Vande Bharat: ವಂದೇ ಭಾರತ್ ರೈಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ರೈಲ್ವೆ ಇಲಾಖೆ ಕದ ತಟ್ಟಿದ 60 ಸಂಸದರು!
Vande Bharat: ವಂದೇ ಭಾರತ್ ರೈಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ರೈಲ್ವೆ ಇಲಾಖೆ ಕದ ತಟ್ಟಿದ 60 ಸಂಸದರು!
ಸಾಂದರ್ಭಿಕ ಚಿತ್ರ
ದೇಶದಲ್ಲಿ ವಂದೇ ಭಾರತ್ ರೈಲು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 10 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ. ಇದೀಗ ತಮ್ಮ ರಾಜ್ಯಕ್ಕೆ ವಂದೇ ಭಾರತ್ ರೈಲುಗಳನ್ನು ನೀಡುವಂತೆ ರೈಲ್ವೆ ಇಲಾಖೆಗೆ 60 ಸಂಸದರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎನ್ಡಿಎಯೇತರ ಪಕ್ಷಗಳ 14 ಸಂಸದರು ಸೇರಿದಂತೆ ಒಟ್ಟು 60 ಸಂಸದರು ತಮ್ಮ ರಾಜ್ಯಗಳಲ್ಲಿ ವಂದೇ ಭಾರತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆಗೆ ಮನವಿ ಮಾಡಿದ್ದಾರೆ.
ದೇಶದಲ್ಲಿ ವಂದೇ ಭಾರತ್ ರೈಲಿಗೆ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 10 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ.
ಇದೀಗ ತಮ್ಮ ರಾಜ್ಯಕ್ಕೆ ವಂದೇ ಭಾರತ್ ರೈಲುಗಳನ್ನು ನೀಡುವಂತೆ ರೈಲ್ವೆ ಇಲಾಖೆಗೆ 60 ಸಂಸದರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎನ್ಡಿಎಯೇತರ ಪಕ್ಷಗಳ 14 ಸಂಸದರು ಸೇರಿದಂತೆ ಒಟ್ಟು 60 ಸಂಸದರು ತಮ್ಮ ರಾಜ್ಯಗಳಲ್ಲಿ ವಂದೇ ಭಾರತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆಗೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಬಿಜೆಪಿ ಸಂಸದರು ವಂದೇ ಭಾರತ್ ರೈಲಿಗಾಗಿ ಮನವಿ ಸಲ್ಲಿಸಿದ್ದಾರೆ. ಫಡ್ನವೀಸ್ ಸೊಲ್ಲಾಪುರ ಮತ್ತು ಮುಂಬೈ ಮಾರ್ಗಕ್ಕೆ ವಂದೇ ಭಾರತ್ ರೈಲನ್ನು ಕೇಳಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೆ 3 ಮಾರ್ಗಗಳಲ್ಲಿ ವಂದೇ ಭಾರತ್ ಸಂಚರಿಸುತ್ತಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಮತ್ತು ಗ್ವಾಲಿಯರ್ಗೆ ರೈಲುಗಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಮನವಿ ಮಾಡಿದ್ದಾರೆ.
ಎನ್ಸಿಪಿ, ಡಿಎಂಕೆ, ಎಸ್ಪಿ, ಎಎಪಿ, ಕಾಂಗ್ರೆಸ್, ಸಿಪಿಎಂ, ವೈಎಸ್ಆರ್ಸಿಪಿ, ಅಪ್ನಾ ದಳ ಮತ್ತು ಶಿವಸೇನಾ ಸಂಸದರು ಕೂಡ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10 ವಂದೇ ಭಾರತ್ ರೈಲುಗಳಲ್ಲಿ, ಬಿಲಾಸ್ಪುರ-ನಾಗ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ಈ ಹಣಕಾಸು ವರ್ಷದ ಜನವರಿವರೆಗೆ ಕಡಿಮೆ ಪ್ರಯಾಣಿಕರನ್ನು ಹೊಂದಿದೆ. ಆದರೆ ಮುಂಬೈ-ಗಾಂಧಿನಗರ ಮಾರ್ಗವು ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಮಾರ್ಗ ಎಂದು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಬಿಲಾಸ್ಪುರ್-ನಾಗ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ಶೇಕಡಾ 55 ರಷ್ಟು ಆಕ್ಯುಪೆನ್ಸಿ ದರವನ್ನು ಹೊಂದಿದ್ದರೆ, ಮುಂಬೈ ಮತ್ತು ಗಾಂಧಿನಗರ ನಡುವೆ ಓಡುವ ರೈಲು ಶೇಕಡಾ 126 ರಷ್ಟು ಆಕ್ಯುಪೆನ್ಸಿ ದರವನ್ನು ದಾಖಲಿಸಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
Published by:Rajesha M B
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ