೋಭರಾಮ್​ ಭಾವಿಸಿದ್ದಾನೆ. ಹಾಗಾಗಿ ಆರೋಪಿ ಮಗುವಿನಿಂದ ಆಸ್ತಿ ಕಳೆದುಕೊಳ್ಳಬಹುದೆಂದು ಭಾವಿಸಿ, ಆತನನ್ನು ಮುಗಿಸಿದರೆ ಇದಕ್ಕೊಂದು ಅಂತ್ಯ ಹಾಡಬಹುದು ಎಂದು ಭಾವಿಸಿದ್ದಾನೆ.


ಇದನ್ನೂ ಓದಿ: Tragedy: ಹುಟ್ಟು ಹಬ್ಬದ ದಿನವೇ 16 ವರ್ಷದ ಬಾಲಕನ ದುರಂತ ಅಂತ್ಯ! ಶವದ ಮುಂದೆ ಕೇಕ್ ಕಟ್​ ಮಾಡಿದ ಪೋಷಕರು!


ಉಸಿರುಗಟ್ಟಿಸಿ ಕೊಲೆ


ಒಂದು ದಿನ ಆರೋಪಿ ಶೋಭರಾಮ್​ ಜೊತೆ ಮರಿ ಮೊಮ್ಮಗ ಶ್ರೇಯಾಂಶ್ ಮಲಗಿದ್ದ, ಮಧ್ಯರಾತ್ರಿ ಶ್ರೇಯಾಂಶ್ ಶೌಚಾಲಯಕ್ಕೆ ಹೋಗಬೇಕೆಂದು ಎದ್ದಿದ್ದಾನೆ. ಈ ವೇಳೆ ಶೋಭರಾಮ್​ ಬೆಡ್​ಶೀಟ್‌ನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೌಟುಂಬಿಕ ವಿಷಯವಾಗಿದ್ದರಿಂದ ಯಾರೂ ಪೊಲೀಸರಿಗೆ ತಿಳಿಸಲಿಲ್ಲ, ಜೊತೆ ಯಾವುದೇ ಅನುಮಾನ ಕೂಡ ವ್ಯಕ್ತವಾಗಲಿಲ್ಲ. ಕುಟುಂಬದ ಉಳಿದ ಸದಸ್ಯರು ಶ್ರೇಯಾಂಶ್‌ನ ಸಾವನ್ನು ಸಹಜ ಸಾವು ಎಂದು ಒಪ್ಪಿಕೊಂಡಿದ್ದರು " ಎಂದು ಅಧಿಕಾರಿ ಹೇಳಿದ್ದಾರೆ.


ಆಸ್ಪತ್ರೆಯಿಂದ ಮಾಹಿತಿ


ಪೊಲೀಸರಿಗೆ ಆಸ್ಪತ್ರೆಯಿಂದ ಈ ವಿಷಯದ ಬಗ್ಗೆ ಮಾಹಿತಿ ಬಂದಿದ್ದು, ನಂತರ ಪೊಲೀಸರು ಮರಣವನ್ನು ಅನುಮಾನಾಸ್ಪದ ಎಂದು ಪರಿಗಣಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಎಂದು ಎಸ್ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅದರ ನಂತರ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನೀತು ಸೇರಿದಂತೆ ಆಕೆಯ ಪೋಷಕರು ಮತ್ತು ಅತ್ತೆಯ ಸಂಬಂಧಿಕರೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಜನರನ್ನು ಪ್ರಶ್ನಿಸಿದ್ದಾರೆ.

top videos


    ಬಾಲಕ ಸಾವನ್ನಪ್ಪಿದ ರಾತ್ರಿ ಅಜ್ಜ ಶೋಭರಾಮ್​ ಜೊತೆ ಮಲಗಿದ್ದನೆಂದು ತಿಳಿದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್​ 302ರ ಪ್ರಕಾರ ಆರೋಪಿ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.

    First published: