ಪಾಟ್ನಾ(ಜೂ.11): ಬಿಹಾರದಲ್ಲಿ (Bihar) ಶುಕ್ರವಾರ ತಡರಾತ್ರಿ ವಾಹನವೊಂದು (Vehicle) ಹೊಂಡಕ್ಕೆ (Pond) ಬಿದ್ದು ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಪುರ್ನಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಎಎನ್ಐ ವರದಿ ಮಾಡಿದೆ. 8 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದಾಗ ಅವರು ತಾರಾಬಾಡಿಯಿಂದ ಕಿಶನ್ಗಂಜ್ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಕಾರಿನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರನ್ನು ಕೆರೆಯಿಂದ ರಕ್ಷಿಸಲಾಗಿದ್ದು, ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮದುವೆಯಿಂದ ಹಿಂದಿರುಗುತ್ತಿದ್ದ ಜನ
ವರದಿಗಳ ಪ್ರಕಾರ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಕಿಶನ್ಗಂಜ್ ನಿವಾಸಿಗಳಾಗಿದ್ದು, ತಾರಾಬಾಡಿಯಿಂದ ಹಿಂತಿರುಗುತ್ತಿದ್ದರು. ಮದುವೆ ಕಾರ್ಯಕ್ರಮಕ್ಕೆಂದು ಅಲ್ಲಿಗೆ ಹೋಗಿ ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಕಾರು ಕೆರೆಗೆ ಬಿದ್ದಿದ್ದರಿಂದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆಂಬ್ಯುಲೆನ್ಸ್ಗೆ ಕರೆ ಮಾಡಿ ಮೃತರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದಾರೆ.
Bihar | Eight people died in Kanjia village of Purnia district late last night after their vehicle fell into a pond.
Police say, "8 bodies recovered. They were coming from Tarabadi & going to Kishanganj when it happened. 2 people safely rescued. Bodies being sent for postmortem" pic.twitter.com/qSbYIbFn7j
— ANI (@ANI) June 11, 2022
ಕರ್ನಾಟಕದಲ್ಲಿಯೂ ಕಾರು ನಾಲೆಗೆ ಬಿದ್ದು ನಡೆದಿತ್ತು ಅಪಘಾತ
ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಬೆಳಗ್ಗಿನ ಜಾವ ಅಪಘಾತ ನಡೆದಿತ್ತು. ಗಂಡ ಹೆಂಡತಿ ಪ್ರಯಾಣಿಸುತ್ತಿದ್ದ ಕಾರೊಂದು ತುಂಗಾ ನಾಲೆಗೆ ಬಿದ್ದಿತ್ತು. ಪರಿಣಾಮ ಹೆಂಡತಿ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಳು. ಅಪಘಾತದಲ್ಲಿ ಗಂಡ ಗಾಯಗೊಂಡು, ಆಸ್ಪತ್ರೆ ಸೇರಿದ್ದ. ಮೃತರನ್ನು 28 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರ ಪತಿ ಚೇತನ್ ಎಂಬುವವರು ಆಸ್ಪತ್ರೆಗೆ ಸೇರಿದ್ದಾರೆ.
ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ದಂಪತಿ
ಚೇತನ್ ಹಾಗೂ ಸುಷ್ಮಾ ದಂಪತಿ ತುಮಕೂರು ನಿವಾಸಿಗಳು. ಮೂಲತಃ ತುಮಕೂರಿನ ನಿವಾಸಿ ಚೇತನ್, ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ತುಮಕೂರಿನಲ್ಲಿರುವ ಚೇತನ್ ತಾಯಿ ಅನಾರೋಗ್ಯವಾಗಿತ್ತು. ಹೀಗಾಗಿ ರಾತ್ರಿಯೇ ಪತ್ನಿ ಸಮೇತ KA 06 C 5275 ಕಾರಿನಲ್ಲಿ ತುಮಕೂರು ಕಡೆ ಹೊರಟಿದ್ದಾಗ ಗಾಜನೂರು ನಾಲೆ ಬಳಿ ಅಪಘಾತವಾಗಿತ್ತು.
ಗಂಡ ಹೆಂಡತಿ ಇಬ್ಬರೂ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯೆ ಹಾವೊಂದು ಎದುರಾಗಿದೆ. ಇನ್ನೇನು ಹಾವಿನ ಮೇಲೆ ಕಾರು ಹತ್ತಿಸಬೇಕು, ಅಷ್ಟರಲ್ಲಿ ಚೇತನ್ ವಿಚಲಿತರಾಗಿದ್ದಾರೆ. ಹಾವನ್ನು ತಪ್ಪಿಸಿ, ಕಾರನ್ನು ಸೈಡಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಕಾರು ತುಂಗಾ ನಾಲೆಗೆ ಬಿದ್ದು ಬಿಟ್ಟಿತ್ತು.
ನೀರಿನಲ್ಲಿ ಉಸಿರುಗಟ್ಟಿ ಪತ್ನಿ ದುರ್ಮರಣ
ನಾಲೆಗೆ ಬೀಳುತ್ತಿದ್ದಂತೆ ಇಡೀ ಕಾರು ಮುಳುಗಿ ಹೋಗಿದೆ. ಚೇತನ್ ಹೇಗೋ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ. ಆದರೆ ಪತ್ನಿ ಸುಷ್ಮಾ ಕಾರಿನಲ್ಲೇ ಸಿಲುಕಿ ಕೊಂಡಿದ್ದರು. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆ ಸುಷ್ಮಾ ಸಹ ನೀರಿನಲ್ಲಿ ಮುಳುಗಿದ್ದಾರೆ. ಅದೆಷ್ಟೇ ಪ್ರಯತ್ನಿಸಿದರೂ ಹೊರಕ್ಕೆ ಬರಲಾಗದೇ ಉಸಿರು ಕಟ್ಟಿ ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ