ಉತ್ತರಾಖಂಡದಲ್ಲಿ ಹಿಮಪಾತಕ್ಕೆ ಎಂಟು ಮಂದಿ ಬಲಿ, 6 ಜನರ ಸ್ಥಿತಿ ಗಂಭೀರ

ಹಿಮದಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ.

ಹಿಮದಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ.

ವಿವಿಧೆಡೆ ಭೂ ಕುಸಿತದಿಂದಾಗಿ ಐದು ಸ್ಥಳಗಳಲ್ಲಿ ರಸ್ತೆ ಪ್ರವೇಶ ಕಡಿತಗೊಳಿಸಲಾಗಿದೆ. ಜೋಶಿಮಠದ ಬಿಆರ್‌ಟಿಎಫ್ ತಂಡಗಳು ಕಳೆದ ಸಂಜೆಯಿಂದ ಭಪ್ಕುಂಡ್‌ನಿಂದ ಸುಮ್ನಾವರೆಗಿನ ರಸ್ತೆ ಮೇಲೆ ಬಿದ್ದಿರುವ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವಲಯವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಇನ್ನೂ 6 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಮುಂದೆ ಓದಿ ...
  • Share this:

ಉತ್ತರಾಖಂಡದ ಸುಮ್ನಾಕ್ಕಿಂತ 4 ಕಿ.ಮೀ ದೂರದಲ್ಲಿರುವ ಸುಮ್ನಾ-ರಿಮ್ಖಿಮ್ ರಸ್ತೆಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹಿಮಪಾತವಾಗಿದ್ದು, ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದೆ. ಈವರೆಗೆ 384 ಜನರನ್ನು ರಕ್ಷಿಸಲಾಗಿದೆ.


ಘಟನಾ ಸ್ಥಳವು ಜೋಶಿಮಠ - ಮಲಾರಿ- ಗಿರ್ತಿಡೋಬ್ಲಾ - ಸುಮ್ನಾ- ರಿಮ್ಖಿಮ್ ಸಮೀಪದಲ್ಲಿದೆ. ಬಿಆರ್‌ಒ ಬೇರ್ಪಡುವಿಕೆ ಜೊತೆಗೆ, ಎರಡು ಕಾರ್ಮಿಕ ಶಿಬಿರಗಳು ಮತ್ತು ಭಾರತೀಯ ಸೇನಾ ಶಿಬಿರವು ಸುಮ್ನಾದಿಂದ ಹತ್ತಿರದಲ್ಲಿದೆ (ಬಿಆರ್‌ಒ ಸುಮ್ನಾ ಡೆಟ್‌ಗಿಂತ ಸರಿಸುಮಾರು 1 ಕಿ.ಮೀ ದೂರದಲ್ಲಿದೆ).


ಇದನ್ನು ಓದಿ: ನಾನು ಅನುಭವಿಸಿದ್ದು ಇನ್ಯಾರಿಗೂ ಬೇಡ.. ಉದ್ಯಮಿಯಿಂದ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್!


ಮಾಹಿತಿಯ ಪ್ರಕಾರ, ಹಿಮಪಾತವಾದ ತಕ್ಷಣವೇ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಎರಡೂ ಶಿಬಿರಗಳಲ್ಲಿ ಇತರ ಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರೆದಿದೆ, ಆದರೆ, ಈವರೆಗೆ ಎಂಟು ಶವಗಳನ್ನು ಹೊರಗೆ ತೆಗೆಯಲಾಗಿದೆ.


ವಿವಿಧೆಡೆ ಭೂ ಕುಸಿತದಿಂದಾಗಿ ಐದು ಸ್ಥಳಗಳಲ್ಲಿ ರಸ್ತೆ ಪ್ರವೇಶ ಕಡಿತಗೊಳಿಸಲಾಗಿದೆ. ಜೋಶಿಮಠದ ಬಿಆರ್‌ಟಿಎಫ್ ತಂಡಗಳು ಕಳೆದ ಸಂಜೆಯಿಂದ ಭಪ್ಕುಂಡ್‌ನಿಂದ ಸುಮ್ನಾವರೆಗಿನ ರಸ್ತೆ ಮೇಲೆ ಬಿದ್ದಿರುವ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವಲಯವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಇನ್ನೂ 6 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.

top videos
    First published: